ಪುಟ:ಕಂಬನಿ-ಗೌರಮ್ಮ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಿಕೆ

ಈ ಕಥಾಸಂಗ್ರಹದ ಯೋಜನೆಯು ಶ್ರೀಮತಿ ಗೌರಮ್ಮನವರು ಇರುವಾಗಲೆ ಆಗಿತ್ತು. ಮುನ್ನುಡಿಗಾಗಿ ಹಾಗೂ ಉಳಿದ ಎರಡು ಮಾತುಗಳಿಗಾಗಿ ಅಂದು ಗೌರಮ್ಮನವರೇ ಬರೆದುಕೊಟ್ಟ 'ಮೂರು ಮಾತು' ಗಳನ್ನು ಬೇರೆಯಾಗಿ ಪ್ರಕಟಿಸಿದ್ದೇವೆ.

ಶ್ರೀಮತಿ ಗೌರಮ್ಮನವರ ಅಪೇಕ್ಷೆಯಂತೆ ನಮ್ಮ ಬಿನ್ನಹವನ್ನು ಮನ್ನಿಸಿ ಶ್ರೀ. ಬೇಂದ್ರೆಯವರು ಮುನ್ನುಡಿಯನ್ನು ಬರೆದು ಕೊಟ್ಟಿದ್ದಾರೆ. ಅದರೊಂದಿಗೆ 'ತಂಗಿ ಗೌರಮ್ಮ' ಎಂಬ ಕವನವನ್ನೂ ದಯಪಾಲಿಸಿದ್ದಾರೆ. ಇವುಗಳಿಗಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುವೆ.

ನಮ್ಮ ಮಿತ್ರರೂ ದಿವಂಗತ ಸೌ! ಗೌರಮ್ಮನವರ ಪತಿಗಳೂ ಆದ ಶ್ರೀಮಾನ್ ಬಿ. ಟಿ. ಗೋಪಾಲಕೃಷ್ಣರಾಯರು ಈ ಪುಸ್ತಕ ಪ್ರಕಾಶನಕ್ಕೆ ತಮ್ಮ ಸ್ನೇಹದ ಬೆಂಬಲವನ್ನೂ ಕತೆ, ಚಿತ್ರ ಮೊದಲಾದ ಅನುಕೂಲತೆಗಳನ್ನೂ ಒದಗಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ನಾವು ಅಭಿನಂದಿಸುತ್ತೇವೆ.

ಪ್ರಕಾಶಕರು