ಈ ಪುಟವನ್ನು ಪ್ರಕಟಿಸಲಾಗಿದೆ
ಮೂರು ಮಾತುಗಳು
ಈ ಸಂಗ್ರಹದಲ್ಲಿಯ ಕೆಲವು ಕತೆಗಳು ಈ ಮೊದಲು 'ಜಯ ಕರ್ನಾಟಕ' ರಾಷ್ಟ್ರ ಬಂಧು' 'ಜಯಂತಿ' ಈ ಪತ್ರಿಕೆಗಳಲ್ಲಿಯ ಮರು ಕತೆಗಳು 'ಮಧುವನ' 'ಕೆಲವು ನೀಳತೆಗಳು ? ಮತ್ತು 'ರಂಗವಲ್ಲಿ' ಎಂಬ ಕಥಾಸಂಗ್ರಹಗಳಲ್ಲಿಯೂ ಪ್ರಕಟವಾಗಿವೆ. ಮೇಲಿನ ಎಲ್ಲ ಸಂಘದಕರಿಗೂ ನಾನು ವಂದನೆಗಳನ್ನು ಅರ್ಪಿಸುತ್ತೇನೆ.
ನನ್ನ ' ಸುಳ್ಳುಸ್ವಪ್ನ' ವೆಂದು ಮೊದಲು ಪ್ರಕಟವಾದ ಕತೆಯನ್ನು ಒಬ್ಬ ಮಹನೀಯರು 'ಪ್ರಜಾಮತದ' ೪-೧೨-೩೮ ರ ಸಂಚಿಕೆಯಲ್ಲೂ 'ಸನ್ಯಾಸಿರತ್ನ' ಎಂಬ ಕತೆಯನ್ನು ಇನ್ನೊಬ್ಬ ಮಹಾನುಭಾವರು 'ರಾಷ್ಟ್ರ ಬಂಧು'ವಿನ ೧೭-೫-೩೬ರ ಸಂಚಿಕೆಯಲ್ಲಿ ಎತ್ತಿ ತಮ್ಮದಾಗಿ ಪ್ರಕಟಿಸಿದ್ದಾರೆ. ಇದಕ್ಕಾಗಿ ನಾನು ತುಂಬ ವಿಷಾದಿಸುತ್ತೇನೆ,
ಈ ಸಂಗ್ರಹಕ್ಕೆ ಒಂದು ಅಮೂಲ್ಯವಾದ ಮುನ್ನುಡಿಯನ್ನು ಬರೆದುಕೊಟ್ಟುದಕ್ಕಾಗಿ ಸನ್ಮಾನ್ಯರಾದ ಶ್ರೀ, ಬೇಂದ್ರೆಯವರಿಗೆ ನಾನು ಚಿರಋಣಿಯಾಗಿದ್ದೇನೆ.
ಶುಂಠಿಕೊಪ್ಪ
೧೫-೨-೩೯
ಮಿಸೆಸ್ ಬಿ. ಟಿ. ಜಿ. ಕೃಷ್ಣ