ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 95 ನೋಡಿ ಗುರುಗುಟ್ಟಿ ಸಕಲ ವಿಧವಾದ ಆಯುಧಗಳಿಂದ ಹೊಡೆದಾಗ ಅವುಗಳೆಲ್ಲಾ ಆತನ ವಜ್ರಸಮಾನವಾದ ಶರೀರಕ್ಕೆ ತಗುಲಿ ತಗುಲಿ ಮುರಿಮುರಿದು ತುಮುರು ತುಮುರಾಗಿ ಭೂಮಿಗೆ ಬೀಳುತ್ತಿದ್ದುವೇ ಹೊರತು ಆತನಿಗೆ ಸ್ವಲ್ಪವಾದರೂ ಗಾಯ ಮಾಡಿ ಬಾಧೆಯನ್ನು ೦ಟುಮಾಡಲಾರದೆ ಇರುವುದನ್ನೂ ಆತನು ತನ್ನ ಚತುರಂಗಬಲದ ಮೇಲೆ ನೆಗೆದು ಬಾಲದಿಂದ ಬಡಿದು ಬೆರಳುಗಳಿಂದ ತಿವಿದು ಉಗುರುಗಳಿಂದ ಪರಚಿ ಕಚ್ಚಿ ಒದೆದು ಕ್ರಮವಾಗಿ ಕೊಲ್ಲುತ್ತಾ ಬರುತ್ತಿರುವುದನ್ನೂ ನೋಡಿ ಇಂದ್ರಜಿತ್ತು ವಿಪರೀತಕೋಪಕ೦ಪಿತಾಧರನಾಗಿ ಸಕಲವಾದ ದೇವತಾಮಂತ್ರಾಸ್ತ್ರಗಳನ್ನೂ ತೆಗೆದು ಕೊಂಡು ಆತನ ಮೇಲೆ ಪ್ರಯೋಗಿಸಿದಾಗ ಆತನಿಗೇನೂ ನೋವುಂಟಾಗದಿದ್ದ ಕಾ ರಣ ಆಶ್ಚರ್ಯಚಕಿತಮನಸ್ಕನಾಗಿ ಕಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಆಗ ಹನುಮಂತನು ಬ್ರಹ್ಮಾಂಡಕಟಾಹವು ಬಿರಿವುದೋ ? ಜಗದ ಜೀವಿಗಳ ಜನ್ಮವನ್ನು ತೊಡೆವುದೋ ಎಂಬ ಭ್ರಾಂತಿಯನ್ನು ಹುಟ್ಟಿಸುತ್ತ ಬರುತ್ತಿರುವ ಸರೋಜಸಂಭವಾ ಸ್ವವನ್ನು ನಿರೀಕ್ಷಿಸಿ ಭಯಪಟ್ಟವನಾದರೂ ಮೊದಲು ಸಾರದೆಯಾಣ್ಮನು ಇದರಿಂದಲೂ ಮರಣವುಂಟಾಗದಂತೆ ತನಗೆ ವರವನ್ನಿತ್ತಿರುವುದನ್ನು ನೆನೆದು ಧೈರ್ಯವುಳ್ಳವನಾಗಿ ನಿಶಾಚರಚಕ್ರವರ್ತಿಯಾದ ರಾವಣನನ್ನು ಕಂಡು ಶ್ರೀರಾಮನೆಡೆಗೆದುವುದಕ್ಕೆ ಇದೇ ಸಮಯವೆಂದು ನಿಶ್ಚಯಿಸಿ ಮೈ ಮೇಲೆ ಬಂದ ಅಸ್ತ್ರಕ್ಕೆ ವಶನಾಗಿ ಮರ್ಛಗೊಂಡವ ನಂತೆ ನಿಶ್ಲೇಷ್ಟತೆಯನ್ನು ಹೊಂದಿ ಭೂಮಿಯಲ್ಲಿ ಬಿದ್ದನು. ಆಗ ಇಂದ್ರಜಿತ್ತು ಕಳೆ ದುಳಿದ ಬಲದೊಡನೆ ಕೂಡಿ ಆತನನ್ನು ಹಿಡಿದು ತೆಗೆದುಕೊಂಡು ರಾವಣನ ಓಲಗದ ಚಾವಡಿಗೆ ಬಂದು ಸಿಂಹಾಸನಾರೂಢನಾಗಿರುವ ರಾವಣನ ಮುಂದಿಳಿಸಲು ಅಷ್ಟು ಹೊತ್ತಿನಲ್ಲಿ ಆ ಹನುಮಂತನು ಎಚ್ಚೆತ್ತು ರಾವಣನೆದುರಿನಲ್ಲಿ ತನ್ನ ಬಾಲವನ್ನು ಅತಿ ದೀರ್ಘವಾಗಿ ಬೆಳಿಸಿ ಸಿವುಡಿನಂತೆ ಸುತ್ತಿದುದರಿಂದ ರಾವಣನ ಸಿಂಹಾಸನಕ್ಕಿಂತಲೂ ದ್ವಿಗುಣೋನ್ನತವಾದ ತನ್ನ ವಾಲಸಿಂಹಾಸನದ ಮೇಲೆ ಬಿಂಕದಿಂದ ಕೂತು ಕೊಂಡನು. ಆಗ ರಾವಣನ ಮುಖ್ಯಮಂತ್ರಿಯಾದ ಪ್ರಹಸನು - ಆಂಜನೇಯನ ಬಳಿಗೆ ಬಂದು-ನೀನು ಯಾರು ? ನಿನ್ನನ್ನು ಇಲ್ಲಿಗೆ ಯಾರು ಕಳುಹಿಸಿದರು ? ರಾಜಾಜ್ಞೆಯಿ ಲ್ಲದೆ ನಮ್ಮ ಪಟ್ಟಣಕ್ಕೆ ಏನು ಉದ್ದೇಶದಿಂದ ಬಂದಿ ? ಸರ್ವಲೋಕರಮ್ಮ ವಾದ ನಮ್ಮ ಅಶೋಕವನವನ್ನು ಯಾಕೆ ಮುರಿದಿ ? ನಮ್ಮ ರಾಕ್ಷಸನಾಯಕರನ್ನು ಕೊಲ್ಲು ವುದಕ್ಕೆ ನಿಮಿತ್ತ ವೇನು ? ಎಂದು ಕೇಳಲು ಹನುಮಂತನು ಪ್ರಹಸನನ್ನು ಕುರಿತು ಎಲೈ ರಾಕ್ಷಸನೇ ! ನೀನು ಯಾರೆಂದು ನನ್ನನ್ನು ಕೇಳುತ್ತಿರುವಿಯಾ ? ಹೇಳುತ್ತೇನೆ ಕೇಳು. ನಾನು ನಿನ್ನೊಡೆಯನಾದ ಈ ರಾವಣನನ್ನು ಯುದ್ಧರಂಗದಲ್ಲಿ ಲೀಲಾಮಾ ತ್ರದಿಂದ ಜಯಿಸಿ ಕೈ ಕಾಲುಗಳಿಗೆ ಚಿನ್ನದ ಸಂಕೋಲೆಗಳನ್ನು ಹಾಕಿಸಿ ಒಂದು ಸಹಸ್ರ ಸಂವತ್ಸರಗಳ ವರೆಗೂ ಕಾರಾಗೃದದಲ್ಲಿಟ್ಟಿದ್ದ ಸಾವಿರ ತೋಳುಗಳುಳ್ಳ ಕಾರ್ತವೀ ರ್ಯಾರ್ಜುನನನ್ನು ಕೊಡಲಿಯಿಂದ ಕಡಿದು ಕೊಂದ ಪರಶುರಾಮನನ್ನು ಜಯಿಸಿದವ ನಾಗಿಯೂ ಈ ರಾವಣನು ಯಾವ ಮಹಾ ವೀರನಾದ ವಾಲಿಯ ಕಂಕುಳಲ್ಲಿ ಸಿಕ್ಕಿ ಕೊಂಡು ನರಳಿ ನಾಯಾಗಿ ಭಯದಿಂದ ಆತನೊಡನೆ ಅಗ್ನಿ ಸಾಕ್ಷಿಯಾಗಿ ಸ್ನೇಹವನ್ನು