ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 101 ಆತುರವು ನನ್ನನ್ನು ಪೀಡಿಸುತ್ತಿದೆ. ನೀನು ಇನ್ನು ಮೇಲೆ ಈ ಭಾಗದಲ್ಲಿ ಏನು ಯೋಚನೆಯನ್ನು ಮಾಡಿರುವಿ? ಅದನ್ನು ತಿಳಿಸು ಎಂದು ಕೇಳಲು ಸುಗ್ರೀವನು ಎದ್ದು ಕೈಮುಗಿದು ನಿಂತು-ಜೀಯಾ ! ನಿನ್ನ ಅಮಾನುಷ ಪರಾಕ್ರಮಕ್ಕೆ ಈ ಬ್ರಹ್ಮಾಂಡವೇ ವಶವರ್ತಿಯಾಗುವುದು. ಪಟ್ಟಣವನ್ನು ನುಂಗುವವನಿಗೆ ಕದವು ಹಪ್ಪ ಇವು ಎಂಬ ಗಾದೆಗನುಸಾರವಾಗಿ ಈ ಚತುರ್ದಶಭುವನಂಗಳನ್ನು ಏಕಕಾಲದಲ್ಲಿ ಸಂಹರಿಸುವುದಕ್ಕೆ ಶಕ್ತನಾದ ನಿನಗೆ ಈ ಅಲ್ಪಜೀವಿಯಾದ ರಾವಣನು ಎಷ್ಟು ಮಾತ್ರದ ವನು ? ಅಲ್ಲದೆ ನಿನ್ನ ದಯೆಯಿಂದ ಇಲ್ಲಿರುವ ಕಪಿವೀರರೂ ಮಹಾಪರಾಕ್ರಮಶಾಲಿ ಗಳಾಗಿದ್ದಾರೆ. ನಿನ್ನ ಅಪ್ಪಣೆಯಾದರೆ ಮೂರೇ ದಿನಗಳಲ್ಲಿ ಬೆಟ್ಟ ಗಳಿಂದಲೂ ಗುಡ್ಡಗಳಿಂ ದಲೂ ಅನೇಕವಾದ ವೃಕ್ಷಗಳಿಂದಲೂ ಕಡಲನ್ನು ಮುಚ್ಚಿ ಪ್ರಯಾಣಕ್ಕೆ ಅನುಕೂಲ ವಾದ ಮಾರ್ಗವನ್ನು ಮಾಡಿಸುವೆನು. ಆ ಮೇಲೆ ನೀನು ಲಕ್ಷ್ಮಣನೊಡನೆ ಕೂಡಿ ಈ ಕಪಿಸೇನಾಸಮೇತನಾಗಿ ಲಂಕೆಗೆ ಹೋಗಿ ದುಷ್ಟನಾದ ರಾವಣನನ್ನು ಸಂಹರಿಸಬಹುದು. ಈಗ ಸಮಸ್ತ ಕಪಿವೀರರೊಡನೆ ಕೂಡಿದ ನಾನು ನಿನ್ನ ಕಾರ್ಯದಲ್ಲಿ ಬದ್ಧ ಕಂಕಣ ನಾಗಿ ನಿಂತು ನಮ್ಮ ನಮ್ಮ ಪ್ರಾಣಗಳನ್ನು ಹುಲ್ಲಿಗಿಂತಲೂ ಕಡೆಯಾಗಿ ಎಣಿಸುವವ ರಾಗಿದ್ದೇವೆ. ಇದೊ, ಈ ಅಗ್ನಿ ಯ ಮಗನಾದ ನೀಲನೆಂಬ ವಾನರೋತ್ತಮನು ಮಹಾಸಮರ್ಥನಾಗಿಯ ಯುಕ್ತಾಯುಕ್ತ ವಿಚಾರತತ್ಪರನಾಗಿಯೂ ಇರುವುದರಿಂದ ಈತನು ಸಕಲ ಕಪಿಬಲಕ್ಕೂ ಯಜಮಾನನಾಗಿರುವಂತೆ ಈತನಿಗೆ ಪಟ್ಟಾಭಿಷೇಕವನ್ನು ಮಾಡಿಸಬೇಕು. ಜಾಂಬವಂತನು ಮುದುಕನಾಗಿಯ ಅನುಭವಶಾಲಿಯಾಗಿಯ ಸಕಲ ರಾಜನೀತಿಗಳನ್ನು ತಿಳಿದವನಾಗಿಯ ಸದಸದ್ವಿಚಾರವನ್ನು ಬಲ್ಲವನಾಗಿಯ ಇರುವುದರಿಂದ ಈತನನ್ನು ಮಂತ್ರಾಲೋಚನೆಗೆ ಇರಿಸಿಕೊಳ್ಳಬೇಕು. ವಾಲಿಯ ಮಗ ನಾದ ಅಂಗದನು ಯುವರಾಜನಾಗಿಯೂ ಮಹಾಬಲಶಾಲಿಯಾಗಿಯೂ ಇರುವುದ ರಿಂದ ಆತನನ್ನು ನಮ್ಮ ಸರ್ವಕಪಿಸೇನೆಗಳ ಮೇಲೆ ವಿಚಾರಣೆಯನ್ನು ಮಾಡಿಕೊಂಡು ಕಾಪಾಡುವ ಕಾರ್ಯದಲ್ಲಿ ನಿಲ್ಲಿಸಬೇಕು. ಪರಾಕ್ರಮ ದಲ್ಲಿ ರುದ್ರನಿಗೆ ಸಮಾನನಾದ ಆಂಜನೇಯನನ್ನು ನಿಮ್ಮ ಮೈಗಾವಲಿಗೂ ಸೇವೆಗೂ ನೇಮಿಸಿಕೊಳ್ಳಬೇಕು ಎಂದು ವಿಜ್ಞಾಪಿಸಲು ಆಗ ಶ್ರೀರಾಮಚಂದ್ರನು ಸಂತೋಷದಿಂದ ಆ ಮಾತಿಗೊಪ್ಪಿ ಅಂಗದ ಜಾಂಬವಂತ ಹನುಮಂತ ಇವರನ್ನು ಆಯಾ ಕಾರ್ಯಗಳಲ್ಲಿ ಅಧ್ಯಕ್ಷರಾಗಿರುವಂತೆ ನೇಮಿಸಿ ಸುಲಗ್ನದಲ್ಲಿ ಅಗ್ನಿ ಕುಮಾರನಾದ ನೀಲನನ್ನು ಪೀಠದ ಮೇಲೆ ಕುಳ್ಳಿರಿಸಿ ಚತುಸ್ಸಮುದ್ರೋದಕಗಳಿಂದಲೂ ಗಂಗಾದಿ ಸಕಲ ಪುಣ್ಯನದೀ ಜಲಗಳಿಂದಲೂ ದಿವ್ಯ ಷಧಿಗಳ ರಸಗಳಿಂದಲೂ ಅಭಿಷೇಕವನ್ನು ಮಾಡಿ ದಳಪತಿಪಟ್ಟ ವನ್ನು ಕಟ್ಟಿಸಿದನು. ಆಗ ಸಕಲ ಕಪಿಸೇನಾಪತಿಗಳೂ ಬಂದು ಬಂದು ನೀಲನನ್ನು ಕಾಣಿಸಿಕೊಂಡು ಪುಷ್ಪ ಫಲಗಳನ್ನು ಕೈಗಾಣಿಕೆಯಾಗಿ ಕೊಟ್ಟು ಕೈ ಮುಗಿದರು. ಆ ಮೇಲೆ ನೀಲನೆದ್ದು ರಾಮ ಲಕ್ಷ್ಮಣ ಸುಗ್ರೀವ ಜಾಂಬವಂತರಿಗೆ ನಮಸ್ಕಾರವನ್ನು ಮಾಡಿ ಸಕ: ಕಪಿ ಸೇನಾಪತಿತ್ವವನ್ನು ಹೊಂದಿ ತನ್ನ ತಂದೆಯಾದ ಅಗ್ನಿಯಂತೆ ತೇಜಸ್ಸಂಪನ್ನನಾಗಿ ರಾರಾಜಿಸಿದನು.