ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 109 ಸಕಲ ವೇದಶಾಸ್ತ್ರಗಳನ್ನೂ ಸಕಲ •ರಾಜನೀತಿಗಳನ್ನೂ ತಿಳಿದವನೇ ಹೊರತು ಮೂಢ ನಲ್ಲ, ವಿರೋಧಿಗಳು ತನ್ನ ಮೇಲೆ ದಂಡೆತ್ತಿ ಬಂದಿರುವ ಇಂಥ ಸಮಯದಲ್ಲಿ ಸಕಲ ಮರ್ಮಗಳನ್ನು ತಿಳಿದವನಾಗಿಯೂ ಅಪ್ರತಿಮ ವೀರನಾಗಿಯೂ ತನ್ನ ತಮ್ಮನಾ ಗಿಯೂ ಇರುವ ಇವನನ್ನು ಇಲ್ಲಿಗಟ್ಟುವುದು ನಿಶ್ಚಯವೆಂದು ನಂಬುವುದು ಹೇಗೆ ? ಅಣ್ಣನು ವಿರೋಧಿಯಾಗಿದ್ದರೆ ಇವನು ಇಷ್ಟು ದಿನಗಳ ಪರ್ಯ೦ತರವೂ ಅವನಿಗೆ ವಿಧೇಯನಾಗಿದ್ದು ಈ ವೇಳೆಯಲ್ಲಿ ಮಾತ್ರ ನಮ್ಮ ಬಳಿಗೆ ಬರುವುದುಂಟೇ ? ನನ್ನ ಬುದ್ದಿಗೆ ಇದೇನೋ ಒಂದು ಕಪಟಯುಕ್ಕಿಯಾಗಿ ಕಾಣುತ್ತದೆ. ಪೂರ್ವದಲ್ಲಿ ಹುಲಿಯು ವೇಷದಿಂದ ಹಸುಗಳ ಮಂದೆಯನ್ನು ಹೊಕ್ಕು ಅವುಗಳನ್ನು ಸಂಹರಿಸಿ ನಿರ್ಮೂಲಮಾ ಡಿದ ಹಾಗೆ ಇವನು ಬಂದು ನಮ್ಮಲ್ಲಿ ಸೇರಿ ಕಡೆಗೆ ನಮ್ಮನ್ನು ವಂಚಿಸದೆ ಬಿಡನು. ಹಿಂದೆಲ್ಲಾ ಈ ರಾಕ್ಷಸರ ಮಾಯೆಯು ನಮ್ಮನ್ನು ಆಳಾದಾಗ ಕಷ್ಟ ನಷ್ಟ ಕ್ಯ ಗುರಿಮಾಡಿರುವುದು ಅನುಭವಸಿದ್ಧವಾಗಿದೆ. ಆಗ ೮೦ರ್ತ ಇವನನ್ನು ಖಂಡಿತವಾಗಿ ಸೇರಿಸಿಕೊಳ್ಳಕೂಡದು ಎಂದು ಹೇಳಿದನು. ಅದಕ್ಕೆ ಜಗದೇಕವೀರನಾದ ಶ್ರೀರಾಮ ಪ೦ಸ, ಸುಗ್ರೀವನನ್ನು ನೋಡಿಎಲೈ ಪ್ರಿಯ ಸ್ನೇಹಿತನೇ ! ನೀನು ನಮ್ಮಲ್ಲಿರುವ ಬಾತಿಶಯದಿಂದ ಹಿತಕಾ೦ಕಿ ಯಾಗಿ ಇಂಥ ಯೋಚನೆಯನ್ನು ಹೇಳಿದುದು ಋ.ವೇ ಸರಿ. ಆದರೆ ಯುದ್ದ ರಂಗ ದಲ್ಲಿ ಇದಿರಾದವರನ್ನು ಇರಿಯುವುದೂ ಮರೆಸಿಕ್ಕವರನ್ನು ಪರಿಪಾಲಿಸುವುದೂ ಧರ್ಮವನ್ನು ಕಾಪಾಡುವುದೂ ಅಧರ್ಮವನ್ನು ನಾಶಮಾಡುವುದೂ ಅರಸುಗಳಿಗೆ ವಿಹಿತವಾದ ಧರ್ಮವು. ನಮಗೆ ಭುಜಬಲವಿಲ್ಲ ದಿದ್ದರೆ ಭಯಪಡಬೇಕು. ಕೀಳಾದ. ಬಲವುಳ್ಳವರು ನಮ್ಮೊಳಹೊಕ್ಕು ನಮಗೇನು ತಾನೆ ಮಾಡಬಲ್ಲರು ? ಕತ್ತಲೆಯು ಮಧ್ಯಾಹ್ಯಾ ದಿತ್ಯನನ್ನು ಹೇಗೆ ಜಯಿಸಲಾರದೋ ಹಾಗೆ ಕಪಟವು ಸತ್ಯವನ್ನು ಎಂದಿಗೂ ಸೋಲಿಸಲಾರದು. ಇದಲ್ಲದೆ ನಮ್ಮ ಇಕ್ಷಾಕು ವಂಶದಲ್ಲಿ ಹುಟ್ಟಿದವ ರಿಗೆ ಶರಣಾಗತರನ್ನು ರಕ್ಷಿಸುವುದೇ ಮುಖ್ಯವಾದ ಬಿರುದಾಗಿರುವುದು. ಈ ವಿಷಯ. ದಲ್ಲಿ ನಾನು ನಿನಗೆ ವಿಶೇಷವಾಗಿ ಹೇಳಬೇಕೇ ? ನೀನು ಈ ಸರ್ವ ವಿಷಯಗಳನ್ನೂ ತಿಳಿಯದವನೇ ? ತಮ್ಮ ಮರೆಹೊಕ್ಕವರನ್ನು ಕಾಪಾಡುವುದಕ್ಕಾಗಿ ತಮ್ಮ ಒಡಲನ್ನಾ ದರೂ ಈಯುವುದು ಲೋಕದಲ್ಲಿ ಉತ್ತಮ ಕ್ಷತ್ರಿಯರ ಧರ್ಮವು, ಪೂರ್ವಕಾಲದಲ್ಲಿ ಪಾರಿವಾಳದ ಹಕ್ಕಿಯು ಮಳೆಯಿಂದ ನೆನೆದು ಕಂಗೆಟ್ಟು ತನ್ನ ಮನೆಗೆ ಬಂದ ಕಿಧಾ ತನಿಗೆ ಕಟ್ಟಿಗೆಯನ್ನು ತಂದು ಅಗ್ನಿ ಯನ್ನು ಉರಿಮಾಡಿ ಅವನ ಚಳಿಯ ನಡುಕವನ್ನು ತಪ್ಪಿಸಿದುದಲ್ಲದೆ ಅವನಿಗೆ ತನ್ನ ದೇಹವನ್ನೇ ಆಹಾರಕ್ಕಾಗಿ ಕೊಟ್ಟ ಚರಿತ್ರೆಯನ್ನು ನೀನು ಕೇಳಿ ಅರಿಯೆ ಯಾ ? ಈ ಭಾಗದಲ್ಲಿ ನೀನು ಬದಲು ಯೋಚನೆಯನ್ನು ಮಾಡ ಬೇಡ. ಈ ವಿಭೀಷಣನು ಧರ್ಮಜ್ಞನಾದುದರಿಂದಲೂ ಇವನಣ್ಣನೂ ದುಷ್ಟನೂ ಆದ ರಾವಣನು ನಿಮ್ಮಣ್ಣನಾದ ವಾಲಿಯಂತೆ ದುರ್ಮಾರ್ಗಪ್ರವರ್ತಕನಾಗಿ ಪಾಪಕೃತ್ಯ ದಲ್ಲಿ ಉದ್ಯುಕ್ತನಾದುದರಿಂದಲೂ ನಾನು ವಾಲಿಯನ್ನು ಕೊಂದು ಸತ್ಪುರುಷನಾದ ನಿನಗೆ ರಾಜ್ಯಾಭಿಷೇಕವನ್ನು ಮಾಡಿದುದನ್ನು ಕೇಳಿದುದಲ್ಲದೆ ಈಗ ನಿನ್ನನ್ನು ಕಣ್ಣಾರ