ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಕಥಾಸಂಗ್ರಹ-೪ ನೆಯ ಭಾಗ ದ್ದಾಗ ಸಮುದ್ರರಾಜನು ಪ್ರಸನ್ನನಾಗಿ ಬಂದು ಮೈದೋರದಿರಲು ನಾಲ್ಕನೆಯ ದಿನ ದಲ್ಲಿ ಶ್ರೀರಾಮನು ಕಣ್ಣೆರೆದು ಮಹಾ ಕೋಪದಿಂದ ಸಮುದ್ರವನ್ನು ನೋಡಿ ಇವನು ನಮ್ಮನ್ನು ಲಕ್ಷೀಕರಿಸದಿರುವನಲ್ಲಾ, ಶಿವಶಿವಾ ! ನಾವಿವನಿಗೆ ಸದರವಾ ದೆವೇ ಎಂದು ಮತ್ತೂ ಹೆಚ್ಚಾಗಿ ರೌದ್ರಾವೇಶಿತ ಮನಸ್ಕನಾಗಿ ಮೂಗಿನ ರಂಧ್ರಗಳಲ್ಲಿ ಅತ್ಯುಷ್ಣವಾದ ಶ್ಯಾಸಗಳನ್ನು ಬಿಡುತ್ತ ಕಣ್ಣುಗಳಲ್ಲಿ ಕಾಲರುದ್ರನ ಭಾಳಲೋಚನಗಳ ಕಿಡಿಗಳಂತಿರುವ ಕಿಡಿಗಳನ್ನು ಸುರಿಸುತ್ತ ನಾವು ಇಂಥ ದುರ್ಮದಾಂಧರಲ್ಲಿ ತಾಳ್ಮೆ ಯನ್ನು ಧರಿಸುವುದು ಯುಕ್ತವಲ್ಲ. ಲೋಕದಲ್ಲಿ ಯಾವನು ಅತಿ ಮೃದುಸ್ವಭಾವಿಯಾ ಗಿರುವನೋ ಅಂಥವನು ಪವ್ರತಾದಿಗಳಿಂದಲೇ ತಿರಸ್ಕರಿಸಲ್ಪಡುವನೆಂದು ಹೇಳುವಲ್ಲಿ ಇತರರ ವಿಷಯವಾಗಿ ಹೇಳತಕ್ಕುದೇನು ಎಂದು ಲಕ್ಷಣನನ್ನು ನೋಡಿ-ಎಲೆ ತಮ್ಮನೇ ! ನನ್ನ ಬಿಲ್ಲನ್ನೂ ಮಹೋರಗನಿಗೆ ಸಮಾನವಾದ ಸರಳನ್ನೂ ಶೀಘ್ರವಾಗಿ ಕೊಡು. ಕ್ಷಣಮಾತ್ರದಲ್ಲಿ ಈ ಸಮುದ್ರವನ್ನು ಬತ್ತಿಸಿ ತಾಯ್ಕಳಲನ್ನು ಕಾಣಿಸುವೆನು. ಆ ಮೇಲೆ ನಮ್ಮ ಕಪಿಬಲವು ನಿರಾಯಾಸವಾಗಿ ಕಾಲಿನಿಂದ ನಡೆದು ಹೋಗಲಿ ಎಂದು ಧನುರ್ಬಾಣಗಳನ್ನು ತೆಗೆದುಕೊಂಡು ಬಿಲ್ಲಿಗೆ ಹೆದೆಯನ್ನೇರಿಸಿ ಅದರಲ್ಲಿ ಅಂಬನ್ನು ತೊಡಿಸಿ ಅಗ್ನಿ ಮಂತ್ರವನ್ನು ಪಠಿಸಿ ಕಿವಿವರೆಗೆ ಸೇದಿಬಿಡಲುದ್ಯುಕ್ತನಾದ ಕ್ಷಣದಲ್ಲಿಯೇ ಕಡಲೆ ಳಗೆ ಉರಿಯಿಳಿದು ತೆರೆಗಳೆಲ್ಲವೂ ಕಾಯ್ದು ಕುದಿದು ತಳಮಳಿಸುತ್ತ ಛಟಛಟ ತಿಗ ಳಿಂದ ಕೂಡಿ ತುಳುಕಿ ತೂರುತ್ತಿರುವ ತುಂತುರ್ವನಿಗಳು ಒಳಗಿರುವ ಬಡಬಾಗ್ನಿಯಿಂದ ಕಾಯು ವೋ ಎಂಬಂತೆ ಚತುರ್ದಿಕ್ಕುಗಳಲ್ಲೂ ಸುರಿಯುತ್ತ ಪ್ರಾಣಿಗಳನ್ನು ಸುಡುವು ದಕ್ರಾರಂಭಿಸಲು ಆಗ ಜಲಜಂತುಗಳೆಲ್ಲವೂ ಬೆಂದು ಕರಿಮುರಿಯಾಗಿ ತಣ್ಣೀರ್ಗಡಲು ಬಿಸಿನೀರ್ಗಡಲಾಗಲು ಕೂಡಲೆ ಹಾ ಸರಿತ್ಪತಿಯೇ ಎಂದು ಹಂಬಲಿಸುತ್ತ ಬಾಯ್ತಿಡುತ್ತ ತಲೆಗೂದಲನ್ನು ಕೆದರಿಕೊಂಡು ಗಂಗಾದಿ ಸಕಲ ನದಿಗಳೂ ಬಂದು ಸಮುದ್ರನನ್ನು ಕುರಿತು-ಎಲೈ ಪಾಪಿಯೇ ! ಅಜ್ಞಾನಿಯೇ ! ಬೇಗಹೊರಡು. ರೌದ್ರಾಕಾರವನ್ನು ಧರಿಸಿಬಂದು ಕ್ಷಣಕಾಲದಲ್ಲಿ ಸರ್ವ ಲೋಕಗಳನ್ನೂ ಸುಡಬಲ್ಲಿದನಾದ ಮಹಾವಿಷ್ಣುವಿನ ಕೋಪೋದ್ರೇಕದ ಮುಂದೆ ಅಲ್ಪನಾದ ನಿನ್ನ ಗಾಂಭೀರ್ಯವು ಏನು ಮಾಡಬಲ್ಲುದು ? ಅನ್ಯಾಯವಾಗಿ ಕೆಟ್ಟುಹೋಗಬೇಡ, ನಡೆ ಎಂದು ಬೋಧಿಸಿ ತಮ್ಮ ಗಂಡನಾದ ಸಮು ದ್ರರಾಜನನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ತಮ್ಮ ತಮ್ಮ ಕಿವಿಗಳ ಓಲೆಗಳನ್ನು ಕಳೆದು ರಾಮನ ಅಡಿದಾವರೆಗಳ ಮುಂದಿಟ್ಟು ನಮಸ್ಕರಿಸಿದರು. ಅವರೊಳಗೆ ಗಂಗೆಯು ಮುಂದೆ ಬಂದು ರಾಮನನ್ನು ಕುರಿತು-ಎಲೈ ರಘು ಪತಿಯೇ ! ದೀನದಯಾಳುವೇ ! ನಾನು ನಿನಗೆ ಮಗಳಲ್ಲವೇ ? ತಂದೆಯ ರಕ್ಷಕನೂ. ಆದ ನಿನಗೆ ವಿಧೇಯಳೂ ಪುತ್ರಿಯ ಆದ ನನ್ನಲ್ಲಿ ಇಷ್ಟು ಗಡುತನವೇಕೆ ? ನೀನು ನನ್ನ ಕೊರಳಲ್ಲಿರುವ ತಾಳಿಯ ಮೇಲಾದರೂ ದೃಷ್ಟಿಯನ್ನಿಡದೆ ಹೋಗುವುದು ಯಾವ ಧರ್ಮವು ? ಲೋಕದಲ್ಲಿ ತಂದೆಯಾದವನು ಮಗಳಿಗೆ ಮುನಿದರೆ ಬಲ್ಲವರು ನಗದಿರು ವರೇ ? ಸಾಕು, ನಿನ್ನ ಕೋಪವನ್ನು ಬಿಡು, ಶರಣಾಗತರಕ್ಷಕನೆಂಬ ಲೋಕವಿಶ್ರುತ ವಾದ ನಿನ್ನ ಬಿರುದನ್ನು ಕಾಪಾಡಿಕೋ, ಇದೋ ! ದೀನನಾಗಿ ಬಂದಿರುವ ನನ್ನ ಪತಿ