ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಕಥಾಸಂಗ್ರಹ-೪ ನೆಯ ಭಾಗ ಕಪಿನಾಯಕರ ಬಲಸಾಹಸಾದಿಗಳ ಆಧಿಕ್ಯವು ಇಷ್ಟೇ ಎಂದು ನಿರ್ಣಯಿಸಿ ಹೇಳಬಲ್ಲವರಾರುಂಟು ? ಅನಂತರದಲ್ಲಿ ಬ್ರಹ್ಮನ ಮಗನಾದ ಜಾಂಬವಂತನ ಬಲವು ಸರ್ವ ಕಪೀಶ್ವರರ ಅದ್ಭುತ ಬಲವನ್ನೂ ಮರೆಯಿಸಿತು. ಈತನು ಹಿಮಾಚಲಕ್ಕೆ ಹಾರಿ ಕಣ್ಣುಗಳ ಮೇಲಿರುವ ಜೋಲು ಕೂದಲುಗಳನ್ನು ಮೇಲಕ್ಕೆ ನೆಗಹಿ ಹಿಡಿದು ನೋಡಿ ಓಹೋ ! ನಾವು ಮುದುಕರು. ಶರೀರದಲ್ಲಿ ಬಲವಿಲ್ಲದವರು. ಇದಕ್ಕಿಂತಲೂ ದೊಡ್ಡದಾದ ಗಿರಿಯನ್ನು ಹೊರಲಾರೆವು. ಆದುದರಿಂದ ನಮಗೆ ಈ ಬಡ ಬೆಟ್ಟ ಒಂದೇ ಸಾಕು ಎಂದು ಎರಡು ಸಾವಿರ ಯೋಜನೆಗಳ ಅಗಲವೂ, ಎರಡು ಸಾವಿರ ಯೋಜನಗಳ ಮಟ್ಟವೂ ಐವತ್ತೆರಡು ಸಾವಿರಯೋಜನಗಳ ಉದ್ದವೂ ಇರುವ ಆ ಹಿಮವತ್ಪರ್ವತವನ್ನು ಕಿತ್ತು ಮೇಲಕ್ಕೆತ್ತಲು ಆ ಗಿರಿರಾಜನ ಪತ್ನಿ ಯಾದ ಮೇನ ಕೆಯು ದಿಗ್ಗನೆ ಎದ್ದು ಜಾಂಬವಂತನ ಬಳಿಗೆ ಬಂದು-ಎಲೈ ವೃದ್ದನೇ ! ನೀನು ಕೃತಾ ಕೃತ್ಯಗಳನ್ನು ತಿಳಿದ ವಿವೇಕಶಾಲಿಯಾಗಿ ಈ ಪರ್ವತವನ್ನು ಕೀಳುವು ದಕ್ಕೆ ಉಜ್ಜುಗಿಸಬಹುದೇ ? ನೀನು ಪರಾತ್ಪರನಾದ ಶಿವನ ಭಕ್ತನು. ಆ ಶಿವನ ಪಟ್ಟ ಮಹಿಷಿಯಾದ ಪಾರ್ವತಿಯು ನನ್ನ ಮಗಳು. ಸಕಲವನ್ನೂ ತಿಳಿದು ಪ್ರೌಢನಾಗಿ ರುವ ನಿನಗೆ ನಾನು ವಿಶೇಷವಾಗಿ ಹೇಳತಕ್ಕುದೇನಿದೆ ಎನ್ನಲು ಆಗ ಜಾಂಬವಂ ತನು-ನಾವು ಇದನ್ನು ಕೀಳುವುದರಿಂದ ಶಂಕರನ ಚಿತ್ರಕ್ಕೆ ವಿರೋಧವನ್ನು ೦ಟುಮಾ ಡಿದಂತಾಗುವುದು. ಅದು ಕಾರಣ ಈ ಕಾರ್ಯವು ಅನುಚಿತವಾದುದೆಂದೆಣಿಸಿ ಆ ಗಿರಿ ಯನ್ನು ಅಲ್ಲೇ ಬಿಟ್ಟು ಮೇನಾದೇವಿಯನ್ನು ಕುರಿತು ನೀವು ಮಹಾದೇವನಿಗೆ ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದ ಮಹಾತ್ಮರಾದುದರಿಂದ ಈ ದಿವಸ ನಿಮ್ಮ ದರ್ಶನದಿಂದ ನಾನು ಕೃತಾರ್ಥನಾದೆನು ಎಂದು ಕೈಮುಗಿದು-ನೀವು ತೆರಳಬ ಹುದೆಂದು ಆಕೆಯನ್ನು ಕಳುಹಿಸಿ ಅದರ ಸುತ್ತಣ ಗಿರಿಗಳನ್ನು ಕಿತ್ತು ತಲೆಯಮೇಲೆ ಎಂಟು ಗಿರಿಗಳನ್ನೂ ಒಂದೊಂದು ಭುಜದಲ್ಲಿ ನಾಲ್ಕರಂತೆ ಎರಡು ಭುಜಗಳಲ್ಲೂ ಎಂಟು ಬೆಟ್ಟಗಳನ್ನೂ ಎರಡು ಕಂಕುಳುಗಳಲ್ಲೂ ಎರಡೆರಡು ಪರ್ವತಗಳನ್ನೂ ಎರಡಂ ಗೈಗಳಲ್ಲೂ ಒಂದೊಂದು ಗಿರಿಯನ್ನೂ ಧರಿಸಿಕೊಂಡು ಎರಡು ಕಾಲುಗಳಿಂದಲೂ ಒಂದೊಂದು ಗಿರಿಯನ್ನೂ ಉರುಳಿಸಿಕೊಂಡು ಹೊರಟು ಬರುತ್ತಿದ್ದನು. ಆಗ ಸುರರು ಆಶ್ಚರ್ಯದಿಂದ ಸ್ತಂಭೀಭೂತರಾಗಿ ನೋಡುತ್ತ ನಿಂತರು. ಶ್ರೀರಾಮನು ವಿಸ್ಮಿತನಾಗಿ ನೋಡುತ್ತಿದ್ದನು. ಈ ಮಹಾದ್ಭುತ ಕೃತ್ಯವನ್ನು ನಳನು ದೂರದಿಂದಲೇ ನೋಡಿ ಓಡಿ ಜಾಂಬವಂತನೆದುರಿಗೆ ಬಂದು ಆತನು ತಂದ ಗಿರಿಗಳನ್ನು ಅತಿ ಭಯಭಕ್ತಿಯಿಂದ ತೆಗೆದುಕೊಂಡು ಹೊತ್ತು ಕೊಂಡು ಹೋಗಿ ಅವುಗಳನ್ನೆಲ್ಲಾ ಕಡಲಿನಲ್ಲಿ ಹುದುಗಿಸಿ ಸಂದುಸಂದುಗಳಿಗೆ ಚಿಕ್ಕ ಬೆಟ್ಟ ಗಳನ್ನು ಹವಣಿಸಿ ನೀರ್ಕೊರೆಯದಂತೆ ಇದೀರ್ಗಲ್ಲುಗಳ ಬೆಣೆಗಳನ್ನು ಹಾಕಿ ಹತ್ತು ಯೋಜನಗಳ ವರೆಗೂ ಸೇತುವನ್ನು ಕಟ್ಟಿ ದನು. ಅನಂತರ ದಲ್ಲಿ ಗವಯ ದಧೀಮುಖ ಕುಮುದ ಮೈಂದಾದಿ ಕಪೀಶ್ವರರು ತೆಗೆದುಕೊಂಡು ಬಂದು ಹಾಕಿದ ಪರ್ವತಗಳಿಂದ ಸೇತುವು ಮೂವತ್ತು ಯೋಜನಗಳ ಪರ್ಯ೦ತರವೂ ಸಾಗಿತು. ಇಲ್ಲಿಗೆ ಅರವತ್ತು ಯೋಜನಗಳ ವರೆಗೂ ಸೇತುವು ಕಟ್ಟಲ್ಪಟ್ಟು ಸಂಚಾರಕ್ಕೆ ಸಿದ್ದ