ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಕಥಾಸಂಗ್ರಹ-೪ ನೆಯ ಭಾಗ ರಾಕ್ಷಸ ಕುಲರಕ್ಷಕನೇ ! ನಮ್ಮಲ್ಲಿರುವ ಈ ಸೀತೆಯ ಗಂಡನಾದ ರಾಮನು ನಳನೆಂಬ ಕಪಿವೀರನಿಂದ ಉತ್ತರಸಮುದ್ರದಲ್ಲಿ ದಶಯೋಜನಗಳ ಅಗಲವೂ ಶತಯೋಜನಗಳ ಉದ್ದವೂ ಉಳ್ಳ ಸೇತುವನ್ನು ಕಟ್ಟಿಸಿ ಅಸಂಖ್ಯಾತಕಪಿಬಲಸಮೇತನಾಗಿ ಸಮುದ್ರ ವನ್ನು ದಾಟಿ ಬಂದು ಈ ನಮ್ಮ ಲಂಕಾದುರ್ಗದ ಒತ್ತಿನಲ್ಲಿರುವ ಸುವೇಲಾಚಲದಲ್ಲಿ ಪಾಳಯವನ್ನು ಬಿಡಿಸಿಕೊಂಡಿಳಿದಿದ್ದಾನೆ. ಆ ಕಪಿಬಲವನ್ನು ವರ್ಣಿಸಿ ಹೇಳುವುದಕ್ಕೆ ಎರಡು ಸಾವಿರ ನಾಲಿಗೆಗಳುಳ್ಳ ಆದಿಶೇಷನಂಥವರು ಎಷ್ಟು ಜನರಾದರೂ ಸಾಲದು. ಕಪಿಗಳ ಶರೀರಗಳೋ, ಮಹಾಪರ್ವತಗಳೋ ಎಂದು ಥಟ್ಟನೆ ವಿವರಿಸಿಹೇಳುವುದು ಅಸಾಧ್ಯವು. ಉಳಿದ ಸಂಗತಿಗಳನ್ನೆಲ್ಲಾ ನೀನೇ ಪ್ರತ್ಯಕ್ಷವಾಗಿ ನೋಡಿ ತಿಳಿಯಬಹು ದೆಂದು ಹೇಳಿದರು. ಆಗ ರಾವಣನು ಮನಸ್ಸಿನಲ್ಲಿ ಬಹಳವಾಗಿ ಆತಂಕಪಟ್ಟು ಕೂಡಲೆ ತನ್ನ ಸರ್ವಸೇನಾನಾಯಕನಾದ ಪ್ರಹಸ್ಯವನ್ನು ಅನೇಕ ಚತುರಂಗ ಬಲದೂಡನೆ ಲಂಕಾ ನಗರದ ಪೂರ್ವದಿಗಾರದಲ್ಲಿ ಯ ದೇವಾಂತಕ ನರಾಂತಕ ತ್ರಿಶಿರ ಅತಿಕಾಯ ಕುಂಭ ನಿಕುಂಭ ಮಕರಾಕ್ಷರೇ ಮೊದಲಾದ ತನ್ನ ಮಕ್ಕಳನ್ನು ಅಪರಿಮಿತಶೂರಸೇನೆ ಯೊಡನೆ ದಕ್ಷಿಣ ದಿಕ್ಕಿನ ಹೆಬ್ಬಾಗಿಲಲ್ಲಿಯ ಶೂರಾಗ್ರೇಸರನಾದ ಇಂದ್ರಜಿತ್ತನ್ನು ಗಣನಾತೀತವಾದ ಮಹಾ ಬಲದೊಡನೆ ಲಂಕಾಪುರಿಯ ಪಡುವಣದೆಸೆಯ ಬಾಗಿಲಿ ನಲ್ಲಿ ಯ ಎಚ್ಚರಿಕೆಯಿಂದಿರುವಂತೆ ಕಾವಲಿರಿಸಿ ತಾನು ಬಹುಜನ ರಾಕ್ಷ ಸವೀರರೊಡನೆ ಕೂಡಿ ಹೊರಟುಬಂದು ಉತ್ತರದಿಗಾರ ಪ್ರದೇಶದಲ್ಲಿ ಸನ್ನದ್ದನಾಗಿ ನಿಂತು ದೂತರನ್ನು ಕರೆದು ಬಿಟ್ಟ ಹೆಂಡತಿಯನ್ನು ಆಳುವುದಕ್ಕಾಗಿ ಕಪಿಬಲದೊಡನೆ ಬಂದಿರುವ ರಾಮ ನನ್ನು ತಡಮಾಡದೆ ಯುದ್ಧಕ್ಕೆ ಕರೆದು ತರಬೇಕೆಂದು ನೇಮಿಸಿ ಕಳುಹಿಸಲು ಅವರು ಶೀಘ್ರವಾಗಿ ರಾಮನ ಬಳಿಗೆ ಬಂದು ರಾವಣನು ಹೇಳಿದ ಸಂಗತಿಯನ್ನು ಯಥಾ ವತ್ತಾಗಿ ಹೇಳಲು ಆಗ ರಾಮನು ಒಳ್ಳೆಯದು. ಈಗಲೇ ಹೊರಟು ಬರುತ್ತಿ ದೇವೆ. ನೀವು ಹೋಗಿ ಈ ಸಂಗತಿಯನ್ನು ನಿಮ್ಮೊಡೆಯನಿಗೆ ತಿಳಿಸಿರೆಂದು ಹೇಳಿ ಕಳುಹಿಸಿ ಆ ರಾವಣನು ಲಂಕಾ ದುರ್ಗದ ಚತುರ್ದ್ಘಾರಗಳ ರಕ್ಷಣಾರ್ಥವಾಗಿ ಪ್ರಹಸ್ತಾದಿ ಗಳನ್ನು ನೇಮಿಸಿರುವ ವೃತ್ತಾಂತವನ್ನು ಶ್ರೀರಾಮನು ಕೇಳಿ ಅದಕ್ಕೆ ಪ್ರತಿಯಾಗಿ ಪ್ರಹಸ್ತನನ್ನು ಪ್ರತಿಭಟಿಸುವುದಕ್ಕೆ ತನ್ನ ಸರ್ವಸೇನಾಪತಿಯಾದ ನೀಲನನ್ನೂ ದೇವಾಂತ ಕಾದಿನಿಶಾಚರರನ್ನು ತಡೆಯುವುದಕ್ಕೆ ಯುವರಾಜನಾದ ಅಂಗದನನ್ನೂ ಇಂದ್ರಜಿತ್ತನ್ನು ಎದುರಿಸುವುದಕ್ಕಾಗಿ ಪರಾಕ್ರಮಶಾಲಿಯಾದ ಲಕ್ಷ್ಮಣನನ್ನೂ ನೇಮಿಸಿ ರಾವಣನಿಗೆ ಪ್ರತಿಯಾಗಿ ತಾನೇ ನಿಂತು ಲಂಕಾದುರ್ಗವನ್ನು ಲಗ್ಗೆ ಹತ್ತುವ ಹಾಗೆ ಸುಗ್ರೀವನಿಗೆ ಅಪ್ಪಣೆ ಕೊಡಲು ಸುಗ್ರೀವನು ಶೀಘ್ರವಾಗಿ ಸಕಲಸೇನೆಯೊಡನೆ ಕೂಡಿ ಹೊರಟು ಬಂದು ಲಂಕಾದುರ್ಗಕ್ಕೆ ಮುತ್ತಿಗೆಯನ್ನು ಹಾಕಿದನು. ಆಗ ರಾವಣನ ಅಪ್ಪಣೆಯಿಂದ ರಾಕ್ಷ ಸಬಲವು ಹೊರಟು ಬಂದು ಕಪಿಬಲದ ಮೇಲೆ ಬೀಳಲು ಕೂಡಲೆ ಕಪಿರಾಕ್ಷಸವೀರರಿಗೆ ಬಹಳ ಯುದ್ಧಗಳಾಗಿ ರಾಕ್ಷಸಪ. ತಾಕಿನಿಯಲ್ಲೂ ಕಪಿಬಲದಲ್ಲೂ ಅನೇಕ ಕಪಿರಾಕ್ಷಸವೀರರು ಮೆಡಿದರು. ಮತ್ತು ರಾಕ್ಷಸಾನೀಕಿನಿಯಲ್ಲಿ ಬಹು ಗಜಸಮುದಾಯವೂ ಅಶ್ವನಿಕರವೂ ರಥಸಂದೋಹವೂ