ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 125 Wb ವನ್ನು ಹರಿಸಿ ಅರಿವೀರನ ರಥಾಶ್ವಗಳಿಂದ ರಕ್ತವನ್ನು ಕಾರಿಸಿ ಸಕಲ ದಿಕ್ಕುಗಳಲ್ಲೂ ವ್ಯಾಪಿಸಿಕೊಂಡು ಅವನ ಛತ್ರ ಚಾಮರ ಸೀಗುರಿ ಪತಾಕೆ ಇವುಗಳನ್ನು ಕಡಿದು ಕೆಡ ಹಿದುವು. ಅದನ್ನು ನೋಡಿ ರಾವಣಯು ತಲೆಯನ್ನು ತೂಗಿ-ಅಮಮಾ !' ಈ ಧನು ರ್ವಿದ್ಯಾ ಪ್ರೌಢಿಮೆಯು ಮೂರು ಕಣ್ಣುಗಳುಳ್ಳ ಪರಮೇಶ್ವರನಿಗೂ ಇಲ್ಲ. ಈತನು. ಲೋಕದವರಂತೆ ಸಾಧಾರಣನಾದ ಮನುಜನ ಮಹಾ ವಿಷ್ಣು ವೇ ಶ್ರೀರಾಮನಾಗಿ ಹುಟ್ಟಿರುವನೆಂದು ಜನರು ಹೇಳುತ್ತಿರುವುದು ನಿಜವೇ ಸರಿ. ಹಾಗಲ್ಲ ದಿದ್ದರೆ ಲೋಕಾ ಶ ರ್ಯಕರವಾದ ಈ ಬಾಣಪ್ರಯೋಗಕೌಶಲ್ಯವು ಈತನಿಗೆತ್ತಣಿಂದ ಬರುತ್ತಿದ್ದಿತು ಎಂದು ಯೋಚಿಸುತ್ತ ತಾನು ಮೊದಲು ಶಿವನಿಂದ ಪಡೆದಿದ್ದ ಸರ್ಪಾಸ್ಯವನ್ನು ಮೂಡಿ ಗೆಯಿಂದ ತೆಗೆದು ತಿರುವಿನಲ್ಲಿ ಹೂಡಿ ಆಕರ್ಣ೦ತವಾಗಿ ಸೇದಿ ಕಾಮನ ಮೇಲೂ ರಾಮನ ಬಲದ ಮೇಲೂ ಪ್ರಯೋಗಿಸಲು ಕೂಡಲೆ ಎಂಟು ವಿಧವಾದ ಹಾವುಗಳ ತಂಡಗಳು ಕಪಿಬಲವನ್ನೂ ರಾಮಲಕ್ಷ್ಮಣರನ್ನೂ ಮುತ್ತಿಕೊಂಡು ವಿಷದಂತಗಳಿಂದ ಕಚ್ಚಿ ಕವರಿ ಗರಳಜ್ವಾಲೆಗಳಿಂದ ಕಪಿಬಲಗಳನ್ನೆಲ್ಲಾ ಮರ್ಧೆಗೊಳಿಸಿ ರಾಮಲಕ್ಷಣ ರನ್ನೂ ಕೂಡ ಮರ್ಧೆಹೊ೦ದಿಸಿದುವು. ಆ ಮೇಲೆ ಇಂದ್ರಜಿತ್ತು ಬಹು ಸಂತೋಷ ಭರಿತಮನಸ್ಕನಾಗಿ ಜಯಭೇರಿಯನ್ನು ಹೊಡಿಸಿಕೊಂಡು ಹಿಂದಿರುಗಿ ಲಂಕಾನಗರಕ್ಕೆ ಹೋಗಿ ತಂದೆಯಾದ ದಶಗಳನಿಗೆ ನಮಸ್ಕರಿಸಿ ತನ್ನ ವಿಜಯವಾರ್ತೆಯನ್ನು ಹೇಳಲು ರಾವಣನು ಸಂತೋಷವೆಂಬ ಸುಧಾಸಾಗರದಲ್ಲಿ ಮುಳುಗಿ ಇಂದ್ರಜಿತನ್ನು ತೆಗೆದು ಆಲಿಂಗಿಸಿಕೊಂಡು ಕುಲರತ್ನ ವೇ! ಮುತ್ತಿನ ಗಿಣಿಯೇ ಎಂದು ಹೊಗಳಿ ಮುತ್ತಿಟ್ಟನು. ಇತ್ಯ ಕಪಿಬಲದ ಮಧ್ಯದಲ್ಲಿ ಸುಗ್ರೀವ ನೀಲ ನಳ ಜಾಂಬವದಾ೦ಜನೇಯಾದಿ ಗಳು' ಮೂರ್ಛಿತರಾಗಿ ಬಿದ್ದಿರುವ ರಾಮಲಕ್ಷ್ಮಣರನ್ನು ನೋಡಿ ಮರುಗಿದವರಾಗಿ ಅಯ್ಯೋ, ಮಹಾನುಭಾವರೇ! ನಮ್ಮನ್ನು ನಂಬಿ ನಿಮಗೆ ಇಂಥಾದುಸ್ಥಿತಿಯು ಸಂಭವಿ ಸಿತೇ ? ಹಾ ಎಂದು ಹಂಬಲಿಸಿ ಕಣ್ಣೀರುಗಳನ್ನು ಸುರಿಸುತ್ತ ರಾಮಲಕ್ಷ್ಮಣರ ಸುತ್ತಲೂ ಕುಳಿತಿರಲು ಆಗ ಜಾಂಬವಂತನು ಸುಷೇಣನನ್ನು ನೋಡಿ-ಎಲೈ ಕಪೀಂ ದ್ರನೇ ! ನಿನಗೆ ವೈದ್ಯಶಾಸ್ತ್ರದಲ್ಲಿ ವಿಶೇಷ ಪರಿಚಯವುಂಟಲ್ಲ? ದೇವೇಂದ್ರನ ಮನೆಯ ವೈದ್ಯನಾದ ಧನ್ವಂತರಿಯು ನಿನಗೆ ತಂದೆಯಾಗಬೇಕಷ್ಟೆ. ಈ ರಾಮಲಕ್ಷ್ಮಣರನ್ನು ನೋಡು ಎನ್ನಲು ಸುಷೇಣನು ಬಂದು ರಾಮಲಕ್ಷ್ಮಣರನ್ನು ನೋಡಿ ಜಾಂಬ ವಂತನನ್ನು ಕುರಿತು-ಬಡಗಣ ದಿಕ್ಕಿನಲ್ಲಿರುವ ಮೇರುಪರ್ವತದ ಮಾರ್ಗದಲ್ಲಿ ಹರಿ ದಶ್ರವೆಂಬೊಂದು ಗಿರಿಯಿರುವುದು. ಅದರ ಶಿಖರದಲ್ಲಿ ನಾಲ್ಕು ವಿಧಗಳಾದ ಔಷಧಿ ಗಳಿರುವುವು. ಯಾರಾದರೂ ಬೇಗ ಹೋಗಿ ಅವುಗಳನ್ನು ಇಲ್ಲಿಗೆ ತೆಗೆದು ಕೊಂಡು ಬಂದರೆ ನೀವೇ ನಿಶಾಚರರ ಪಡೆಯನ್ನು ತಿಂದು ತೇಗಿದವರು. ವಿರೋಧಿಯಾದ ರಾವ ಣನನ್ನು ಕೊಂದವರು, ಮತ್ತು ಶರಣಾಗತನಾದ ವಿಭೀಷಣನಿಗೆ ಅಂಕಾರಾಜ್ಯಾಭಿ. ಷೇಕವನ್ನು ಮಾಡಿಸಿದವರು. ಇದರಲ್ಲಿ ಸಂಶಯವೇನೂ ಇಲ್ಲ ಎಂದು ಹೇಳಲು `ಕೂಡಲೆ ಹನುಮಂತನು ಆ ಲತೆಗಳನ್ನು ತರುವುದಕ್ಕಾಗಿ ಜಾಂಬವದಾದಿಗಳಿಗೆ ಸಮ