ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಕಥಾಸಂಗ್ರಹ-೪ನೆಯ ಭಾಗ ಬಡಿದರು. ಕೆಲವರು ಕಬ್ಬಿಣದ ಚಮ್ಮ ಟಿಗೆಗಳನ್ನು ತೆಗೆದುಕೊಂಡು ಬಂದು ಹೊಯ್ದರು. ಕಲ್ಲುಟಿಗರು ಉಕ್ಕಿನ ಉಳಿಗಳನ್ನು ತೆಗೆದುಕೊಂಡು ಬಂದು ಕಬ್ಬೆಟ್ಟದಂತೆ ಬಿದ್ದಿರುವ ಅವನ ಮೈ ಮೇಲಿಟ್ಟು ಕಬ್ಬಿಣದ ಕೊಡತಿಗಳಿಂದ ಕುಟ್ಟಿದರು. "ಕುಂಭಕರ್ಣನಿಗೆ ಆ ಪೆಟ್ಟುಗಳೆಲ್ಲಾ ಮಲಗುವವರ ಮೈ ತಟ್ಟಿದಂತೆ ಹಿತವಾಗಿ ಮತ್ತೂ ನಿದ್ರಾಭಾರವು ಹೆಚಾ ಯಿತು. ಆ ಮೇಲೆ ಅವನ ಕೈ ಕಾಲುಗಳ ಉಗುರು ಕಣ್ಣುಗಳಲ್ಲಿ ಉಕ್ಕಿನ ಮೊನೆ ಯಾದ ಶಲಾಕೆಗಳನ್ನು ಕಾಯಿಸಿಟ್ಟು ಕೊಡತಿಗಳಿಂದ ಜಡಿದರು. ಮತ್ತು ಗದ್ದದಲ್ಲಿ ಅಲಗುಗಳನ್ನು ಬಡಿದರು. ಸಬಳಗಳಿಂದ ಅಳ್ಳೆಗಳನ್ನು ಕುತ್ತಿದರು. ಕೋಡುಗಲ್ಲು ಗಳನ್ನು ತಂದು ಬಾಯಿಯ ಇಪ್ಪಕ್ಕಗಳಲ್ಲಿರುವ ಕೋರೆದಾಡೆಗಳನ್ನು ಬಡಿದು ಮುರಿ ದರು. ಆಗ ಬಹು ಕಾರ್ಯಾಸಕ್ತತೆಯಿಂದ ಕುಂಭಕರ್ಣಾಸುರನ ಸರ್ವಾಂಗಗಳಲ್ಲೂ ಓಡಿಯಾಡುತ್ತಿರುವ ರಾಕ್ಷಸರು ನೀಲಾಚಲದ ಮೇಲಾಡುತ್ತಿರುವ ಮೃಗಗಳಂತೆಯ ಕುಂಭಕರ್ಣನಿಗೆ ಅವರು ಮಾಡುವ ನಿರ್ಬಂಧಗಳು ಆ ಗಿರಿಯನ್ನು ಮೃಗಗಳು ಉಗುರುಗಳಿಂದ ಪರಚಿದಂತೆಯ ಗಣ್ಯವಾಗಲಿಲ್ಲ. ಆ ದಡಿಗ ರಕ್ಕಸನ ಮೂಗಿನಿಂದ ಹೊರಡುತ್ತಿದ್ದ ನಿಟ್ಟುಸಿರುಗಳ ವೈಹಾಳಿಯಲ್ಲಿ ಸಿಕ್ಕಿ ಲಕ್ಷಾಂತರ ಜನ ರಾಕ್ಷಸರು ತರಗೆಲೆಗಳಂತೆ ಆಕಾಶಮಂಡಲಕ್ಕೆ ಹಾರಿಹೋಗುತ್ತಿದ್ದರು. ಅವನ ನಿದ್ರಾಲಯ ವನ್ನು ಪ್ರವೇಶಿಸಿದ ಆಳುಗಳಲ್ಲಿ ಕೆಲವರು ಮೇಲೆ ಹಾರಿ ಭೂಮಿಯಲ್ಲಿ ಬಿದ್ದು ಪ್ರಾಣ ಗಳನ್ನು ನೀಗಿದರು. ಮತ್ತೆ ಕೆಲವರು ಆ ನಿಶಾಚರನ ಕೈಕಾಲುಗಳ ನಿಗುರಾಟದಲ್ಲಿ ಸಿಕ್ಕಿ ಹೊಸಗಲ್ಪಟ್ಟು ಹಾಳಾದರು. ತಿರಿಗಿ ರಕ್ಕಸರು ಸಾವಿರಾರು ಕಬ್ಬಿಣದ ಇಕ್ಕಳ ಗಳನ್ನು ತೆಗೆದುಕೊಂಡು ಬಂದು ಅವನ ಕಿವಿಗಳನ್ನು ಹಿಡಿದು ಕಿತ್ತರು. ಸುಣ್ಣವನ್ನೂ ಸಾಸುವೆಯನ್ನೂ ಕೊಡಿಸಿ ಅರೆದು ಅವನ ಕಣ್ಣುಗಳಲ್ಲಿ ಹಾಕಿದರು. ಆ ಮೇಲೆ ನೂರಾರು ಪೆಟ್ರಗಳ ಮೆಣಸಿನ ಕಾಯಿಗಳನ್ನು ಕುಟ್ಟಿ ಪುಡಿಮಾಡಿ ತಂದು ಅವನ ಮೂಗಿನ ರಂಧ್ರಗಳಲ್ಲಿ ಸುರಿದು ನೂಕಿದರು. ತವರಸಗಳನ್ನು ಕಾಯ್ಲಿ ಕರಗಿಸಿ ಅವನ ಮೈ ಮೇಲೆ ಚೆಲ್ಲಿದರು. ಮಗಿನ ಸೊಳ್ಳೆಗಳಲ್ಲಿ ಸುರಿದಿದ್ದ ಮೆಣಸಿನ ಕಾಯಿ ಗಳ ಪುಡಿಯು ಉಸಿರುಗಳ ತೀವ್ರಗತಿಯಿಂದ ಒಳಗೆ ಹೋಗಿ ನೆತ್ತಿಗೇರಿದುದರಿಂದ ಸೀನಲು ಅದು ಜಗದಂತ್ಯ ಮೇಘಧ್ವನಿಯಂತೆ ಹೊರಟು ಬಂದು ಅಲ್ಲಿ ನೆರೆದಿದ್ದವರನ್ನು ಹೊಯ್ಕ ಪ್ಪಳಿಸಿಕೊಂದಿತು. ಆಗ ಆ ರಾಕಸಭೂತವೇನಾದರೂ ಎದ್ದರೆ ಈ ಊರನ್ನೇ ನುಂಗದೆ ಬಿಡದು. ಎಷ್ಟೋಡಿಯಾಡುವ ಈ ಮಾರಿಯ ಕಣ್ಣೆದುರಿಗೆ ಸಿಕ್ಕಿದ ಜೀವಿಗೆ ಭೂಲೋಕದ ಋಣವು ತೀರುವುದು. ಈ ಮಾತು ನನ್ನ ಜೀವದಾಣೆ ಸತ್ಯವು ಎಂದು ಕೆಲರು ರಕ್ಕಸರು ಭಯಕಂಪಿತಶರೀರರಾಗಿ ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ಹೆಂಡಿರ ಕ್ಕಳೊಡನೆ ಹೊರಟು ತಿರಿಗಿ ನೋಡದೆ ಪರಸ್ಥಳಗಳಿಗೆ ಓಡಿದರು. ಇನ್ನು ಕೆಲವರು ತಮ್ಮ ಉತ್ಕೃಷ್ಟ ಪದಾರ್ಥಗಳನ್ನು ಒಟ್ಟುಗೂಡಿಸಿ ತೆಗೆದು ಕೊಂಡು ಓಡಿ ಕಾಡುಮುಟ್ಟಿ ದರು. ಬಲು ನಿದ್ದೆಯಿಂದ ಬಿದ್ದಿರುವ ಅವನ ಬಾಯಾಕಳಿಕೆಯಿಂದ ಸಂಭೂತವಾದ ಸುಂಟರಗಾಳಿಯು ಉತ್ತಾತಮೇಘಮಾರುತದಂತೆ ಹೊರಟು ರಾವಣನ ಓಲಗದ ಚಾವಡಿಯಲ್ಲಿ ನುಗ್ಗಿ ಅಲ್ಲಿದ್ದವರನ್ನು ಅಪ್ಪಳಿಸಿ ಕೆಡವಿತು. ಮತ್ತೆ ರಾಕ್ಷಸ