ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 129 ಜನರು ಬಂದು ಆ ಸುರವಿರೋಧಿಯ ಮೂಗಿನೊಳಗೆ ಕರಿಕೋಣಗಳ ಹಿಂಡುಗಳನ್ನು ಹೊಗಿಸಿದರು. ಆ ಮೇಲೆ ಮದಿಸಿದ ಆನೆಗಳನ್ನು ಅವನ ಮೈ ಮೇಲೆ ಬಿಟ್ಟು ತುಳಿಸಿದರು. ಆಗ ಅವನ ಸರ್ವಾಂಗಗಳಲ್ಲೂ ಸಂಚರಿಸುತ್ತಿರುವ ಆನೆಗಳು ತಲೆಗೂದಲುಗಳಲ್ಲಿರುವ ಹೇನುಗಳು ದಾರಿಯನ್ನು ಕಾಣದೆ ಅಲ್ಲೇ ಸುತ್ತುವಂತೆ ಸುತ್ತುತ್ತ ಅವನ ರೋಮಕೂ ಪಗಳಲ್ಲಿ ಬಿದ್ದು ಕೆಡೆದುವು. ಮತ್ತು ಕೆಲವು ಗಜಗಳು ಅವನ ಸೀನಿನಿಂದ ಸಿಡಿದು ಬಿದ್ದ ಸಿಂಬಳದಲ್ಲಿ ಸಿಕ್ಕಿ ಶೇಷಸಂಕಾಂತವಾದ ನೊಣಗಳಂತೆ ಮಿಡುಕುತ್ತಿದ್ದು ವು. ಆಹಾ ! ಈ ಮೊಬ್ಬಿಗನ ಮೈಕೊಬ್ಬನ್ನು ಏನು ಹೇಳುವುದು? ಮತ್ತೆ ಕೆಲವರು ಚುಕ್ಕಿ ಗುವರರು ಸಬಳಗಳನ್ನು ತಂದು ಅವನ ಬಲ್ಮಡಕೆಯಂತಿರುವ ಕಿವಿಗಳಲ್ಲಿ ಹಾಕಿ ತಿವಿ ದು ತಿರುಗಿಸಿದರು. ಅದರಿಂದ ಮುಳ್ಳುಹಂದಿಗಳ ಮುಳ್ಳುಗಳನ್ನು ತಂದು ಕಿಎಗಳಲ್ಲಿ ರುವ ಗುಗ್ಗೆಗಳನ್ನು ತೆಗೆದಂತಾಗಿ ಅವನು ಸುಖನಿದ್ರೆಗೆಯ್ದನು. ಆ ಮೇಲೆ ಗಿರಿಗಳ ನ್ನು ತಂದು ತಂದು ಅವನ ಮೈ ಮೇಲೆ ಹೇರುತ್ತಿಲು ಮೈಯ್ಯನ್ನು ತಟ್ಟಿದಂತಾಗಿ ಸುಖದಿಂದ ನಿದ್ರಿಸಿದನು. ಈ ರೀತಿಯಾಗಿ ಎಷ್ಟು ವಿಧದಿಂದ ಪ್ರಯಾಸಪಟ್ಟಾಗ ಅವನೇಳದಿರಲು ಆಗ ದನುಜರೆಲ್ಲರೂ ನಿರಾಶರಾಗಿ ರಾವಣನ ಬಳಿಗೆ ಬಂದು ಸ್ವಾಮಿ ! ಎಷ್ಟು ವಿಧವಾದ ಘೋರಕೃತ್ಯಗಳನ್ನು ಮಾಡಿದಾಗ್ಯೂ ಅವನು ಏಳಲಿಲ್ಲ. ಅದರಿಂದ ಅನೇ ಕಜನ ರಾಕ್ಷ ಸವೀರರು ಮಡಿದರು. ಅನೇಕರು ಹೆದರಿ ಓಡಿದರು. ಇನ್ನು ಮೇಲೆ ಅವ ನನ್ನು ಎಬ್ಬಿಸುವ ಉಪಾಯವು ಇನ್ನಾವುದಿರುವುದೇ ನಮಗೆ ತಿಳಿಯದು. ಅಪ್ಪಣೆ ಆಗಬೇಕು ಎಂದು ಅರಿಕೆ ಮಾಡಲು ರಾವಣನು-ಅವನಿಗೆ ವರವನ್ನು ಕೊಟ್ಟ ಬೊಮ್ಮನನ್ನು ಕರೆದುಕೊಂಡು ಬನ್ನಿರೋ, ಅವನೇ ಈ ನಿದ್ರಾಜಾಡ್ಯವನ್ನು ಪರಿಹರಿ ಸಲಿ ಎಂದು ಅಪ್ಪಣೆಯನ್ನೀಯಲು ಕೂಡಲೆ ರಾಕ್ಷಸದೂತರು ಓಡಿಹೋಗಿ ಬಿದಿಯ ನ್ನು ಕರೆತಂದು ರಕ್ಕಸರೊಡೆಯನೆದುರಿನಲ್ಲಿ ನಿಲ್ಲಿಸಿದರು. ಕಮಲಜನು ಗಡಗಡನೆ ನಡು ಗುತ್ತ ಕೈಗಳಿಂದ ಬಾಯಿಯನ್ನು ಮುಚ್ಚಿಕೊಂಡು ನನ್ನನ್ನು ಕರಿಸಿದ ಕಾರ್ಯವೇ ನೆಂದು ಕೇಳಿದುದಕ್ಕೆ ಬೇರೆ ಕೆಲಸವೇನು ? ಬೇಗ ಕುಂಭಕರ್ಣನನ್ನು ಎಬ್ಬಿಸು. ಹೋಗು ಎನ್ನಲು ಪೊಂಬೊಡೆಯನು ಕೈಗಳಿಂದ ಎದೆಯನ್ನು ಸವರಿಕೊಳ್ಳುತ್ತ ಶೀಘ್ರದಿಂ ದ ಕುಂಭಕರ್ಣನ ಬಳಿಗೆ ಬಂದು ಅವನ ಮುಸುಡಿನ ಮುಂಗಡೆಗೆ ಸುಳಿಯಲಮ್ಮದೆ ಮಂಡೆಯ ಹಿಂಗಡೆಯಲ್ಲಿ ಕುಳಿತು ಕೊಂಡು ತನ್ನ ಕಮಂಡುಲೋದಕವನ್ನು ಮಂತ್ರಿಸಿ ಅವನ ಮೂಗಿನ ಸೊಳ್ಳೆಗಳಲ್ಲಿ ಸುರಿಯಲು ಆ ಕುಂಭಕರ್ಣನು ಎಚ್ಚರವನ್ನು ಹೊಂದಿ ಬೆದರುತ್ತ ಎದ್ದು ಯಾರವರು ನನ್ನ ನಿದ್ದೆಯನ್ನು ಕೆಡಿಸಿದ ಪಾಪಿಗಳು ಎನ್ನಲು ಆ ಮಾತನ್ನು ಕೇಳಿ ಸಮಾಜದಲ್ಲಿದ್ದ ಜನವೆಲ್ಲ ಸದ್ದು ಮಾಡದೆ ಹಾರಿ ನೆಗೆದು ತೋರಿ ದ ಕಡೆಗೆ ಓಡಿಹೋಯಿತು. ಆ ಮೇಲೆ ಕುಂಭಕರ್ಣನು ಸಂಪೂರ್ಣವಾಗಿ ನಿದ್ದೆಯ ಮರವೆಯನ್ನು ಬಿಟ್ಟು ಪಟ್ಟಾಗಿ ಕುಳಿತು-ಈಗ ನನ್ನ ಹಸಿವಿಗಾಗಿ ಬ್ರಂಹ್ಮಾಂಡ ಮಂಡಲವನ್ನೇ ನುಂಗುವೆನೋ ? ಬಾಯಾರಿಕೆಗೆ ಏಳು ಕಡಲುಗಳನ್ನು ಕುಡಿಯುವೆ ನೋ ? ಹಾ ! ಏನು ಮಾಡಲಿ ಎನ್ನುತ್ತ ಮುಂಗಡೆಗೆ ನೋಡಲು ಅಷ್ಟರಲ್ಲಿ ರಾವಣ