ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಕುಂಭಕರ್ಣಸಂಹಾರ . 137 ರುರಿಯುವಂತೆ ಖಳನೆದೆಯನ್ನು ತಿವಿದನು. ಘೋರನಿಶಾಚರನು ಕಪಿಯ ಕೈ ಪೆಟ್ಟನ್ನು ಗಣಿಸುವನೇ ? ಆ ಕ್ಷಣದಲ್ಲಿಯೇ ಭೀಕರಪರಿಘಾಯುಧದಿಂದ ಅಂಜನೆಯ ಮಗ ನನ್ನು ಅಪ್ಪಳಿಸಿದನು. ಆಗ ಮರುನ್ನ೦ದನನು ಕ್ಷಣಮಾತ್ರ ಬಗೆಗುಂದಿ ಎದ್ದು ಕೋಪದಿಂದ ಆರ್ಭಟಿಸಿ ತನ್ನ ವಜೋಪಮಾಯವಾದ ಮುಷ್ಟಿಯಿಂದ ಕುಂಭ ಕರ್ಣನ ಅಳ್ಳೆಯನ್ನು ತಿವಿಯಲು ಮೊದಲು ತುಪ್ಪದಲ್ಲಿ ಅದ್ದಿ ಯದ್ದಿ ನುಂಗಿದ್ದ ಕಳಿನ ಮುದ್ದೆಗಳು ಖಳನ ಬಾಯಿಯಿಂದ ಹೊರಟು ನೆಲದಲ್ಲಿ ಬಿದ್ದುವು. ಆಗ ಕುಂಭಕರ್ಣನು ನೋಡಿ-ಅಹುದೋ ! ಕಪಿಗಳ ಗುಂಪಿನಲ್ಲಿ ನೀನೇ ಗಟ್ಟಿ ಗನು. ಪರಾಕ್ರಮದಲ್ಲಿ ನಮ್ಮ ಇಂದ್ರಜಿತ್ತನ್ನು ಹೋಲುತ್ತಿರುವಿ. ಇನ್ನೊಂದು ಸಾರಿ ನನ್ನೊಡನೆ ಯುದ್ದಕ್ಕೆ ನಿಂತರೆ ನೀನೇ ಶೂರನು ಎಂದು ಅರಿಭಯಂಕರನು ಆಯು ಧದ ಬುಡದಿಂದ ತಿವಿದು ಹಾರಿಸಲು ಆಂಜನೇಯನು ಆ ಸ್ಥಳಕ್ಕೆ ಐನೂರು ಕೋಲಳ ತೆಯಲ್ಲಿ ಬಿದ್ದನು. ಹನುಮಂತನನ್ನು ಕೊಯ್ದ- ಬಿರುಸಿಂದ ಕಾಲು ಜಾರಿ ಭೂಮಿಯಲ್ಲಿ ಬಿದ್ದ ಕುಂಭಕರ್ಣನು ಮೆಲ್ಲಗೆ ಕೈಯರಿಕೊಂಡಿದ್ದು ಮಾರುತಿಯ ಬಳಿಗೆ ಹೋಗುತ್ತಿ ರಲು ಸುಗ್ರೀವನು ಅದನ್ನು ನೋಡಿ ಆ ಕುಂಭಕರ್ಣನ ಬಳಿಗೆ ಬಂದು ನಿಂತು ಕಿಸು ಗಣ್ಣ ಅವನಂತೆಯೇ ಬೆಳೆದು ವಿಮಾನಸ್ಥರಾದ ದೇವತೆಗಳು ಹೊಗಳುವಂತೆ ಗಿರಿತರು ಗಳಿಂದ ಹೋಯ್ತು ಬೊಬ್ಬಿರಿದನು. ಆಗ ನಿಶಾಚರನು-ರಣ ಕೇಳಿಯಲ್ಲಿ ವಾಲಿಯೇ ಸಮರ್ಥನು. ಅವನ ತರುವಾಯ ನೀನೇ ಸುಭಟನು. ನಿಶ್ಚಯವೆಂದು ಬೆರಳನ್ನಾಡಿ ಸುತ್ತ ತಲೆಯನ್ನು ತೂಗುತ್ತ ಹೋಗಳುತ್ತಿರಲು ಸುಗ್ರೀವನು-ಎಲಾ ಖಳನೇ ! ಕೇಳು. ನಾನು ಕಪಿರಾಜನೆಂಬುದನ್ನು ನೀನು ಕೇಳಲಿಲ್ಲ ವೇ ? ನಾನು ರಣಕೇಳಿಯಲ್ಲಿ ಸೋತು ಹಿಮ್ಮೆಟ್ಟುವ ಭಟನೇ ಎನ್ನುತ ಸಿಡಿಲಿನಂತೆ ಗರ್ಜಿಸಿ ಬೀಳೆಂದು ಮುಷ್ಟಿ ಯಿಂದ ತಿವಿಯಲು ಕುಂಭಕರ್ಣನು ತಲ್ಲಣಿಸಿ ತಲೆಕೆಳಗಾಗಿ ನೆಲಕ್ಕೆ ಬೀಳಲು ಭೂಮಿಯು ನೂರು ಪುರುಷಪ್ರಮಾಣ ರಸಾತಲಕ್ಕಿಳಿದು ಹಳ್ಳವಾದಿತು. ಆಗ ರಾವ ಣಾನುಜನು ಚೇತರಿಸಿಕೊಂಡದ್ದು ಕೋಪದಿಂದ ಮೊರೆದು ಎಲವೋ ಕಪಿಯೇ ! ಕೇಳು. ನೀನು ನಮ್ಮ ಸಮರದಲ್ಲಿ ಈ ಮಹಾಯುಧದ ಅಲಗಿನಿಂದ ಸಾಯದೆ * ಉಳಿದೆಯಾದರೆ ನಾನು ಮಗು ಹೋದವನು. ಅದು ಕಾರಣ ಮೈ ಮರೆಯದೆ ಎಚ ರಿಕೆಯಿಂದಿರು ಎಂದು ಕ್ರೂರವಾಗಿ ನುಡಿದು ಅತಿವಿಷಮವಾದ ಮಹಾಶಕ್ತಿಯಿಂದ ಹೊಡೆಯಲು ಆಗ ಕಪಿಕಟಕವು ತಲ್ಲಣಿಸಿ ಮುಂಗಟ್ಟು ಬಗೆಗುಂದಿತು. ವಾನರವೀರ ರಲ್ಲಿ ಬಲ್ಲಿದನಾದ ಆಂಜನೇಯನ ಎಚ್ಚರಿಕೆಯೆಷ್ಟೋ ! ಮುಂದಣ ಆಲೋಚನೆಯ ಹವಣಿ೦ತಿರುವುದೆಂದು ತಿಳಿದಿದ್ದವರಾರು ? ಭೂಮ್ಯಾಕಾಶಗಳನ್ನು ಒಂದೇ ಬಾರಿಗೆ ನುಂಗಿಬಿಡುವಂತೆ ಸುಗ್ರೀವನ ಮೇಲೆ ಬರುತ್ತಿರುವ ಮಹಾಶಕ್ತಿಯನ್ನು ನೋಡಿ ನಿಮೇ ಷಮಾತ್ರದಲ್ಲಿ ಪುಟನೆಗೆದು ಹಾರಿ ಮಧ್ಯಮಾರ್ಗದಲ್ಲಿಯೇ ಅದನ್ನು ಹಿಡಿದುಕೊಂಡು ತಿರಿಗಿ ಅದನ್ನೇ ಕುಂಭಕರ್ಣನ ಮೇಲೆ ಹಾಕುವುದಕ್ಕೆ ಉದ್ಯುಕ್ತನಾಗುತ್ತಿರಲು ಆಗ ವಿಭೀಷಣನು ಮೋಸವಾಯಿತೆಂದು ಆಂಜನೇಯನ ಬಳಿಗೋಡಿಬಂದು ಅವನ ಕೈಯ