ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 139 M ಕೊಟ್ಟರು. ಆಗ ಕುಂಭಕರ್ಣನು ಮಹಾ ಗರ್ವಯುಕ್ತನಾಗಿ ಕೂತಿರಲು ಜಯ ಜಯ ನೀತಿಲತಾಕುಠಾರಾ ! ಅರಿಜಲಧರಜಂಝಾವಾರು ತಾ ! ಅಧರ್ಮಸಂಸ್ಥಾಪನಾ ಚಾರ್ಯಾ ಎಂದು ವಂದಿಮಾಗಧರು ಹೊಗಳುತ್ತಿರಲು ಅವನು ಮದ್ಯಪಾನ ದಿಂದಾದ ಮತ್ಯತೆಯ ಹೊಗಳುವಿಕೆಯಿಂದುಂಟಾದ ಗರ್ವವೂ ತಲೆಗೇರಿ ತಾನು ಯುದ್ಧರಂಗದಲ್ಲಿ ಹಿಡಿದುಕೊಂಡು ಬಂದಿರುವ ಕಪಿರಾಜನನ್ನು ಮರೆತು ಮೈತಿಳಿಯದೆ ದ್ವಿತೀಯ ನೀಲಭೂಧರದಂತೆ ಕುಳಿತನು. ಆ ವೇಳೆಯಲ್ಲಿ ಕಪೀ೦ದ್ರನು ಮೆಲ್ಲನೆ ಸಡಿಲ ವಾದ ಅವನ ಕಂಕುಳಿಂದ ಕೈಯರಿ ಹೊರಗೆ ಬಂದು ಹೆಗ್ಗತ್ತಿನಲ್ಲಿ ಕುಳಿತು ತನ್ನೆ ರಡು ಕೈಗಳಿಂದ ಆ ಖಳನ ಎರಡು ಕೊಡಗಿವಿಗಳನ್ನೂ ಹಲ್ಲುಗಳಿಂದ ಮಗನ್ನೂ ಕಿತ್ತು ತೆಗೆದು ಕೊಂಡು ಗಗನ ಮಾರ್ಗಕ್ಕೆ ಹಾರಿಬಂದು ರಣಭೂಮಿಯಲ್ಲಿಳಿದನು. ಆಗ ಇವನನ್ನು ನೋಡಿದ ಲಕ್ಷ ಣಾಂಜನೇಯರು ಪರಮ ಸಂತೋಷಭರಿತರಾಗಿ ನಡೆದ ಸಂಗತಿಯನ್ನೆಲ್ಲಾ ಕೇಳಿ ಪರಿಹಾಸ್ಯದಿಂದ ನಕ್ಕು ಸುಗ್ರೀವನನ್ನು ಹೊಗಳಿದರು. ಅನಂತರದಲ್ಲಿ ಕವಿಸಾರ್ವಭೌಮನಾದ ಸುಗ್ರೀವನು ಅವರಿಬ್ಬರೊಡನೆ ಕೂಡಿ ರಘುಕು ಲಾಂಬುಧಿ ಚಂದ್ರನಿರುವ ಸ್ಥಳಕ್ಕೆ ಬಂದು ಆತನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ವೃತ್ತಾಂತವನ್ನೆಲ್ಲಾ ತಿಳಿಸಿ ಸಂತೋಷ ಪಡಿಸಿದನು. ಅದನ್ನು ಕೇಳಿ ಕಪಿವಾಹಿನಿಯೆ ಲ್ಲವೂ ನಲಿದಾಡಿತು. ಇತ್ತಲಾ ಕುಂಭಕರ್ಣನು ಒಂದೆರಡು ಗಳಿಗೆಗಳ ವರೆಗೂ ಮತ್ತನಾಗಿದ್ದು ಅನಂತರದಲ್ಲಿ ಮೇಲೆದ್ದು ಸಂತೋಷದಿಂದ ಹೊರಟು ಅಣ್ಣನಾದ ದಶಗ್ರೀವನ ಓಲಗ ಚಾವಡಿಗೆ ಸರಸರನೆ ಬಂದು ಆತನಿಗೆ ನಮಸ್ಕರಿಸಿ ಎಲೈ ಅಗ್ರ ಜಾತನೇ ! ತೃಣಪ್ರಾಯರಾದ ಮನುಜರಿಗೆ ಸಹಾಯವನ್ನು ಮಾಡಿ ಅವರನ್ನು ನಮ್ಮೊ ಡನೆ ಜಗಳಕ್ಕೆ ಕರೆದು ಕೊಂಡು ಬಂದ ಕಷಿರಾಜನನ್ನು ಹಿಡಿದು ತಂದಿದ್ದೇನೆ. ಇದೇ ನೋಡು ಎಂದು ಕಂಕುಳನ್ನೆತ್ತಿ ಸುಗ್ರೀವನನ್ನೂ ಕಿವಿ ಮೂಗುಗಳಲ್ಲಿ ಬೆರಳಿಟ್ಟು ನೋಡಿ ಅವುಗಳನ್ನೂ ಕಾಣದೆ ರಕ್ಕಲೇಪಿತವಾದ ಬೆರಳುಗಳನ್ನು ಮಾತ್ರ ಕಂಡು ಬಲು ನಾಚಿಕೆಯೆಂಬ ಕಡಲೊಳಗೆ ಮುಳುಗಿ ಕೋಪಸಂತಪ್ತಚಿತ್ತನಾಗಿ ಘರನೆ ಹಿಂದಿರುಗಿ ಸುಡುಸುಡು. ಈ ಬದುಕು ಸಾಕು. ಎಲಾ ನೀಚ ಕಪಿಯೇ ! ಮಾನವನ್ನು ಭಂಗಿಸಿದಿಯಾ ? ಇನ್ನು ಈ ಪ್ರಾಣಗಳನ್ನು ಹಿಡಿದಿರುವುದು ಬಹಳ ಅನುಚಿತವು ಎಂದು ಅನಿವಾರ್ಯಕೊಪ ವಿಜೃಂಭಿತನಾಗಿ ಪುನಃ ಶೀಘ್ರವಾಗಿ ಜಗಳಕ್ಕೆ ಹೊರಟು ಯುದ್ಧ ಭೂಮಿಗೆ ಬಂದು ನಿಂತನು. ಆ ಕೂಡಲೆ ಕವಿಸಮ ಹವೆಲ್ಲವೂ ಬಂದು ಮಹಾ ಗಜಕ್ಕೆ ಜೇನ್ನೊಣಗಳು ಕವಿದಂತೆ ಕವಿಯಲು ಅವುಗಳನ್ನೆಲ್ಲಾ ಹೊಸಗಿ ಬಿಸುಟು ರಾಮನೆಡೆಗೆ ಬರುತ್ತಿದ್ದನು. ಆಗ ಶ್ರೀರಾಮನು ತಮ್ಮನಾದ ಲಕ್ಷ್ಮಣನನ್ನು ಕರೆದು ನಮ, ಕಪಿಬಲವು ಈ ಕರಾಳಾಕಾರಿಯಾದ ಕುಂಭಕರ್ಣನನ್ನು ನೋಡಿ ಇದು ಗುಮ್ಮನೆಂದು ಬೆದರುತ್ತಿದೆ. ಅದು ಕಾರಣ ಇವನೊಡನೆ ಯುದ್ದದ ಕೆಲಸವು ನನ ಪಾಲಿಗಾಗಲಿ. ಈ ನಿಶಾಚರಧಾರಿಯೆದುರಿಗೆ ನೂಕಿ ಸುಮ್ಮನೆ ಕಪಿಭಟರನ್ನು ಬಳಲಿ ಸಬೇಡ, ಈ ಕುಂಭಕರ್ಣನ ಸಂಗಡ ಬಂದಿರುವ ನಿಶಾಚರವಾಹಿನಿಯೊಡನೆ ಕಾದುವು ದಕ್ಕೆ ನೀನು ನಡೆ ಎಂದು ಹೇಳಿ ಹನುಮಂತನನ್ನು ಕರೆದು-ನೀನು ಲಕ್ಷ್ಮಣನಿಗೆ