ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 ಕಥಾಸಂಗ್ರಹ-೪ ನೆಯ ಭಾಗ ಸಹಾಯವಾಗಿ ಹೋಗು. ನನ್ನ ಅಂಗರಕ್ಷಣೆಗೆ ಸುಗ್ರೀವನೂ ವಿಭೀಷಣನೂ ಇರು ವರು, ತಮ್ಮ ನ ಯುದ್ಧದ ಲೇಸೂ ಹೊಲೆ ಹವೂ ನಿನ್ನನ್ನು ಸೇರಿತು ಎಂದು ಹೇಳಿ ಅವ ನನ್ನು ಲಕ್ಷ ಣನೊಡನೆ ಕಳುಹಿಸಿ ಕೊದಂಡವನ್ನು ಮೊಣಕಾಲಿಂದ ಬೊಗ್ಗಿಸಿ ಅದರ ಕೊನೆಗಳಿಗೆ ತಿರುವನ್ನು ಸಂಧಾನಿಸಿ ಹೊರಟು ಬಂದು ಕುಂಭಕರ್ಣನೆದುರಿನಲ್ಲಿ ನಿಂತು ಶಿಂಜಿನಿಯನ್ನು ಸೆಳೆದುಬಿಟ್ಟು ಧನುಷ್ಟಂಕಾರಧ್ವನಿಯನ್ನು ಮಾಡಿ ನಿಶಾಚರಬಲವನ್ನು ಕಂಪನಗೊಳಿಸಿ ಕುಂಭಕರ್ಣನನ್ನು ಯುದ್ಧಕ್ಕೆ ಕರೆದನು. ಆಗ ರಾಮನ ಬಿಲ್ಲಿನ ಹೆದ್ದ ನಿಯು ಅರೆಮಗು ಕಿವಿಗಳ ಭಟನಿಗೆ ಸಿಡಿಲು ಹೊಯ೦ತಾಗಲು ಮಾ, ಮಾ, ರಾಮನೇ ! ರಣಭೀಮನೇ ! ಭಾಪು ಎನ್ನುತ್ತ ತನ್ನ ಉಕ್ಕಿನ ಮಹಾರಥವನ್ನು ಮುಂದಕ್ಕೆ ನೂಕಿ ಬಾಣವನ್ನು ತುಡುಕಿ ಹದೆಗೆ ಸೇರಿಸಿ ರಾಮನ್ನು ಕುರಿತು- ಎಲೈ ರಾಮನೇ ? ನೀನೆಯೋ ಬನದಲ್ಲಿ ಭಾಮಿನಿಯನ್ನು ಕಳೆದು ಕೊಂಡವನು. ನೀನು ಬಹು ಪರಾಕ್ರಮಶಾಲಿಯಾಗಿದ್ದೀ, ನೀನು ನಮ್ಮ ಕುಂದದ ರಣೋತ್ಸಾಹವನ್ನು ನೋಡು ಎಂದು ಗರ್ಜಿಸಿದನು. ಆಗ ಶ್ರೀರಾಮನು ಎಲೈ ಕುಂಭಕರ್ಣನೇ ! ನೀವು ರಾಕ್ಷಸರಾಜಕುಲ ದವರು. ನಾವು ಮನುಜರಾಜಕುಲದವರು. ನಿಮಗೆ ದೇವಕುಲವು ಅಂಜುವುದು. ನಾವು ದೇವಕುಲಕ್ಕೆ ಅಂಜುವೆವು. ಹೀಗಿರುವಲ್ಲಿ ನಿಮಗೂ ನಮಗೂ ಸರಿಯೆಂದ ರೇನು ? ಆದಾಗ್ಯೂ ನೀನು ಮನುಜರಾದ ನಮ್ಮ ಯುದ್ದ ಕ್ರಮಕ್ಕೂ ಬಾಣಸಾರವನ್ನೂ ಸಂಭಾವಿಸಿ ನೋಡು ಎನ್ನುತ್ತ ಅಸಮಾನಶರವನ್ನು ಮಡಿಗೆಯಿಂದ ತೆಗೆದು ಶರಾಸನ ದಲ್ಲಿ ಹೂಡಿ ಪ್ರಯೋಗಿಸಲು ರಕ್ಕಸನದನ್ನು ಕಂಡು ಆ ಮಹಾಸ್ಯವು ತನ್ನ ಬಳಿಗೆ ಬರುವುದಕ್ಕಿಂತಲೂ ಮೊದಲೇ ಅದರ ನಿವಾರಣಾರ್ಥವಾಗಿ ಎಷ್ಟು ಸರಳುಗಳನ್ನು ಪ್ರಯೋಗಿಸಿದಾಗ ಅವುಗಳೊಂದನ್ನೂ ಗಣಿಸದೆ ನುಗ್ಗಿ ಬಂದು ಆ ಕಾಮಬಾಣಗಳು ಖಳನ ಅವಯವಗಳಲ್ಲಿ ಹೊಕ್ಕು ಹೊರಟು ರಕ್ತವನ್ನು ಹೊರಡಿಸಿದುವು. ಆಗ ಕುಂಭ ಕರ್ಣನು ವಿವಿಧಬಾಣಪ್ರಯೋಗಗಳನ್ನು ಮಾಡಿ ರಾಮನ ಸರ್ವಾಂಗಗಳಲ್ಲೂ ದ್ವಿಗುಣ ವಾಗಿ ರಕ್ತಪ್ರವಾಹವನ್ನು ಹರಿಸಿದನು. ಬಿಲ್ಲುಗಳೊ ? ಶಚೀಪತಿಯ ಬಿಲ್ಲು ಗಳೊ ? ಹೆದೆಗಳ ಧ್ವನಿಗಳೊ ? ಸಿಡಿಲುಗಳ ಧ್ವನಿಗಳೋ ? ತನುಗಳೊ ? ಕೆನ್ನಿರ್ದು೦ಬಿದ ಬಲ್ಕು ಗಿಲುಗಳೊ ? ಬಾಣಸಮೂಹಗಳೋ ? ಮಳೆವನಿಗಳ ಪರಂಪರೆಗಳೋ ಎಂಬ ಭಾಂತಿಯನ್ನು ಹುಟ್ಟಿಸುತ್ತ ರಾಮರಾವಣನು ಜರಿಬ್ಬರ ಜಗಳವು ಜಗತ್ತನ್ನು ಮಳೆ ಗಾಲದಂತೆ ಮೋಹಗೊಳಿಸಿತು. ರಾಮನು ಸಿಂಗಾಡಿಯಲ್ಲಿ ಕೋಲನ್ನು ಸಂಧಾನಿಸಲು ಆ ಕಾಲದಲ್ಲಿ ಬೋಳೆಯರೋಜನಾದ ಬೃಹಸ್ಪತಿಯು ಶಹಬಾಸು ! ರಾಮಾ ಎಂದು ಹೊಗಳುತ್ತಿದ್ದನು. ಕುಂಭಕರ್ಣನು ಬಾಣಸಂಧಾನವನ್ನು ಮಾಡಲು ರಕ್ಕಸರೋಜ ನಾದ ಶುಕ್ರನು-ಭಾಪುರೇ ! ಕುಂಭಕರ್ಣಾ ಎಂದು ಕೊಂಡಾಡುತ್ತಿದ್ದನು. ಅವ ರಿಬ್ಬರ ಘೋರಯುದ್ದ ಸಂದರ್ಭದಲ್ಲಿ ಉಭಯ ಪಕ್ಷ ವೀರಕರಮುಕ್ತಗಳಾದ ಬಾಣ ವ್ರಹಗಳಿಂದ ರವಿಮಂಡಲವೆಲ್ಲಾ ತುಂಬಿ ಕತ್ತಲಾಯಿತು. ಆಗ ಶ್ರೀರಾಮನು ಕುಂಭ ಕರ್ಣನನ್ನು ನೋಡಿ.ಎಲೈ ಅಸುರನೇ ! ಕೇಳು. ನೀನು ಘೋರಖಳರಲ್ಲಿ ಹೆಸರು ಹೊಂದಿದ ಶೂರಭಟನು. ನಿನ್ನಂಥ ವೀರಾಗ್ರೇಸರನು