ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಕಥಾಸಂಗ್ರಹ-೪ ನೆಯ ಭಾಗ ತಮ್ಮ ಬಾಲಗಳನ್ನೆಳೆದು ಎದೆಯಲ್ಲಿ ಸೇರಿಸಿಕೊಂಡು ಪಲ್ಲಿ ರಿದು ಹೆಣಗಳ ಮರೆಯಲ್ಲಿ ಅಡಗಿಕೊಂಡು ತಾವೂ ಹೆಣಗಳೋ ಎಂಬಂತೆ ತೋರಿಸಿಕೊಂಡುವು. ಕೆಲವು ಒದೆದಾಡುತ್ತಿರುವಂತೆ ಮೆಲ್ಲ ಮೆಲ್ಲನೆ ಸರಿದುಹೋಗಿ ಗಿಡಮರಗಳನ್ನೆ ರಿ ಬದುಕಿ ದೆವೆಂದು ಹೇಳಿಕೊಂಡುವು ಎಂಬ ಕಪಿಬಲದ ವಿದ್ಯಮಾನಮಾತ್ರವೇ ಆಶ್ಚರ್ಯವಲ್ಲ. ಅಮರಾವತಿಯಲ್ಲಿ ತ್ರಿದಶರೊಡೆಯನು ಬೆದರಿದನು. ಅಂತಕನು ನೆಗೆದು ಬಿದ್ದು ಮೈತಿಳಿಯದೆ ಕನವರಿಸಿದನು. ಅಗ್ನಿ ಯು ಹಾಯ್ದನು. ವರುಣನು ಸರಿದೋಡಿದನು. ಕುಬೇರನು ನಡಗಿಕೊಂಡನು. ವಾಯುವು ಗುಹೆಯಲ್ಲಿ ಸೇರಿದನು. ಈಶಾನನು ಅದೃಶ್ಯನಾದನು. ನಿರುತಿಯು ಸಿಕ್ಕಿದ ಕಡೆಗೋಡಿ ದಿಕ್ಕುಗೆಟ್ಟು ಬಂದು ರಾವಣಿ ಯನ್ನೇ ಮರೆಹೊಕ್ಕನು. ವಿಲಯ ಕಾಲದ ನೀಲಾಂಬುದಕಾಂತಿಯೋ ? ರಕ್ಕಸಗುವ ರನ ಮೈಬಣ್ಣವೋ? ಗುಡುಗುಗಳೋ ? ಅವನ ಆರ್ಭಟಗಳೊ ? ಹೊಳೆಯುತ್ತಿರುವ ವಿದ್ಯುಜ್ಞಾ ಲವೋ ? ಧಳಥಳಿಸುತ್ತಿರುವ ಬಿರಿನ ಡಾಳವೋ ? ಹೊಡೆಯುತ್ತಿರುವ ಮುಂಗಾರ್ಸಿಡಿಲ್ಲಂಡವೋ ? ಬಾಣಪರಂಪರಾಘಾತವೋ ಎಂಬುದನ್ನು ಯಾರು ವಿವೇಚಿಸಿ ತಿಳಿದು ಹೇಳಬಲ್ಲವರು ? ಆ ಕೊಳು ಗುಳದ ಚಿತ್ರವಧೆಯ ವೈಚಿತ್ರವನ್ನು ನೋಡಿ ದಣಿಯುವುದಕ್ಕೆ ಎರಡು ಕಣ್ಣು ಸಾಲವು. ಯೋಚಿಸುವುದಕ್ಕೆ ಮನಸ್ಸಿನ ವಿಶಾಲತೆಯು ಸಂಕೋಚವು. ನೋಡುವುದಕ್ಕೆ ಇಂದ್ರನು, ಹೇಳುವುದಕ್ಕೆ ಆದಿಶೇ ಷನು ಬಂದು ಧೈರ್ಯದಿಂದ ನಿಂತರೆಂತಾಗುವುದೋ ತಿಳಿಯದು. ಶಿವ ಶಿವಾ ! ಮಾರಿಮುಳಿದಂತಾಯಿತು. ನೆತ್ತರಿನ ತೊರೆಯಲ್ಲಿ ತೇಲಿಕೊಂಡು ಹೋಗುತ್ತಿರುವ ಕಪಿ ಗಳಿಗೆ ಗಣನೆಯೇ ಇಲ್ಲವು. ಕೋಡಗಗಳಲ್ಲಿ ಅಳಿದುಳಿದ ಹಲವು ಕೆಲವು ಹೆಣಗಳನ್ನು ಬಗೆದು ಬಗೆದು ಹೊಕ್ಕು ಹುದುಗಿಕೊಂಡುವು. ಕೆಲವು ಬೆಟ್ಟಗಳ ಇರುಬಿನಲ್ಲಿ ಹುದುಗಿದುವು. ಕೆಲವು ಹರಿಯುತ್ತಿರುವ ರಕ್ತನದೀಪ್ರವಾಹದಲ್ಲಿ ನೆಗೆದುಬಿದ್ದು ಮುಳುಗಿ ಮಾಯವಾದುವು. ಬಡಗೋತಿಗಳ ಸುದ್ದಿಯಂತಿರಲಿ, ಮಹಾಗಿರಿಗಳನ್ನು ತಮ್ಮ ತಲೆಗಳ ಮೇಲೆ ಕೊಡೆಯಂತೆ ಹಿಡಿದು ಕೊಂಡು ಪುಟಚಂಡಿನಂತೆ ಸ್ಥಳದಿಂದ ಸ್ಥಳಕ್ಕೆ ನೆಗೆಯುತ್ತ ಬಾಲವನ್ನೆತ್ತಿಕೊಂಡು ಅಂಬರತಳದಲ್ಲಿ ಹಾರಿಯಾಡುತ್ತಿರುವ ನಳನೇ ಮೊದಲಾದ ಪ್ರಖ್ಯಾತ ವಾನರವೀರರ ಸರ್ವಾಯವಗಳಲ್ಲೂ ಅಂಬುಗಳು ನೆಟ್ಟು ಕೊಂಡುವು. ಮತ್ತು ಅಮಿತಶಕ್ತನಾದ ರಾವಣಿಯು ಯುದ್ಧಾಂಗಣವೆಂಬ ಕಣದಲ್ಲಿ ಕಪಿವೀರಶಿರಸ್ಸುಗಳೆಂಬ ತೆನೆಗಳನ್ನು ಕೊಯೊಟ್ಟಿದನು. ವಿಶೇಷವೇಕೆ ? ಆ ರಣಭೂಮಿಯು ಹರಿಯುತ್ತಿರುವ ರಕ್ತದಿಂದಲೂ ಬಿದ್ದಿರುವ ತಲೆಬುರುಡೆಗಳಿಂದಲೂ ಹೊರೆಯಾಡುತ್ತಿರುವ ಕಬಂಧಗಳಿ೦ದಲೂ ಹೊರಟಿರುವ ಕರುಳುಗಳಿ೦ದಲೂ ಕುಣಿ ಕುಣಿದಾಡುತ್ತಿರುವ ಬಾಲಗಳಿಂದಲೂ ತುಂಡು ತುಂಡಾದ ತೊಡೆತೋಳುಗಳಿಂದಲೂ ಸೀಳಿ ಹೋಳಾದ ಶರೀರಗಳಿಂದಲೂ ಹೊರಗೆ ಬಂದು ನೇಲುತ್ತಿರುವ ಕಣ್ಣುಗುಡ್ಡು ಗಳಿಂದಲೂ ಕತ್ತರಿಸಲ್ಪಟ್ಟು ಬಿದ್ದಿರುವ ಪಾದಗಳಿಂದಲೂ ಬಾಯ್ ಳನ್ನು ಕಿಸಿದು ಹಲ್ಲುಗಳನ್ನು ತೋರಿಸುತ್ತ ಬಿದ್ದಿರುವ ಕಪಿರಾಕ್ಷಸ ಶವಗಳಿಂದಲೂ ಕೂಡಿ ನೋಡು ವವರಿಗೆ ಹೇಸಿಕೆಯನ್ನೂ ಭಯವನ್ನೂ ಹುಟ್ಟಿಸುತ್ತಿದ್ದಿತು. ಈ ರೀತಿಯಾಗಿ ಭಯ