ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

154 ಕಥಾಸಂಗ್ರಹ-೪ ನೆಯ ಭಾಗ

  • WM6.

ಮನಿಗೆ ಅಪಮಾನವನ್ನೂ ನಿಮ್ಮೆಲ್ಲರಿಗೂ ಅಪಾರಶ್ರಮವನ್ನೂ ಉಂಟುಮಾಡಿ ಈಗ ಮೃತ್ಯುವಿನ ಬಾಯನ್ನು ಪ್ರವೇಶಿಸುತ್ತಿದ್ದೇನೆ. ಇನ್ನು ನೀವು ಯಾರಿಗಾಗಿ ಯುದ್ದ ಮಾಡುವಿರಿ ? ಈ ಕಾಳ್ಮೆತದ ಖಳನ ಕೈಯಲ್ಲಿ ಸಿಕ್ಕಿ ನನ್ನ ಬಾಳು ಹಾಳಾಯಿತು. ಪೂರ್ವದಲ್ಲಿ ನನ್ನ ಪತಿಯ ಅತ್ತೆಯ ಹಿತಚಿಂತಕರಾದ ಇನ್ನೂ ಇತರರೂ ಕಾಡಿಗೆ ಹೋಗಬೇಡವೆಂದು ಎಷ್ಟು ವಿಧವಾಗಿ ಹೇಳಿದರೂ ಅವರ ಮಾತುಗಳೊಂದನ್ನೂ ಕೇಳದೆ ಮರ್ಖಳಾದ ನಾನು ನನ್ನಿಂದಲೇ ಕೆಟ್ಟೆನು. ಅಯ್ಯೋ ! ಶ್ರೀರಾಮನ ಕೊಮಲಬಾಹುಗಳ ಆಲಿಂಗನದಿಂದ ಉಬ್ಬುತ್ತಿದ್ದ ದೇಹವೇ! ಈ ಪಾಪಿಯ ಕೈಗತ್ತಿಗೆ ಗುರಿಯಾದಿಯಾ ! ಮಹಾತ್ಮನಾದ ಜನಕರಾಜನ ಕುಲದಲ್ಲಿ ಹುಟ್ಟಿ ಸೂಂರ್ಗುವಂಶದಲ್ಲಿ ಲೋಕರಕ್ಷಣಾರ್ಥವಾಗಿ ಅವತರಿಸಿದ ಶ್ರೀರಾಮನನ್ನು ಕೈಹಿಡಿದು ಕಡೆಗೆ ನನಗಿಂಥ ದುರವಸ್ಥೆಯು ಅನುಭವಕ್ಕೆ ಬಂದಿತು. ನೋಡಯ್ಯಾ ! ಮಾರುತಿಯೇ ! ಇದು ನನ್ನ ಹಿಂದಣ ಯಾವ ಜನ್ಮದ ದುರಿತತತಿಯೋ ? ಮಹಾತ್ಮರಾದ ಯಾವ ದಂಪತಿಗಳ ಸಂತೋಷಾನುಭವಕ್ಕೆ ಕಂಟಕಳಾಗಿದ್ದೆನೋ ? ಆ ದುಷ್ಕೃತಫಲವು ಈಗ ನನಗೆ ಅನುಭವಾಭಿಮುಖವಾಯಿತು. ನೀನು ಇನ್ನಿಲ್ಲಿ ನಿಲ್ಲದೆ ನನ್ನ ಆಶೆಯನ್ನು ತೊರೆದು ಲಕ್ಷಣಸಹಿತವಾಗಿ ಶ್ರೀರಾಮಚಂದ್ರನನ್ನು ಅಯೋಧ್ಯಾನಗರಕ್ಕೆ ಹೋಗಿ ಸುಖವಾಗಿ ಬದುಕಹೇಳು, ಈ ನೀಚನ ಕೈಗತ್ತಿಯಿಂದ ಕಡಿಯಲ್ಪಟ್ಟು ತುಂಡಾದ ನನ್ನ ದೇಹ ವನ್ನು ತೆಗೆದು ಕೊಂಡು ಹೋಗಿ ಶ್ರೀ ರಾಮಚಂದ್ರನಿಗೆ ತೋರಿಸು. ಈ ವಿಧವಾದ ನನ್ನ ಮಾತುಗಳನ್ನು ಅಣುಮಾತ್ರವಾದರೂ ಮೀರಿ ನಡೆಯದಿರು. ಈ ನಿಶಾಚರರು ಮಹಾ ಮಾಯಿಗಳು. ಈಗ ಅನ್ಯಾಯವಾಗಿ ನನ್ನ ಪ್ರಾಣಗಳಿಗೆ ಮುನಿದ ಹಾಗೆ ಏನಾದರೂ ಉಪಾಯದಿಂದ ಲೋಕರಕ್ಷಕನಾದ ಶ್ರೀರಾಮನ ಪ್ರಾಣಗಳಿಗೂ ಮುನಿದಾರು. ಎಚ್ಚರಿಕೆಯಿಂದಿರಿ ಎಂದು ಹೇಳುತ್ತಿರಲು ಇಂದ್ರಜಿತು-ಹನುಮಂತನು ನೋಡು ತಿರುವಾಗಲೇ ಆ ಮಾಯಾಸೀತೆಯ ತಲೆಯನ್ನು ಕಡಿದು ರುಂಡಮುಂಡಗಳನ್ನು ರಥದಿಂದ ಕೆಳಗೆ ಬೀಸಾಡಿಬಿಟ್ಟನು. ಆಗ ಆಂಜನೇಯನು ಕೋಪಸಂತಾಪಾಶ್ಚರ್ಯ ಮಿಶ್ರವಾದ ಭಾವಯುಕ್ತನಾಗಿ ವೇಗದಿಂದ ಹೋಗಿ ಆ ರಾವಣಿಯ ರಥವನ್ನು ಒದೆಯಲು ಅದು ಪ್ರಡಿಪುಡಿಯಾಯಿತು. ಕಪಟಿಯಾದ ಇಂದ್ರಜಿತ್ತು ಮಾಯಾಬಲ ದಿಂದ ತನ್ನನ್ನು ಮರೆಸಿಕೊಂಡು ಓಡಿಹೋಗಿ ಲಂಕೆಯನ್ನು ಸೇರಿದನು, ಅನಂತರದಲ್ಲಿ ಆಂಜನೇಯನು ಇತಿಕರ್ತವ್ಯ ತಾಜ್ಞಾನವಿಲ್ಲದವನಾಗಿ ಹಿಂದಿರುಗಿ ಬಂದು ಆ ಮಾಯಾ ಭೂಮಿಜೆಯ ಕಡಿಯಲ್ಪಟ್ಟು ಬಿದ್ದಿರುವ ತಲೆಯಟ್ಟೆಗಳನ್ನು ನೋಡಿ ಹಾ ! ಜನಕ ರಾಜನಂದಿನೀ ಎಂದು ಹಂಬಲಿಸಿ ಹಮ್ಮಡಗಿ ಮೂರ್ಛಿತನಾಗಿ ನೆಲದಲ್ಲಿ ಬಿದ್ದಿರಲು ಇತ್ತ ಶ್ರೀರಾಮಚಂದ್ರನು ಈ ಲಂಕಾನಗರದ ಪಶ್ಚಿಮ ದಿಗ್ವಾರದಲ್ಲಿ ಧೀರನಾದ ವಾಯುಕುಮಾರನ ಸಿಂಹನಾದವು ಈ ವರೆಗೂ ಕೇಳಿಸುತ್ತಿದ್ದಿತು. ಈಗ ಅದು ಅಡಗಿದೆ. ಎಲ್ಲಿ ನೋಡಿದರೂ ರಾಕ್ಷಸರ ಬಿರು ಗೂಗುಗಳೇ ತುಂಬಿವೆ. ಇದಕ್ಕೆ ಕಾರ ಣವೇನಿರುವುದೋ ತಿಳಿಯುವುದಿಲ್ಲ. ಅದು ಕಾರಣ ಆಯಾ ಜಾಂಬವಂತರೇ ! ನೀವು ಇರಿತದಿಂದ ಆ೦ಜನೇಯನ ಬಳಿಗೆ ಹೋಗಿರಿ ಎಂದು ಕಳುಹಿಸಿ ಅಂಗದನಿಗೆ ಲಕ್ಷಣ