ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 155 ನನ್ನೂ ನೀಲನಿಗೆ ವಿಭೀಷಣನನ್ನೂ ಬೆಂಬಲವಾಗಿ ಕಳುಹಿಸಿದನು. ಅನಂತರದಲ್ಲಿ ಜಾಂ ಬವಂತನು ತ್ವರಿತಗತಿಯಿಂದ ಬಂದು ಮೂರ್ಛಿತನಾಗಿ ಬಿದ್ದಿರುವ ಆಂಜನೇಯನನ್ನೂ ಅವನ ಸಮೀಪದಲ್ಲಿ ಕಡಿಯಲ್ಪಟ್ಟು ಬಿದ್ದಿರುವ ಸೀತೆಯ ದೇಹವನ್ನೂ ನೋಡಿ ಇದು ಭಯಭ್ರಾಂತರಾದ ನೀಚರಾಕ್ಷಸರ ಕೆಲಸವೆಂದು ಯೋಚಿಸಿ ದುಃಖವೆಂಬ ಬಲ್ಲ ಡಲಲ್ಲಿ ಬಿದ್ದು ಎಚ್ಚೆತ್ತು ಆಂಜನೇಯನಿಗೆ ಶೈತ್ಯೋಪಚಾರವನ್ನು ಮಾಡಿ ಎಬ್ಬಿಸಲು ಅವನು ಮೊದಲಿಂದಲೂ ನಡೆದ ಕಾರ್ಯಸ್ಥಿತಿಯನ್ನೆಲ್ಲಾ ಹೇಳಿದನು. ಆ ಮೇಲೆ ಆ ಮಾಯಾ ಭೂಮಿಜೆಯ ತಲೆಯಟ್ಟೆಗಳನ್ನು ತೆಗೆದುಕೊಂಡು ಬಂದು ರಾಮನ ಮುಂದಿಳುಹಿದನು. ಆಗ ರಾಮನಿಗೆ ಹೊಟ್ಟೆ ಯ ತುಂಬ ಹೊಸ ಸುಣ್ಣವನ್ನು ತುಂಬಿ ನೀರು ಹೊಯ್ದಂತಾಗಿ ಭೂಮಿಯಲ್ಲಿ ಬಿದ್ದನು. ಸುಗ್ರೀವನು ಧಾರಾಸಂಪಾತವಾಗಿ ಹರಿಯುತ್ತಿರುವ ಕಣ್ಣ ರುಗಳಿಂದ ಕೂಡಿ ಒಡನಾಗಿ ನಿಂತನು. ಕಪಿವಾಹಿನಿಯೆಲ್ಲಾ ದುಃಖಸಮುದ್ರದಲ್ಲಿ ಮುಳುಗಿತು, ಆಗ ಆ೦ಜನೇಯನು. ಇದಕ್ಕಾಗಿ ದುಃಖಿಸುವದೇಕೆ ? ನೀವೆಲ್ಲರೂ ಏನೂ ತಿಳಿಯದವರಂತೆ ಮರುಗುತ್ತಿರುವುದೇಕೆ ? ಈ ಕ್ಷಣದಲ್ಲಿ ಓಷಧಿಯನ್ನು ತಂದು ಸೀತೆಯನ್ನು ಎಬ್ಬಿಸುವೆನು ಎಂದು ಸಮಾಧಾನಮಾಡುತ್ತಿದ್ದನು. ರಾಮನು ಕಪಿವೀ ರರು ಮಾಡಿದ ಶೈತ್ಯೋಪಚಾರದಿಂದ ಎಚ್ಚರವನ್ನು ಹೊಂದಿ ತಲೆಯನ್ನು ಬೊಗ್ಗಿಸಿ ಕೊಂಡು ಅಯ್ಯಾ, ವಾನರ ವೀರರೇ ! ಈಗ ನಮ್ಮ ಯುದ್ದಕ್ಕೆ ಅಂತ್ಯವು ಸಂಭವಿ ಸಿತೇ ! ಈ ವರೆಗೂ ಅನುಭವಿಸಿದ ಕಷ್ಟ ನಷ್ಟಗಳೆಲ್ಲಾ ಮರಳಲ್ಲಿ ಹೊಯ್ದ ಎಣ್ಣೆಯಂತೆ ನಿಷ್ಪಲವಾದುವೇ ಎಂದು ಸುಮ್ಮನಿದ್ದು ಆ ಮೇಲೆ ಆ ಮಾಯಾ ಸೀತಾ ದೇಹವನ್ನು ನೋಡಿ-ಅಕಟಕಟಾ ! ನೃಪಸಂತತಿಯೊಳಗೆಲ್ಲಾ ಮಹಾತ್ಮನಾದ ಜನಕರಾಜನ ಕುಮಾರಿಯೇ ! ಸುಕುಮಾರಾಗಿಯೇ ! ದುರ್ವಿಧಿಯು ನಿನಗೆ ಇಂಥ ಹೇಸಿಕೆಯ ಸಾವನ್ನು ತಂದೊದಗಿಸಿತೇ ಎಂದು ಕಣ್ಣೀರುಗಳನ್ನು ಹರಿಸುತ್ತ ಆ ತುಂಡುಗಳ ಮೇಲೆ ಬಿದ್ದು ಹೊರಳಾಡುತ್ತ-ಆಯ್ಯೋ, ಮನ್ಮನೋರಮೆಯೇ ! ನಿನ್ನ ಹಿತಮಿತಮೃದುವ ಚನಗಳನ್ನು ಮರೆಯುವುದೆಂದಿಗೆ ! ಪ್ರಿಯೆಯೇ ! ವನಕ್ಕೆ ಬರಬೇಡ ಎಂದು ಆಯೋ ಧೈಯಲ್ಲಿ ಎಷ್ಟು ವಿಧವಾಗಿ ಹೇಳಿದರೂ ಕೇಳದೆ ನನ್ನ ಮೇಲಣ ಮೋಹದಿಂದ ವನಕ್ಕೆ ಬಂದವಳಾದೆ !” ಅಹೋರಾತ್ರಿಗಳಲ್ಲಿಯ ನನ್ನಲ್ಲಿಯೇ ಪ್ರಾಣಗಳನ್ನಿಟ್ಟು ಕೊಂಡು ಜೀವಿಸುತ್ತಿದ್ದ ನಿನಗೆ ನನ್ನ ಗಲುವಿಕೆಯಿಂದಲೇ ಮರ್ಛಾಮೃತಿಗಳು ಸಂಭವಿಸುವು ವೆಂದು ಹೇಳುವಲ್ಲಿ ಮೇಲೆ ಪಾಪಾತ್ಮರಾದ ರಾಕ್ಷಸರ ಬಾಧೆಯುಂಟಾದರೆ ನೀನು ಜೀವಧಾರಣೆಯನ್ನು ಮಾಡುವುದುಂಟೇ ! ನಾನು ಅಯೋಧ್ಯೆಗೆ ಏತಕ್ಕಾಗಿ ಹೋಗಲಿ ? ದನುಜರಿಂದ ನಿನ್ನನ್ನು ಕೊಲ್ಲಿಸಿದೆನೆಂದು ಹೇಳುವುದಕ್ಕಾಗಿ ಹೋಗಬೇಕೇ ? ನಾನು ಅಯೋಧ್ಯಾ ನಗರಕ್ಕೆ ಹೋದ ಮೇಲೆ ನಿನ್ನ ತಂದೆಯಾದ ಜನಕರಾಜನು ಬಂದು ನನ್ನ ಪಿಯು ಎಲ್ಲಿರುವಳೆಂದು ಕೇಳಿದರೆ ಅದಕ್ಕೆ ನಾನು ಏನು ಹೇಳುವೆನು ? ನಾನು ಬಂದೆ ನೆಂಬ ವರ್ತಮಾನವನ್ನು ಕೇಳಿ ಸಂತೋಷದಿಂದ ಬರುವ ನನ್ನ ತಾಯಂದಿರಿಗೆ ಏನು ಉತ್ತರವನ್ನು ಹೇಳಲಿ ? ಭರತ ಶತ್ರುಘ್ನಾದ್ಯರಿಗೂ ಪುರಜನರಿಗೂ ನಾನು ಹೇಳತಕ್ಕ ಮಾತಾವುದು ? ರಾಕ್ಷಸರಣದೇವತೆಗೆ ನಿನ್ನನ್ನು ಒಪ್ಪಿಸಿ ನಿರ್ಭಾಗ್ಯನಾದೆನೆಂದು