ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

156 ಕಥಾಸಂಗ್ರಹ-೪ ನೆಯ ಭಾಗ ಹೇಳಲೇ ? ಇನ್ನು ಮೇಲೆ ನಾನು ಮಾಡಬೇಕಾದ ಯೋಚನೆ ಯಾವುದು ? ಇನ್ನು ಮೇಲೆ ನಾನು ಈ ಹಗೆಗಳನ್ನು ಕೊಂದು ಫಲವೇನು ? ಈ ಕಪಿವೀರರನ್ನು ಏಕೆ ವೃಥಾ ದಣಿಸಬೇಕು ? ಅರ್ಧಾಂಗಿಯಾದ ನೀನು ಸತ್ತ ಮೇಲೆ ಈ ನನ್ನ ಕೆಟ್ಟಿ ಬಾಳಿ ನಿಂದ ಏನೂ ಗುಣವಿಲ್ಲ. ಸೇವೆಯಲ್ಲಿ ದಾಸಿಯಂತೆಯ ಆಲೋಚನೆಯಲ್ಲಿ ಮಂತ್ರಿ ಯಂತೆಯೂ ನನ್ನ ದೇಹಪೋಷಣೆಯಲ್ಲಿ ತಾಯಂತೆಯ ಕ್ಷಮೆಯಲ್ಲಿ ಭೂಮಿ ಯಂತೆಯೇ ಇದ್ದ ನಿನ್ನ ನ್ನು ತೀರಿಸಿಕೊಂಡು ನಿನ್ನ ಸಚ್ಚರಿತ್ರೆಯನ್ನೆಲ್ಲಾ ಮರೆತು ಕೃಷಿ ಣನಾಗಿ ನಾನು ಬಾಳುವುದಕ್ಕಿಂತಲೂ ಅಪಹಾಸ್ಯಕರವಾದ ಸ್ಥಿತಿಯು ಯಾವುದೂ ಇಲ್ಲವು ಎಂದು ವಿವಿಧವಾಗಿ ಹೇಳಿಕೊಳ್ಳುತ್ತ ಹಂಬಲಿಸುತ್ತಿರಲು ಆ ಸಮಯದಲ್ಲಿ ಗದಾದಂಡವನ್ನು ಧರಿಸಿಕೊಂಡು ವಿಭೀಷಣನು ಯುದ್ಧ ಭೂಮಿಯಿಂದ ಬಂದು ಆ ಸ್ಥಿತಿಯನ್ನು ನೋಡಿ ಸಾಂಗೋಪಾಂಗವಾಗಿ ತಿಳಿದು ಶ್ರೀರಾಮನನ್ನು ಕುರಿತು - ಎಲೈ ದೇವನೇ ನೀನು ಲೋಕದವರಂತೆ ನರನೇ ? ಸೀತಾದೇವಿಯು ಜಗತ್ತಿನ ಹೆಣ್ಣು ಗಳಂತೆ ಮಾನವಿಯೇ ? ಇಂಥ ಮಾಯಾವಿಲಾಸಕ್ಕೆ ಮನಸ್ಸು ಮಾರಿ ಮರುಗುವುದು ಚಿತವೇ ? ಜನಕಜೆಯು ಲೋಕಮಾತೃವಾದ 'ಲಕ್ಷ್ಮಿ ದೇವಿಯ ಲ್ಲವೇ ? ಸುರಾಸುರನರೋರಗರೊಳಗೆ ಆಕೆಯ ಮೈ ಮೇಲೆ ಕೈಯಿಟ್ಟು ಬದು ಕುವರುಂಟೇ ? ಆಕೆಯು ಕುಪಿತಳಾಗಿ ಶಪಿಸಿದರೆ ಕ್ಷಣಕಾಲದಲ್ಲಿ ಲೋಕವೆ ಲ್ಲವೂ ಭಸ್ಮಿಕೃತವಾಗದಿರುವುದೇ ? ಈ ಅಲ್ಪ ಜೀವಿಯಾದ ರಾವಣಾತ್ಮಜನು ಆಕೆ ಯನ್ನು ಕೊಲ್ಲುವದುಂಟೇ ಎಂದಿಗೂ ಇಲ್ಲವು. ಸರ್ವಜ್ಞನೂ ಸರ್ವಾಂತರ್ಯಾ ಮಿಯ ಆದ ನಿನಗೆ ಅಲ್ಪಜ್ಞನಾದ ನಾನು ವಿಶೇಷವಾಗಿ ವಿಜ್ಞಾಪಿಸತಕ್ಕು ದೇನಿದೆ ? ಇದೆಲ್ಲವೂ ಮಾಯಾವಿಯಾದ ಇಂದ್ರಜಿತ್ತಿನ ಕಾಪಟ್ಯವು. ಅವನು ಅಪಜ ಯಶಂಕಿತನಾಗಿ ನಿನಗೆ ನಿನ್ನೆ ವೀರಪರಿವಾರಕ ದುಃಖವನ್ನು ಹುಟ್ಟಿ ಸಬೇಕೆಂಬ ಯೋಚನೆಯಿಂದ ಮಾಡಿದ ಕುಕೃತವು. ಇದು ನಿಜವಲ್ಲ. ಇದಕ್ಕಾಗಿ ಅಣುಮಾತ್ರ ವಾದರೂ ಚಿಂತಿಸಬೇಡ. ಈಗಲೇ ಈ ಮಾರುತಾತ್ಮ ಜನನ್ನು ಕಳುಹಿಸು. ಆತನ ಸಂಗಡ ನನ್ನ ಮಂತ್ರಿಗಳಲ್ಲಿ ಒಬ್ಬನನ್ನು ಕಳುಹಿಸುವೆನು. ಅಲ್ಲಿ ಸೀತಾದೇವಿಯು ಇಲ್ಲದಿದ್ದರೆ ಸತ್ಯವಾಗಿ ನಾನು ನಿನ್ನಡಿಗಳ ಸೇವಕನಲ್ಲ ಎಂದು ಹೇಳಲು ರಾಮನು ಆ ಮಾತುಗಳನ್ನು ಕೇಳಿ ಆಶ್ಚರ್ಯಮನಸ್ಕನಾಗಿ `ಕರಸಂಜ್ಞೆಯಿಂದ ಆಂಜನೇಯನಿಗೆ ಅಪ್ಪಣೆಯನ್ನು ಕೊಡಲು ಆಗ ಅ೦ಜನೆಯ ಮಗನು ಅಲ್ಲಿಂದ ಲಂಘಿಸಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅಶೋಕವನಕ್ಕೆ ಹೋಗಿ ಪೂರ್ವದಂತೆ ರಾಮಧ್ಯಾನಪರಾ ಯಣಳಾಗಿರುವ ಸೀತೆಯನ್ನು ಕಂಡು ಸಂತುಷ್ಟಚಿತ್ತನಾಗಿ ತಿರುಗಿ ಬಂದು ರಾಮನ ಸನ್ನಿಧಿಯಲ್ಲಿ-ದೇವಾ ! ನಿನ್ನ ರಸಿಯಾದ ಸೀತೆಯು ನಿನ್ನ ಡಿದಾವರೆಗಳ ನೆನಹಂಬ ಅಮೃತವನ್ನು ಪಾನಮಾಡುತ್ತ ಸುಖವಾಗಿರುವಳು ಎಂದು ಹೇಳಲು ಆಗ ಶ್ರೀರಾ ಮನ ಹೃದಯದಲ್ಲಿ ಉತ್ಪನ್ನವಾದ ಸಂತೋಷಕ್ಕೆ ಉಪಮಾನವೇ ಇಲ್ಲ. ಜಾಂಬವ ದಾದಿಗಳು ವಿಭೀಷಣನನ್ನು ಅಪಾರವಾಗಿ ಹೊಗಳಿದರು. ಕಪಿಕಟಕವೆಲ್ಲಾ ಸಂತೋ ಪಾತಿಶಯದಿಂದ ಮೈಯುಬ್ಬಿ ನಲಿದಾಡಿತು. ಆಗ ವಿಭೀಷಣನು ಶ್ರೀರಾಮಚಂದ್ರ