ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

157 ಇಂದ್ರಜಿತ್ಸಂಹಾರ ನಿಗೆ ದೀರ್ಘದಂಡನಮಸ್ಕಾರವನ್ನು ಮಾಡಿ ಎದ್ದು ನಿಂತು ಕೈ ಮುಗಿದು ಎಲೆ, ಸತ್ಯಾ ರಾಮನಾದ ಶ್ರೀರಾಮಚಂದ್ರನೇ ! ಮಾಯಾಶಕ್ತಿಯಿಂದ ದುಷ್ಕಾರ್ಯದಕ್ಷ ನಾದ ರಾವಣಿಯು ಮೊದಲು ತನ್ನ ತಂದೆಯ ಬಳಿಯಲ್ಲಿ ನಿನ್ನನ್ನು ಜಯಿಸುವೆ ನೆಂದು ಸಭಾಜನರೆದುರಿಗೆ ಬಹು ಅಟ್ಟಹಾಸದಿಂದ ಪ್ರತಿಜ್ಞೆಯನ್ನು ಮಾಡಿ ಭಾಷೆ ಕೊಟ್ಟು ಮಹಾಗರ್ವದಿಂದ ಬಂದು ಯುದ್ಧಕ್ಕೆ ತೊಡಗಿದನು. ಯುದ್ದ ಕಾರ್ಯ ನಿರ್ವಾಹವು ತನಗೆ ಅಸಾಧ್ಯವಾದುದರಿಂದ ಗರ್ವಹೀನನಾಗಿ ನಾಚಿಕೊಂಡು ಮಾಯೆ ಯನ್ನವಲಂಬಿಸಿ ಈ ಕಪಟ ಸೀತೆಯನ್ನು ಮಾಡಿಕೊಂಡು ಕಡಿದು ಬಿಸುಟು ನಿಮ್ಮೆಲ್ಲ ರನ್ನೂ ದುಃಖಸಾಗರದಲ್ಲಿ ಮುಳುಗಿಸಿ ಬಾಹ್ಯ ವ್ಯಾಪಾರವನ್ನು ಮರಿಸಿ ತಾನು ತಪ್ಪಿಸಿ ಕೊಂಡು ಓಡಿಹೋಗಿ ನಮ್ಮ ಕುಲದೇವತೆಯಿರುವ ನಿಕುಂಭಿಳಾವನದಲ್ಲಿ ಶತ್ರುವಿನಾ ಶಾರ್ಥವಾಗಿ ಮಾರಣಯ ಜ್ಞವನ್ನು ಮಾಡುವುದಕ್ಕೆ ಪ್ರಾರಂಭಿಸಿದ್ದಾನೆ. ಆ ಯಜ್ಞವು ನಿರ್ವಿವಾಗಿ ಮುಗಿದರೆ ಅನಂತರದಲ್ಲಿ ಹಗೆಯನ್ನು ಜಯಿಸುವುದು ಅಸಾಧ್ಯವು. ಅದು ಈ ರಾತ್ರಿಯಲ್ಲೇ ಮುಗಿಯುತ್ತದೆ. ನಾವು ಈಗಲೇ ಹೋಗಿ ಅದು ಸಾ೦ಗ ವಾಗಿ ಸಾಗದಂತೆ ಭಂಗಪಡಿಸಿಬಿಡಬೇಕು. ಅದು ಕಾರಣ ಲಕ್ಷ್ಮಣನನ್ನೂ ಆಂಜನೇ ಯಾದಿ ಶೂರ ಕಪಿಭಟರನ್ನೂ ಶೀಘ್ರವಾಗಿ ನನ್ನ ಸಂಗಡ ಕಳುಹಿಸಿಕೊಡು. ನಾನು ಈಗಲೇ ಹೋಗಿ ಅವನ ಯಜ್ಞವನ್ನೆಲ್ಲಾ ಕೆಡಿಸಿ ಹಾಳುಮಾಡಿ ಅವನನ್ನು ಯಮಾಲ ಯಕ್ಕೆ ಅತಿಥಿಯನ್ನಾಗಿ ಮಾಡಿ ನಿನ್ನ ಸನ್ನಿಧಿಗೆ ಬರುವೆನು. ತಡಮಾಡದೆ ಬೇಗನೆ ಅಪ್ಪಣೆಯನ್ನು ಕೊಡು ಎನ್ನ ಲು ಆಗ ಶ್ರೀರಾಮನು ಇಂದ್ರಜಿತ್ತಿನ ಅತುಲಪರಾಕ್ರಮ ವನ್ನು ನೆನೆದು ತನ್ನ ಬಹಿಃಪ್ರಾಣಪ್ರಾಯನಾದ ಸುಮಿತ್ರಾತ್ಮಜಾತನನ್ನು ಇಂದ್ರಜಿತ್ತಿ ನೊಡನೆ ಯುದ್ಧಕ್ಕೆ ಕಳುಹಿಸುವುದಕ್ಕಾಗಿ ಶಂಕಾತಂಕಿತ ಚಿತ್ತವೃತ್ತಿಯುಳ್ಳವನಾಗಿ ಯೋಚಿಸುತ್ತಿರಲು ಆಗ ಅರಿಭಯಂಕರನಾದ ಲಕ್ಷ್ಮಣನು ಉಕ್ಕಿನ ಕವಚವನ್ನು ತೊಟು ಉಡುವಿನ ತೊಗಲಿನ ಕೈಯಂಗಿಯನ್ನು ಹಾಕಿಕೊಂಡು ತಲೆಗೆ ಸೀಸಕವನ್ನ ಳವಡಿಸಿಕೊಂಡು ಬೆನ್ನಿಗೆ ಅಕ್ಷಯ ನಿಷಂಗವನ್ನು ಬಿಗಿದು ಬಿರಳುಗಳನ್ನು ತೆಗೆದು ಕೊಂಡು ಬಂದು ರಾಮನ ಪಾದಗಳಿಗೆ ನಮಸ್ಕರಿಸಿ---ಎಲೆ, ಮಹಾತ್ಮನಾದ ಅಣ್ಣನೇ ! ಪೂಜ್ಯನಾದ ನಿನ್ನ ಅನುಗ್ರಹವಿರುವಲ್ಲಿ ನನಗೆ ಈ ಹಗೆಗಳ ಜಯವು ಎಷ್ಟು ಮಾತ್ರವು ? ಕಪಟಿಯ ಮಾನಹೀನನೂ ಆದ ಆ ರಕ್ಕಸಗು ವರನ ತಲೆಗಡಿದು ಅವನ ಸರ್ವಾಂಗಗಳನ್ನೂ ಖಂಡಿಸಿ ಮರುಳಳ ಬಳಗಕ್ಕೆ ಉಣಬಡಿಸುವೆನು. ನನಗೆ ಶೀಘ್ರ ವಾಗಿ ಅನುಜ್ಞೆಯನ್ನು ದಯಪಾಲಿಸು ಎಂದು ಕೇಳಿಕೊಂಡನು. ಆಗ ಶ್ರೀರಾಮನು ಅಂಜುತ್ತ ತಮ್ಮನ ಬೆಂಬಲಕ್ಕೆ ಅಂಗದ ಆಂಜನೇಯ ಅಗ್ನಿ ನಂದನ ಅಜಕುಮಾರಾದಿಗ ಇನ್ನೂ ಅಪರಿಮಿತ ಕಪಿವಾಹಿನಿಯನ್ನೂ ಕಳುಹಿಸಿಕೊಟ್ಟು ಯುದ್ಧದಲ್ಲಿ ಶತ್ರುವನ್ನು ಜಯಿಸಿ ವಿಜಯಸಂಪನ್ನನಾಗಿ ಬರುವವನಾಗು ಎಂದು ಆಶೀರ್ವಾದವನ್ನು ಮಾಡಿ ಅಪ್ಪಣೆಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಅಸಮಾನಗದಾದಂಡಧರನಾಗಿ ಅವರನ್ನೆಲ್ಲಾ ಹಿಂದೆ ಕರೆದು ಕೊಂಡು ಹೊರಟುಬಂದು ನಿಕುಂಭಿಳಾ ದೇವಾಲಯವನ್ನು ಹೊಕ್ಕು ನೋಡಲು ಅಲ್ಲಿ