ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 ಕಥಾಸಂಗ್ರಹ-೪ ನೆಯ ಭಾಗ ಹಾವಿಗೂ ಗರುಡನಿಗೂ ಮಿತ್ರತ್ವವು ಸಂಭವಿಸುವುದುಂಟೇ ? ಎಂದಿಗೂ ಇಲ್ಲ ವು. ನಿಮ್ಮ ಗತಿಯು ಕಡೆಗೇನಾಗುವುದು ನೋಡಿಕೋ ಎಂದನು. ಆ ಮಾತುಗಳನ್ನು ಕೇಳಿ ಅಕ್ಷಣನು-ಎಲಾ ನೀಚನೇ ! ಈ ರಣರಂಗದಲ್ಲಿ ಎದುರಾಗಿ ನಿಂತು ಕಾದಲಾರದೆ ಕಪಟ ತಂತ್ರದ ಮಾತುಗಳ ಬಳಕೆಯಿಂದ ಬೆದರಿಸಿ ದರೆ ಬೆದರುವರೆಂದು ಮನಸ್ಸಿನಲ್ಲಿ ಒಗೆದಿಯಾ ? ನೀನು ಶುದ್ದ ಮೂಢಾತ್ಮನೇ ಸರಿ. ಕೊಳಕಾದ ಕಪ್ಪೆ ಚಿಪ್ಪಿನಲ್ಲಿ ಹುಟ್ಟಿದುದಾದರೂ ಮುತ್ತಿಗೆ ಆ ಕೊಳಕಿನ ಸಂಪರ್ಕ ವುಂಟೇ ? ಹಾಗೆ ದುರಾತ್ಮರೂ ಪಾಪಪಂಕಲೇಪಿತರೂ ಆದ ನಿಮ್ಮೊಡನೆ ಹುಟ್ಟಿದವನಾ ದರೂ ಮಹಾತ್ಮನಾಧ ಈ ವಿಭೀಷಣನು ನಿರ್ಮಲಾತ್ಮನೆಂಬುದನ್ನು ನಾವು ತಿಳಿಯೆವೇ ? ಸಾಕು. ಇನ್ನು ಹೀಗೆ ಹುಚ್ಚು ಮಾತುಗಳನ್ನು ಬೊಗುಳದಿರು ಕುದುರೆಗಳನ್ನು ಹೊಡಿ. ರಥವನ್ನು ಮುಂದಕ್ಕೆ ನೂಕು. ಕಣೆಗಳನ್ನು ಪ್ರಯೋಗಿಸು. ನಿಷ್ಪಲವಾದ ಮಾಯಾ ಪಾಂಡಿತ್ಯವನ್ನು ಆಶ್ರಯಿಸಿಕೊಂಡು ನಮ್ಮೆದುರಿಗೆ ಮೆರೆದು ಮೊಂಕಾಗ ಬೇಡ ಎಂದು ಹೊಸ ಸಾಣೆಯ ಕೂರಲಗುಗಳನ್ನು ಶಿಂಜಿನಿಯಲ್ಲಿ ಹೂಡಿ ಲಕ್ಷ್ಮೀ ಕರಿಸಿ ಇಂದ್ರಜಿತ್ತನ್ನು ಹೊಡೆದನು. ಆ ರಾವಣಿಯು ತನ್ನನ್ನು ಕೊಲ್ಲುವುದಕ್ಕೆ ಬರು ತಿರುವ ಲಕ್ಷ್ಮಣನ ಕೂರಲಗುಗಳನ್ನು ಮಾರ್ಸರಳುಗಳಿಂದ ನಡುದಾರಿಯಲ್ಲೇ ಕಡಿದು ಬೀಳಿಸಿ ಬಿಲ್ಲಿನಲ್ಲಿ ನೈರುತಾಸ್ತ್ರವನ್ನು ಹೂಡಿ ಗುರಿಗಟ್ಟಿ ಲಕ್ಷ್ಮಣನೆದೆಗೆಸೆ ಯಲು ಆ ಬಾಣಗಳು ಪ್ರತ್ಯಹತಿಗಂಜದೆ ನುಗ್ಗಿ ಬಂದು ಲಕ್ಷ ಣನಿಗೆ ತಗುಲಲು ಆಗ ರಕ್ತ ಸುರಿದು ಕಳವಳಗೊಂಡು ಕೈಯಾಡದೆ ನಿಂತಿರುವ ಲಕ್ಷಣನನ್ನು ನೋಡಿ ಕಪಿವೀರರು ಕೋಪೋದ್ರೇಕದಿಂದ ಕೂಡಿ ಬಂದು 'ರಾವಣಿಯನ್ನು ಕವಿದರು. ಆಗ ಶೂರನಾದ ರಾವಣಾತ್ಮಜನು ಕವಿಯುವುದಕ್ಕೆ ಬಂದ ನೀಲನನ್ನು ಇಕ್ಕಿ ಮಲಗಿಸಿ ದನು. ಅ೦ಗದನನ್ನು ನೆಲಕ್ಕುರುಳಿಸಿದನು. ಜಾಂಬವಂತನನ್ನು ತಲೆನಡುಗುವಂತೆ ತೆಗೆ ದಿಟ್ಟನು. ಗವಾಕ್ಷನನ್ನು ಉಸಿರಡಗಿತೋ ಎಂಬಂತೆ ಹೊಡೆದನು. ನಳನನ್ನು ಓಡಿಸಿ ಕೊಂಡು ಹೋಗಿ ಬಡಿದನು. ಸುಷೇಣನನ್ನು ಹಲ್ಲಿ ರಿಯುವಂತೆ ತಿವಿದನು. ನಿರ್ದಾ ಕ್ಷಿಣ್ಯದಿಂದ ಹೊಯ್ತು ಗಜಗವಯರನ್ನು ಮೂರ್ಛಗೊಳಿಸಿದನು. ಎದುರಾದ ಆಂಜ ನೇಯನನ್ನು ಬಾಣಾಂಬುಧಿಯಲ್ಲಿ ಹೂಳಿ ವಿಭೀಷಣನನ್ನು ಜಗಳಕ್ಕೆ ಬಾರೆಂದು ಕೆಣ ಕಿದನು. ಮುನಿದರೆ ವಿಭೀಷಣನು ಯುದ್ದ ಕ್ರ೦ಜುವ ವೀರನೇ ? ಕೋಪಿಸಿ ನಿಂತರೆ ಲಂಕಾದುರ್ಗವನ್ನು ನಿರ್ನಾಮಮಾಡದಿರುವನೇ ? ಆಗ ವಿಭೀಷಣನು ತನ್ನ ಮಹಾ ಗದಾಯುಧವನ್ನು ತೆಗೆದು ಕೊಂಡು ಅಣ್ಣನ ಮಗನ ರಥವನ್ನು ಹೊಯ್ದನು ಇಂದ್ರ ಜಿತ್ತು ಚಿಕ್ಕಪ್ಪನ ಗದೆಯ ಹೊಯ್ಲಿನ ಮಹಾ ಘಾತವನ್ನು ತಿಳಿದಿದ್ದವನಾದುದುಂದ ಕೂಡಲೆ ಪಕ್ಷಿಯಂತೆ ಮತ್ತೊಂದು ರಥಕ್ಕೆ ಹಾರಿ ಬದುಕಿದನು. ಮೊದಲ ರಥವು ಆಶ್ರಸಾರಥಿಗಳೊಡನೆ ನುಚ್ಚು ನುರಿಯಾಗಿ ಮಣ್ಣಿನಲ್ಲಿ ಬೆರೆದು ನಿಶೆಷವಾಯಿತು. ಆಗ ದೇವತೆಗಳು ವಿಭೀಷಣನನ್ನು ಹೊಗಳಿದರು. ಕಪಿಕಟಕವೆಲ್ಲವೂ . ಹರ್ಷಧ್ವನಿ ಯನ್ನು ಮಾಡಿತು. ಆ ಮೇಲೆ ವಿಭೀಷಣನು ತೋರಿದ ಕಡೆಗೆ ನುಗ್ಗಿ ರಾಕ್ಷಸ ಸೇನೆ ಗಳನ್ನು ಸವರುತ್ತ ಯಮಲೋಕವನ್ನು ಕಾಣಿಸುತ್ತಿದ್ದನು.