ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 167 ಉಷ್ಣತೆಯಿಲ್ಲದ ಅಗ್ನಿಯಂತೆ ಸುಗಮವಾಯಿತು. ಸುಕುಮಾರನೇ ! ಬೇಗ ಬಂದು ಮುಂದೆ ಮಾಡಬೇಕಾದುದನ್ನು ನನಗೆ ನೇಮಿಸು. ನಾನು ಸಾಯಲೋ ? ಬದುಕಿ ರಿ ? ಶೀಘ್ರವಾಗಿ ಉತ್ತರವನ್ನು ಹೇಳೆ, ನನ್ನ ಮುದ್ದು ಮಗನೇ ! ಅಯ್ಯೋ, ಕುಮಾರನೇ ! ಹಸುಳೆಯೇ ! ಇಂದ್ರಜಿತ್ತೇ ! ಈಗ ನಿನ್ನ ಶೌರ್ಯ ಧೈರ್ಯ ಪರಾಕ್ರ ಮಗಳನ್ನು ಹೊಗಳುತ್ತಿರುವ ನನ್ನ ನಾಲಿಗೆಗೆ ಮುಳ್ಳು ಮುರಿದಿತು. ನಾನೇ ವಂಚ ಕನು, ನಿರ್ಭಾಗ್ಯನು. ಮಥನು, ಮತ್ತು ಪರಮ ಪಾಪಿಯು. ಧೀರನಾದ ನಿನ್ನಲ್ಲಿ ಯಾವ ಕೊರತೆಯುಂಟು ? ಆಹವದಲ್ಲಿ ನಿಂತು ಭು ಜಂಗಮಾಸ್ತ್ರದಿಂದ ಅರಿಬಲಕ್ಕೆ ಅಪಾರ ಹಾನಿಯನ್ನುಂಟುಮಾಡಿದೆ. ಅದಲ್ಲದೆ ಬ್ರಹ್ಮಾಸ್ತ್ರದಿಂದ ರಣರಂಗದಲ್ಲಿ ವೈರಿ ವ್ಯೂಹವನ್ನು ಕೆಡಹಿ ಅಪ್ರತಿಮವೀರನೆಂಬ ವಿಖ್ಯಾತಿಯನ್ನು ಹೊಂದಿದೆ. ಲೋಕೋತ್ತ ಮಗಳಾದ ನಿನ್ನ ಸಾಹಸ ಪರಾಕ್ರಮಾದಿಗಳನ್ನು ಹೊಗಳುವುದಕ್ಕೆ ನನಗೆ ಶಕ್ತಿಯಿಲ್ಲ. ದುಷ್ಟನಾದ ನಾನು ಮದನಾತುರನಾಗಿ ಮಕ್ಕಳು ಮರಿಗಳನ್ನೆಲ್ಲಾ ಮೃತ್ಯುವಿನ ಬಾಯಿಯಲ್ಲಿಕ್ಕಿ ಅನಾಥನಾದೆನು. ನನ್ನ ಪಟ್ಟವರ್ಧನನಂತಿದ್ದ ನಿನ್ನನ್ನು ಕಳೆದುಕೊಂಡ ಮೇಲೆ ನನಗೆ ಸಂತೋಷವೆತ್ತಣದು ? ಯುದ್ಧರಂಗದಲ್ಲಿ ನನಗೆ ಜಯವಂದರೇನು ? ಅಥವಾ ಜಯದಿಂದ ನನಗಾಗುವ ಫಲವೆಷರದು? ತ್ರಿಭುವನ ವಿಖ್ಯಾತವಾದ ಲಂಕಾ ರಾಜಧಾನಿಯ ಅರಮನೆಯಲ್ಲಿ ನಿರ್ಗತಿಕನಾದ ನಾನೊಬ್ಬನೇ ಮೋಟುಮರದಂತೆ ನಿಂ ತೆನು. ನನ್ನ ಹೃದಯವು ಚಿಂತೆಗೆ ತವರ್ಮನೆಯ ದುಃಖದ ತೊಂಬೆಯ ದುರೂ ಹೆಯ ಚಾವಡಿಯ ಅರಿಷಡ್ವರ್ಗಗಳ ವಿಹಾರೋದ್ಯಾನವೂ ತಾಪತ್ರಯಗಳ ಮಲ ಗುವ ಮನೆಯ ಸುತಾಪದ ಜನ್ಮಭೂಮಿಯ ಆಗಿ ಹೋಯಿತು. ಇನ್ನು ನನ್ನ ಸ್ಥಿತಿ ಯು ನನ್ನ ಮಹಾ ದುಃಖಾನುತಾಪಗಳ ಅಭಿವೃದ್ಧಿಗೆ ಹೇತುವಾದುದರಿಂದ ಅದನ್ನು ಪರಿಹರಿಸಿಕೊಳ್ಳುವುದೇ ಲೇಸು ಎಂದು ಮರುಗಿ ಕಳವಳಿಸಿ ಮುಂಗಾಣದೆ ತಿರಿಗಿ ಹರವ ಸಂಗೊಂಡನು. ಇತ್ಯ ಅಂತಃಪುರದಲ್ಲಿದ್ದ ದಶಕಂಠನ ಪಟ್ಟದರಸಿಯಾದ ಮಂಡೋದರಿಯು ಪ್ರಿಯ ಪುತ್ರನಾದ ಇಂದ್ರಜಿತ್ತಿನ ಮರಣವಾರ್ತೆಯನ್ನು ಕೇಳಿ ತತ್ ಕ್ಷಣದಲ್ಲೇ ಪಂಚ ಪ್ರಾಣಗಳೂ ಏಕಕಾಲದಲ್ಲಿ ಹಾರಿಹೋದುವೋ ಎಂಬಂತೆ ಬಿದ್ದು ಮೂರ್ಛಿತಳಾ ದಳು. ಆ ಕೂಡಲೆ ರಾವಣನ ಭಾಗ್ಯ ಕೋಶವು ಅಕಾಲದಲ್ಲಿ ಸೂರೆ ಹೊಯಿತೊ ಎಂಬಂತೆ ಅಂತಃಪುರದಲ್ಲೆಲ್ಲಾ ಮಹಾ ಭಯ ಪರಿತಾಪಗಳನ್ನು ಂಟುಮಾಡುವ ದುಃಖ ಧ್ವನಿಯೆದ್ದಿತು. ಅನಂತರದಲ್ಲಿ ಸಖೀ ಜನರಿಂದ ಮಾಡಲ್ಪಟ್ಟ ಶೈಕ್ಲೋಪಚಾರವು ಮಂಡೋದರಿಗೆ ತಿಳಿವನ್ನುಂಟು ಮಾಡಿತು. ಆ ಮೇಲೆ ಸೊಸೆಯರೊಡನೆ ಕೂಡಿ ಮಹಾ ದುಃಖದಿಂದ ತಿಳಿಯದೆ ಬಿದ್ದು ಒದೆದಾಡಿ ಆಸವಳಿದು ತಲೆಗೂದಲುಗಳ ಕೆದರಿಕೆ ಯಿಂದಲೂ ಬಸಿರುಗಳ ಬಡಿಯುವಿಕೆಯಿಂದ ಓಡಿಯೋಡಿ ಬಂದು ಚಾವಡಿಯ ಬರಿನೆಲದಲ್ಲಿ ಬಿದ್ದು ಧೂಳಿಯಲ್ಲಿ ಹೊರಳಾಡುತ್ತ ನನ್ನ ರತ್ನದ ಕಲಶವನ್ನು ಸೆಳೆದು ಕೊಂಡರೋ ! ನನ್ನ ಕಂಠಮಾಲಿಕೆಯಲ್ಲಿದ್ದ ನಾಯಕರತ್ನವನ್ನು ಅಪಹರಿಸಿ ದರೋ ನನ್ನ ಕೈಗನ್ನಡಿಯನ್ನು ಒಡೆದುಹಾಕಿದರೋ ! ನನ್ನ ಚಿಂತಾಮಣಿಯನ್ನು