ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 169 ಅನಂತರದಲ್ಲಿ ರಾವಣನು ಮರ್ಧೆ ತಿಳಿದೆದ್ದು ಶೀಘ್ರವಾಗಿ ಚಾವಡಿಗೆ ಬಂದು ಶೈತ್ಯೋಪಚಾರಗಳನ್ನು ಮಾಡಿ ಸೊಸೆಯರೊಡನೆ ಮಂಡೋದರಿಯನ್ನೆಬ್ಬಿಸಿ ಸಮಯೋ ಚಿತ ವಚನಗಳಿಂದ ಸಮಾಧಾನಪಡಿಸಿ ಅತಿ ಶೀಘ್ರತೆಯಿಂದ ರಣದೀಕ್ಷೆಯನ್ನು ಅಂಗೀ ಕರಿಸಿ ಕ್ರೂರಪ್ರತಿಜ್ಞಾ ವಚನಗಳನ್ನಾಡುತ್ತ ಯುದ್ಧ ಭೂಮಿಗೆ ಹೊರಡುವುದಕ್ಕೆ ಸನ್ನ ದ್ದನಾಗಲು ಆ ಕ್ಷಣದಲ್ಲಿಯೇ ಭೇರೀಭಾಂಕರಣಾದಿ ನಾನಾವಿಧ ವಾದ್ಯಗಳ ಮಹಾ ಧ್ವನಿಯು ಮಹಾ ವಿಲಯಘನಗರ್ಜಿತದಂತೆ ದಿಗಂತಗಳಲ್ಲಿ ಪ್ರತಿ ಧ್ವನಿಯನ್ನುಂಟುಮಾ ಡಿತು. 'ಅಗ ಸುರಲೋಕವು ತಲ್ಲಣಿಸಿತು. ಬ್ರಹ್ಮಾಂಡ ಮಂಡಲವು ಕಿವುಡಾಯಿತು. ನಿಮೇಷಮಾತ್ರದಲ್ಲಿ ಕುಶಲನಾದ ಸಾರಥಿಯು ಅಭೇದ್ಯವಾದ ರಾವಣನ ದಿವ್ಯರಥಕ್ಕೆ ಉತ್ತಮಾಶ್ವಗಳನ್ನು ಕಟ್ಟಿ ಧ್ವಜಸ್ತಂಭವನ್ನು ಎತ್ತಿ ನಿಲ್ಲಿಸಿ ಯುದ್ದೋಚಿತವಾದ ಸಮಸ್ತ ಸಾಮಗ್ರಿಗಳನ್ನೂ ತುಂಬಿ ಅದನ್ನು ತೆಗೆದು ಕೊಂಡು ಬಂದು ಅರಮನೆಯ ದ್ವಾರದಲ್ಲಿ ನಿಲ್ಲಿಸಲು ಧೀರನಾದ ರಾವಣನು ದ್ವಿತೀಯ ಮೇರು ಭೂಧರದಂತಿರುವ ಆ ತೇರನ್ನು ನೋಡಿ ಸಮಸ್ತ ಮಂಗಳವಾದ್ಯಗಳೊಡನೆ ಬಂದೇರಿದನು. ಕಡಲೆ ಹಸ್ಯಶ್ವರಥಪದಾತಿಗಳೆಂಬ ಚತುರ್ವಿಧ ಬಲವು ಅರಿಗಳೆದೆಯಲ್ಲಿ ಕಂಪನವನ್ನು ಹುಟ್ಟಿ ಸುತ್ತ ಮುಂದೆ ಹೊರಟಿತು. ಆಗ ಆ ಸೇನಾಸಮುದ್ರದ ಮುಂದೆಸೆಯಲ್ಲಿ ಮೊರೆಯು ತಿರುವ ಹೆಣ್ಣಾಳೆಗಳು-ಎಲೈ ಬಣಗುಹಗೆಗಳೇ ! ಕಲ್ಲಾಂತ ಭೈರವನಲ್ಲಿ ಕಾಳೆಗವು ಬೇಡ. ರಿಪುಕುಲಾಂಬುದ ಜಂಝಾವಾರು ತನೊಡನೆ ತೋಟಿ ಮೇಕೆ ಎಂದು ಹೇಳುತ್ತಿವೆಯೋ ಎಂಬಂತೆ ಒಪ್ಪುತ್ತಿದ್ದುವು. ಆಗ ವಿರೋಧಿಗಳ ಬಲಜಲಧಿಗೆ ಬಡಬಾ ನಲಪ್ರಾಯನಾದ ರಾವಣನು ತನ್ನೆ ಡಪಕ್ಕದ ಹತ್ತು ಕೈಗಳಿಂದ ಹತ್ತು ಬಿಲ್ಲುಗಳನ್ನು ಹಿಡಿದು ಬಲಗಡೆಯ ಹತ್ತು ಕೈಗಳಿಂದ ಕೂರಬಾಣಗಳನ್ನು ತೆಗೆದು ಸಂಧಾನಿಸಿ ಪ್ರಯೋಗಿಸುತ್ತ ಬರಲು ಒಂದೊಂದು ಬಾಣದ ಹತಿಯಿಂದ ಹತ್ತು ನೂರು ಸಾವಿರ ಹತ್ತು ಸಾವಿರ ಸಂಖ್ಯೆಯುಳ್ಳ ಕಪಿಗಳ ತಲೆಗಳು ಕತ್ತರಿಸಲ್ಪಟ್ಟು ಭೂಮಿಯಲ್ಲಿ ಬೀಳುತ್ತಿದ್ದುವು. ಆಗ ಬಹು ಕೋಪವಿಜೃಂಭಿತರಾದ ಕೋಡಗಪಡೆವಳ್ಳರು ರಾವಣ ನೊಡನೆ ಯುದ್ಧ ಮಾಡುವುದಕ್ಕೆ ತೊಡಗಿ ಕಾದಿ ಗವಯನು ಕೊಂದನು. ಗಜನು ಅರಚಿಗೊಂಡನು. ವಿನತನ ಪ್ರಾಣಗಳು ಕಂಠದೇಶಕ್ಕೆ ಬಂದವು. ಜಾಂಬವಂತನು ನರಳುತ್ತ ಹಿಂದಿರುಗಿದನು. ಶರಭನು ಬಿದ್ದು ಒದೆದುಕೊಂಡನು. ಬಾಣಪ್ರವೇಶದಿಂದ ಗಂಧಮಾದನನ ಎದೆಯಿಂದ ರಕ್ತವು ಜಾರಿತು. ಹೆಸರ್ಗೊಂಡ ಉಳಿದ ಕಪಿವೀರರನ್ನು ರಾವಣನ ಮುಂಗಡೆಯಲ್ಲಿ ಕಾಣೆನು. ಎರಡನೆಯ ಕಾಲರುದ್ರನಂತಿರುವ ರಾವಣನು ಯುದ್ದ ರಂಗದಲ್ಲಿ ಮುನಿದು ನಿಂತರೆ ಅವನೆದುರಿಗೆ ಸುಮ್ಮನೆ ನಿಂತು ನೋಡುವವರೇ ಮಹಾ ವೀರರು, ಮತ್ತು ಅವರೇ ಮಾರಿಯ ಮುಂದಲೆಯನ್ನು ಹಿಡಿದು ಕೊಯ್ದು ತಂದವರು ಮರು ಲೋಕಗಳ ಗಂಡನಾದ ದಶಕಂಠನ ಬಾಣಗಳ ಬಲಿ ಚ್ಚಿನ ಬೇಗೆ ಯೆದುರಿಗೆ ನಿಂತು ಸಹಿಸುವವರಾರು ? ರಾವಣನ ಬಾಣ ಪರಂಪರಾಹತಿಯಿಂದ ಸತ್ತೋರಗಿದ ಕಪಿಸಂದೋಹಕ್ಕೆ ಯಮಲೋಕದಲ್ಲಿ ನಿಲ್ದಾಣವು ಕಿಂಧವಾಯಿತು. ಉಳಿದ ಕಪಿಗಳು ಸುಗ್ರೀವನ ಆಜ್ಞೆಯನ್ನು ಗಣಿಸದೆ ರಾವಣನನ್ನು ನೋಡಿ