ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 173 ಮವನ್ನು ನೋಡಬೇಕು ಎಂದು ಬಿಲ್ಲಿನ ತೆಬ್ಬಿನಲ್ಲಿ ಬಾಣವನ್ನು ಹೂಡಿ ಗುರಿಗಟ್ಟಿ ನೀಲ ನನ್ನು ಹೊಡೆದನು. ಆಗ ನೀಲನು-ಎಲಾ ಬಡಾಳೇ ! ಈ ಬಾಣದಿಂದ ಶತ್ರುವು ಸಾಯುವನು. ಆ ಮೇಲೆ ನಾನು ಸುಖವಾಗಿ ಬಾಳುವೆನೆಂದು ನಿರ್ಧರಿಸಿದ್ದೀಯಾ ? ಛೇ ! ನೀಚನೇ ! ಹೋಗು, ಲೋಕದಲ್ಲಿ ಒಣಸೌದೆಗಳಿಂದ ಮಹಾಗ್ನಿಗೆ ಹಾನಿಯುಂ ಟಾದೀತೇ ? ಖಡ್ಡ ಹತಿಯಿಂದ ಆಕಾಶವು ಅಂಜುವುದೇ ? ಅದರಂತೆ ನಿನ್ನ ಬಾಣ ಹತಿಯಿಂದ ನನಗೆ ಬಾಧೆಯಾಗುವುದುಂಟೇ ಎಂದು ಹೇಳಿ ಬೊಬ್ಬಿರಿದು ಬಿಡುಗಣ್ಣರ ಸಂದಣಿಯು ಮಜಭಾಪು ಎಂದು ಹೊಗಳುತ್ತಿರಲು ರಾವಣನನ್ನು ತಿವಿದನು. ಅನಂ ತರದಲ್ಲಿ ರಾವಣನು ಆ ಪೆಟ್ಟನ್ನು ಸಹಿಸಿಕೊಂಡು ಕೋಪದಿಂದ ನೀಲನನ್ನು ಹೊಡೆ ದನು. ಈ ರೀತಿಯಾಗಿ ಸೋಲು ಗೆಲುವುಗಳಿಲ್ಲದೆ ಪುರತ್ರಯ ದಹನಾರಂಭಕಾಲದಲ್ಲಿ ನಂದೀಶ್ವರನೊಡನೆ ವಿದ್ಯುನ್ಮಾಲಿಗಾದಂತೆ ದಶಕಂಠನಿಗೆ ಅಗ್ನಿ ಪುತ್ರನೊಡನೆ ಯುದ್ಧ ವಾಗುತ್ತಿದ್ದಿತು. ಆಗ ನೀಲನು ರಾವಣನ ಮೇಲಿಡುವ ಗಿರಿತರು ಮೊದಲಾದವುಗಳಿ ದಲೂ ರಾವಣನು ನೀಲನ ಮೇಲೆ ಪ್ರಯೋಗಿಸುವ ಬಾಣಪರಂಪರೆಯಿಂದಲೂ ಭೂಮ್ಯಾಕಾಶ ಪ್ರದೇಶಗಳು ನಿರವಕಾಶವಾಗಿ ಹೋದುವು. ಹೀಗೆ ಉಭಯ ವೀರ ರಿಗೂ ಯುದ್ದ ವಾಗುತ್ತಿರುವಲ್ಲಿ ಹಾಸ್ಯ ಪ್ರಿಯನಾದ ನೀಲನು ತನ್ನ ಬಾಲವನ್ನು ಉದ್ದ ವಾಗಿ ಬೆಳೆಸಿಕೊಂಡು ರಾವಣನ ಮೇಲೆ ನೆಗೆದು ಬಾಲದಿಂದ ಅವನನ್ನು ಸುತ್ತಿ ಅಲ್ಲಾಡದ ಹಾಗೆ ಬಿಗಿದು ತಾನು ಮೇರು ಪರ್ವತದಂತೆ ಬೆಳೆದು ರಾವಣನನ್ನು ಮೇಲೆ ತಿಕೊಂಡು ಅಳದಿರೆನ್ನ ಯ ಕಂದಾ ಎಂದು ಕೂಗುತ್ತ ಜೋಗುಳವನ್ನು ಹಾಡು ತಿದ್ದನು. ಆಗ ಅಂಬರದಲ್ಲಿ ಸುರನಿತಂಬಿನಿಯರು ಕೈಹೊತ್ತು ಕೊಂಡು ಗಹಗಹಿಸಿ ನಕ್ಕರು. ಅನಂತರದಲ್ಲಿ ನೀಲನು ರಾವಣನನ್ನು ಒಂದೆರಡು ಗಳಿಗೆಗಳ ವರೆಗೂ ಅಲ್ಲಾ ಡಿಸುತ್ತಿದ್ದು ಆ ಮೇಲೆ ಗರನೆ ತಿರುಗಿಸಿ ಅವನ ರಥದಲ್ಲಿಳಿಸಿ ತಾನು ಆ ರಥದ ಧ್ವಜ ಸ್ತಂಭದ ಮೇಲೆ ಕುಳಿತುಕೊಂಡು ರಾವಣನನ್ನು ಕುರಿತು-ಎಲಾ, ನಿರ್ಲಜ್ಜ ನಾದ ರಕ್ಕಸನೇ ! ನಾವು ಯುದ್ಧದಲ್ಲಿ ಅತಿಬಲ, ಹೀನಬಲರೋ ? ನೀನೇ ಹೇಳು. ಮೃಗಗಳೆಂದು ನಮ್ಮನ್ನು ಹೀಯಾಳಿಸಿದಿಯಲ್ಲಾ, ಎಲಾ ! ನಾವು ಮರಗಳ ಮೇಲೆ ನೆಗೆದಾಡುವಂಥ ಕೋತಿಗಳೇ ? ನಿನಗೆ ಪ್ರಳಯವನ್ನುಂಟುಮಾಡುವಂಥ ಕಪಿಗಳಲ್ಲಿ ವೇ? ನೀನು ರಾಕ್ಷಸರಾಜನೋ ? ನಾಚಿಕೊಳ್ಳಬೇಡ. ಧೈರ್ಯದಿಂದ ಹೇಳು, ವಿಮಾನಸ ರಾದ ಅಮರರೂ ಕೂಡ ಇನ್ನೂ ನಮ್ಮ ಕೆಲಸಗಳ ಹವಣನ್ನು ಕಾಣರು ಎಂಬಲ್ಲಿ ಮಢನಾದ ನೀನೇನು ಒಲ್ಲಿ ? ಕಳ್ಳನಾದ ನಿನಗೆ ಲೋಕಮಾತೃವಾದ ಜಾನಕಿಯನ್ನು ಅಪಹರಿಸಿಕೊಂಡು ಬರುವಾಗ ಎಂಥ ಸಂತೋಷವಿದ್ದಿತು ? ತೋರಿಸು. ನೋಡುವಣ. ಛೇ! ನಾಯಿಯೇ ! ಪರಭಾಡ್ಯಾಪಹಾರಕನೇ ಎಂದು ಮತ್ತೆ ರಾವಣನ ನಡುನೆತ್ತಿ ಯನ್ನು ತಿವಿದನು. ಆಗ ರಾವಣನು ಮಹಾ ಕೋಪ ಕ೦ಪಿತಾಧರನಾಗಿ ತನ್ನ ಚಂದ್ರಹಾಸದಿಂದ ನೀಲನನ್ನು ಹೊಡೆಯಲು ನೀಲನು ಆ ಪೆಟ್ಟನ್ನು ತಪ್ಪಿಸಿಕೊಂಡು ಮತ್ತೆ ವಜ್ರ ಮುಷ್ಟಿ ಯಿಂದ ರಾವಣನನ್ನು ಹೊಯ್ದನು. ಆಗ ಲಂಕಾರಾಜನು ತನ್ನ ಕರಖಡ್ಗದಿಂದ