ಪುಟ:ಕಥಾಸಂಗ್ರಹ ಸಂಪುಟ ೨.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಮಾತಾಮಹರಿಂದ ಸಂಪಾದಿಸಲ್ಪಟ್ಟು ದು. ಆದುದರಿಂದ ಅದು ನನಗೆ ಸಲ್ಲ ತಕ್ಕುದಾ ಗಿದೆ. ನೀನು ಅದನ್ನು ಬಿಟ್ಟು ಹೋಗಬೇಕು ಎಂದು ನಾನು ಹೇಳಿದೆನೆಂಬುದಾಗಿ ಮೊದಲು ಸಾಮದಿಂದ ತಿಳಿಸು ಎಂದು ಹೇಳಿ ಕಳುಹಿಸಿದನು. ಆ ಮೇಲೆ ಪ್ರಹಸನು ಅಲ್ಲಿಂದ ಹೋಗಿ ಲಂಕಾದ್ವೀಪದಲ್ಲಿದ್ದ ಕುಬೇರನೊಡನೆ ಈ ವರ್ತಮಾನವನ್ನು ತಿಳಿ ಸಲು ಆತನು ಒಂದರೆಡು ಗಳಿಗೆಯ ವರೆಗೂ ಆಲೋಚಿಸಿ ಪ್ರಹಸ್ತನನ್ನು ಲಂಕೆಯಲ್ಲಿಯೇ ಬಿಟ್ಟು ತನ್ನ ತಂದೆಯಾದ ವಿಶ್ರವಸ್ಸಿನ ಒಳಿಗೆ ಶೀಘ್ರವಾಗಿ ಬಂದು ದಶಮುಖನು ತನಗೆ ಹೇಳಿಕಳುಹಿಸಿದ ವಾರ್ತೆಯನ್ನು ಬಿನ್ನ ವಿಸಲು ಆ ಮುನಿಯು-ಎಲೆ ಮಗನೇ ! ಕೇಳು. ಆ ದಶಕಂಠನು ಬಲು ಕೆಟ್ಟವನು. ಆದುದರಿಂದ ನೀನು ಆ ಲಂಕಾನಗರವನ್ನು ಬಿಟ್ಟು ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಮಾಡಿಕೊಂಡು ಉತ್ತರದಿಗಧಿಪತಿಯಾಗಿರು ಹೋಗು. ನಿನಗೆ ಶಿವನೊಡನೆ ಸ್ನೇಹವುಂಟಾಗುವುದು ಎಂದು ಹೇಳಿದನು. ಆ ಮೇಲೆ ಕುಬೇರನು ತಂದೆಗೆ ನಮಸ್ಕರಿಸಿ ಲಂಕಾನಗರಕ್ಕೆ ಬಂದು ಪ್ರಹಸ್ತನನ್ನು ಕುರಿತು-ಎಲೆ ಮಂತ್ರಿಯೇ ! ದಶಕಂಠನು ಹೇಳಿಕಳುಹಿಸಿದ ಮಾತು ಯುಕ್ತವಾದುದೇ ಸರಿ. ಇನ್ನು ಮೇಲೆ ನಾನು ಇಲ್ಲಿಂದ ಹೊರಟುಹೋಗುವೆನು. ಅವನು ಬಂದು ಇಲ್ಲಿ ಸುಖದಿಂದಿರಲಿ. ಈ ಸಂಗತಿಯನ್ನು ಅವನಿಗೆ ತಿಳಿಸು ಎಂದು ಹೇಳಿ ಆ ಪ್ರಹಸ್ತನನ್ನು ಅಲ್ಲಿಂದ ಕಳುಹಿಸಿ ಆ ಮೇಲೆ ಕುಬೇರನು ತನ್ನ ಪರಿವಾರದೊ ಡನೆ ವಿಮಾನಾರೂಢನಾಗಿ ಲಂಕೆಯನ್ನು ಬಿಟ್ಟು ಹೊರಟು ಕೈಲಾಸಾಚಲಕ್ಕೆ ಬಂದು ಅಲ್ಲಿ ವಿಶ್ವಕರ್ಮನಿಂದ ಮನೋಹರವಾದ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಅಲಕಾನಗರವೆಂಬ ಹೆಸರಿಟ್ಟು ಶಿವನ ಸ್ನೇಹವನ್ನು ಸಂಪಾದಿಸಿಕೊಂಡು ಅಲ್ಲೇ ಸುಖ ದಿಂದಿರುತ್ತಿದ್ದನು. ಇತ್ತಲಾ ಪ್ರಹಸ್ತನು ದಶಮುಖನ ಬಳಿಗೆ ಬಂದು-ನೀನು ಹೇಳಿಕಳುಹಿಸಿದ ಮಾತ್ರದಿಂದಲೇ ಕುಬೇರನು ಹೆದರಿ ಲಂಕಾನಗರವನ್ನು ಬಿಟ್ಟು ಓಡಿಹೋದನು ಎಂದು ಹೇಳಲು ಆಗ ದಶಗ್ರೀವನು ಸಂತೋಷದಿಂದ ಕೂಡಿದವನಾಗಿ ತನ್ನ ರಾಕ್ಷ ಸದರಿ ವಾರದೊಡನೆ ಹೊರಟು ಬಂದು ಮೃಗರಾಜನು ಹಿಮನಗರದ ಗುಹೆಯನ್ನು ಪ್ರವೇಶಿಸು ವಂತೆ ಲಂಕಾನಗರವನ್ನು ಪ್ರವೇಶಿಸಿದನು. ಅಲ್ಲಿ ಪ್ರಹಸ್ತ ಮಾರೀಚಾದಿ ಮಂತ್ರಿಗಳು ಸುಮಾಲಿ ಮಾಲ್ಯವಂತಾದಿ ರಾಕ್ಷಸನಾಯಕರನ್ನು ಕೂಡಿಸಿಕೊಂಡು ರಾಕ್ಷಸರಾ ಟ್ಯಾಧಿಪತ್ಯಾರ್ಥವಾಗಿ ದಶಾನನನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕವನ್ನು ಮಾಡಿ ದರು. ಆ ಮೇಲೆ ರಾಕ್ಷಸೇಶ್ವರನಾದ ದಶಮುಖನು ತನ್ನ ಸಹೋದರಿಯಾದ ಶೂರ್ಪ ನಖಿಯನ್ನು ಕಾಲಕೇಯರೆಂಬ ಅಸುರರಲ್ಲಿ ಬಹು ಬಲಿಷ್ಠ ನಾದ ವಿದ್ಯುಜ್ಜಿ ಹೃನೆಂಬವ ನಿಗೆ ಕೊಟ್ಟು, ಅತಿವಿಭವದಿಂದ ಮದುವೆಮಾಡಿ ಸುಖವಾಗಿ ಲಂಕಾಪಟ್ಟಣವನ್ನು ಆಳುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ದಶಕಂಠನು ಬೇಟೆಯಾಡಬೇಕೆಂದು ಅಪೇ ಕಿಸಿ ಸಾಯುಧರಾದ ಬೇಟೆಗಾರರೊಡನೆ ಕೂಡಿ ಹೊರಟು ಮೃಗಾನ್ವೇಷಣಾರ್ಥ ವಾಗಿ ಅರಣ್ಯಗಳಲ್ಲಿಯ ಪರ್ವತಗಳಲ್ಲಿಯೂ ಸಂಚರಿಸುತ್ತ ಪೊದೆಗಳೊಳಡಗಿ ಶಬ್ದವ