ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 179 ನುರಿಯಾಗಿ ಮಾಡಿಬಿಡುವೆನೆಂದು ಮುಷ್ಟಿಯನ್ನೆತ್ತಿದನು. ಶ್ರೀರಾಮಚಂದ್ರನು ಲಕ್ಷ WAಂಜನೇಯರ ಉದ್ಯೋಗವನ್ನು ನೋಡಿ ಸಾಕುಸಾಕು ! ಅನುಚಿತಕಾರ್ಯದಲ್ಲಿ ಆದ್ರೆ ಮಿಸಬೇಡಿರಿ, ಪರರ ಉನ್ನತಿಯನ್ನು ನೋಡಿ ಅಸೂಯೆಪಡತಕ್ಕುದು ಉತ್ತಮರಿಗೆ ಭೂಷಣವಲ್ಲ. ಇಂಥ ಹೆಚ್ಚು ಕಡಮೆಗಳನ್ನು ಯೋಚಿಸುವುದರಿಂದ ಪ್ರಯೋಜನ ವೇನು ? ಯುದ್ಧದಿಂದ ಉಂಟಾಗುವ ಜಯಾಪಜಯಗಳಲ್ಲಿ ನ್ಯೂನಾಧಿಕಾಂಶಗಳನ್ನು ನೋಡುವುದರಲ್ಲಿ ಮನಸ್ಸಿಡಿರಿ ಎಂದು ಹೇಳಿ ಅವರಿಬ್ಬರನ್ನೂ ಸಮಾಧಾನಪಡಿಸಿ ನಿಲ್ಲಿಸಿದನು. - ಅನಂತರದಲ್ಲಿ ಲೋಕಾಪ್ಪು ತಯುದ್ಧ ನಿರೀಕ್ಷಣಾರ್ಥವಾಗಿ ಗಗನಮಂಡಲದಲ್ಲಿ ನೆರೆದಿದ್ದ ಸುರಸಮಹವು ನೊಸಲುಗಳಲ್ಲಿ ಅಂಜಲಿಗಳನ್ನಿಟ್ಟುಕೊಂಡು ನಿಂತು ಸ್ವಾಮಿ ಯಾದ ಪಾಕಶಾಸನನನ್ನು ಕುರಿತು ಮೃದುಮಧುರವಾದ ಮಾತುಗಳಿಂದ ಎಲೆ, ಸುರಕಿರೀಟಖಚಿತರತ್ನ ರುಚಿನೀರಾಜಿತಚರಣಯುಗಳನೇ ! ನೋಡು. ಸದ್ದ ರ್ಮಸ್ಥಾಪಕ ನಾದ ಶ್ರೀರಾಮನು ನೆಲದ ಮೇಲೆ ನಿಂತಿದ್ದಾನೆ. ಅವನಿಗೆ ಪ್ರತಿಭಟನೂ ನೀಚನೂ ಆದ ರಾವಣನು ರಥಾರೂಢನಾಗಿ ಮೆರೆಯುತ್ತಿದ್ದಾನೆ. ಮಹಾತ್ಮನಾದ ನೀನು ಈ ಅಸಂಗತ ವನ್ನು ನೋಡುತ್ತ ಸುಮ್ಮನಿರುವುದು ಚಿತವೇ ಎಂದು ಬಿನ್ನವಿಸಲು ಇಂದ್ರನು ಆ ಮಾತು ಗಳಿಗೊಪ್ಪಿ ಆ ವಿಷಯವನ್ನು ಬ್ರಹ್ಮ ರುದ್ರರುಗಳಿಗೆ ತಿಳಿಸಿ ಅವರ ಸಮ್ಮತಿಯಿಂದ ತನ್ನ ಸಾರಥಿಯಾದ ಮಾತಲಿಯನ್ನು ಕರೆದು-ಎಲೈ ಮಾತಲಿಯೇ ! ನನ್ನ ರಥವನ್ನು ಸಮ ಸ್ತ್ರ ಯುದ್ಧ ಸಾಮಗ್ರಿಗಳೊಡನೆ ಸಿದ್ಧ ಮಾಡಿ ತೆಗೆದುಕೊಂಡು ಹೋಗಿ ನೃಪಚೂಡಾ ಮಣಿಯಾದ ರಾಮನಿಗೊಪ್ಪಿಸಿ ನೀನು ಸಾರಥ್ಯವನ್ನು ಮಾಡು. ನಡೆ ಎಂದು ಅಪ್ಪಣೆ ಯನ್ನಿತ್ತನು. ಆಗ ಮಾತಲಿಯು ದಿವ್ಯರಥಕ್ಕೆ ಉತ್ತಮಾಶ್ವಗಳನ್ನು ಕಟ್ಟಿ ಯುದ್ದೋ ಚಿತ ಸಾಮಗ್ರಿಗಳನ್ನು ಅದರಲ್ಲಿ ಸಿದ್ಧ ಮಾಡಿಟ್ಟು ಮೇಲೇರಿಕೊಂಡು ಹೊರಟು ಶೀಘ್ರ ವಾಗಿ ರಣಭೂಮಿಗೆ ಬಂದು ಸರೋಜದಳನೆಯನನಾದ ಶ್ರೀರಾಮನಿಗೆ ನಮಸ್ಕರಿಸಿಎಲೈ ರಾಜೇಂದ್ರನೇ ! ಇದು ದೇವೇಂದ್ರನ ರಥವು. ನಿನ್ನ ಅಡಿದಾವರೆಗಳಿಂದ ಇದನ್ನು ಅಲಂಕರಿಸಬೇಕೆಂದು ಆತನು ಇದನ್ನು ನಿನಗಾಗಿ ಕಳುಹಿಸಿರುವನು. ಅದು ಕಾರಣ ಈ ರಥದಮೇಲೆ ಬಿಜಯಮಾಡಬೇಕೆಂದು ಬಿನ್ನವಿಸಿದನು. ಆಗ ಶ್ರೀರಾಮನು ಮಾತ ಲಿಯನ್ನು ಕುರಿತು-ಎಲೈ ಇಂದ್ರಸಾರಥಿಯೇ ! ವನವಾಸಿಗಳಾದ ನಾವು ಇಂದಿನ ವರೆಗೂ ಯಾವ ತೇರಿನ ಬಲದಿಂದಲೂ ವಿರೋಧಿಗಳನ್ನು ಜಯಿಸಲಿಲ್ಲ. ಈಗ ಮಾತ್ರ ನಿನ್ನೊಡೆಯನ ಹಂಗು ನಮಗೇಕೆಬೇಕು ? ಆತನು ಮಾಡಿದ ಈ ಉಪಕಾರದಿಂದ ನಾವು ತುಂಬಾ ಸಂತುಷ್ಟರಾಗಿರುವೆವು. ಮತ್ತು ಕೃತಜ್ಞರಾಗಿರುವೆವು. ನಾನು ಬರಿಗಾಲಿ ನಿಂದಲೇ ನಿಂತು ನಿನ್ನೊಡೆಯನು ಮೆಚ್ಚುವ ಹಾಗೆ ಈ ಸುರವಿರೋಧಿಯೊಡನೆ ಕಾದಿ ಗೆಲ್ಲುವೆನು. ಅದು ಕಾರಣ ನೀನು ಸುರಲೋಕವನ್ನು ಕುರಿತು ತೆರಳು. ಅಲ್ಲದಿದ್ದರೆ ನನ್ನ ಪಾರ್ಶ್ವದಲ್ಲಿದ್ದುಕೊಂಡು ನಮ್ಮ ಜಗಳದ ಕ್ರಮವನ್ನೆಲ್ಲಾ ನೋಡಿಕೊಂಡು ಹೋಗಿ ಇಂದ್ರಾದಿಗಳಿಗೆ ಚೆನ್ನಾಗಿ ತಿಳಿಸು ಎಂದು ಹೇಳಿದಷ್ಟರಲ್ಲೇ ನಾರದನು ಬಂದು-ಎಲೈ ದಿನಕರಕುಲತಿಲಕನಾದ ನೃಪನೇ ! ಮನಸ್ಕರಿಸು, ಇಂದ್ರಾದೃಷ್ಟ ದಿಕ್ಷಾಲಕರು ನನ್ನನ್ನು