ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು. 183 .ಸ್ಥಿತಿಯನ್ನು ನೋಡಿ ಅಲಘುಪ್ರಯತ್ನದಿಂದ ಬ್ರಹ್ಮನನ್ನು ಮೆಚ್ಚಿಸಿ ತ್ರಿಲೋಕದುರ್ಲಭ ವಾದ ವರವನ್ನು ಪಡೆದವನಾದ ರಾವಣನ ತಪೋಮಹಿಮೆಗೆ ಮೆಚ್ಚಿ ಆಶ್ಚರ್ಯಮಯ ಮನಸ್ಕನಾಗಿವೃಥಾಯಾಸದಿಂದೇನು ಪ್ರಯೋಜನವು ? ಇನ್ನು ಮೇಲೆ ಈ ಯುದ್ಧ ವು ಸಾಕು. ಲಂಕಾನಾಯಕನ ಆಯುಷ್ಯಕ್ಕೆ ಎಂದಿಗೂ ಅವಸಾನವಿಲ್ಲ. ಅದು ಕಾರಣ ಇವನೊಡನೆ ಯುದ್ಧಕ್ಕೆ ಅವಸಾನವನ್ನು ನಾನೇ ಮಾಡು ವನು ಎಂದು ಧನುರ್ಬಾಣಗ ಳನ್ನು ರಥದಲ್ಲಿರಿಸಿ ತಾನು ಧ್ವಜಸ್ತಂಭವನ್ನು ಒರಗಿ ಕೂತುಕೊಂಡು ವ್ಯಸನದಿಂದ ಬಳಲಿ ಪೂತುರೇ, ರಾವಣಾ! ಮಜಭಾಪು ಎನ್ನುತ್ತ ಬೆರಗಾಗಿದ್ದನು. . ತತ್ ಕ್ಷಣದಲ್ಲೇ ಅಗಸ್ಯ ಮಹಾಮುನಿಯು ರಾಮನ ಬಳಿಗೆ ಬಂದು ಅವನಿಗೆ ಆದಿತ್ಯ ಹೃದಯವೆಂಬ ಮಹಾಮಂತ್ರವನ್ನು ಉಪದೇಶಿಸಿ-ನೀನು ಪ್ರಯೋಗಿಸುವ ಬಾಣದ ಆದಿಮಧ್ಯಾಂತಸ್ಥಾನಗಳಲ್ಲಿ ತ್ರಿಮೂರ್ತಿಗಳನ್ನು ನೆಲೆಗೊಳಿಸಿ ಈ ಅಮರವಿ ರೋಧಿಯ ವಕ್ಷಸ್ಥಳಕ್ಕೆ ಪ್ರಯೋಗಿಸು ಎಂದು ಹೇಳಿ ಹೊರಟುಹೋದನು. ಆ ಮೇಲೆ ಶ್ರೀ ರಾಮನೆದ್ದು ಬಿಲ್ಲಿನಲ್ಲಿ ದಿವ್ಯ ಮಾರ್ಗಣವನ್ನು ಹೂಡಿ ಅದರಲ್ಲಿ ಹರಿಹರಹಿರಣ್ಯಗರ್ಭ ರನ್ನು ಮಂತ್ರದಿಂದ ಪ್ರತಿಷ್ಟಿ ಸಿ ರಾವಣನೆದೆಗೆ ಗುರಿಗಟ್ಟಿ ಹೊಡೆದನು. ಆಗ ರಾವಣನು ಕಂಗೆಡದೆ ತನ್ನ ಮೇಲೆ ಬರುತ್ತಿರುವ ದಿವ್ಯಾಸ್ತ್ರವನ್ನು ಅನೇಕ ಮಂತ್ರಾಸ್ತ್ರಗಳಿಂದ ಹೊಡೆದನು. ಸೂರ್ಯಚಂದ್ರರನ್ನು ಹಿಡಿದು ನುಂಗುವ ರಾಹುವನ್ನು ನಕ್ಷತ್ರಗಳು ತಡೆದು ನಿಲ್ಲಿಸಬಲ್ಲುದೇ ? ರಾಮಬಾಣಗಳು ರಾವಣನ ಮಹಾಸ್ತ್ರಗಳನ್ನೆಲ್ಲಾ ತರಿದೆ ಟ್ಟು ಮಹಾವೇಗದಿಂದ ಬಂದು ಅವನ ವಕ್ಷಸ್ಥಳವನ್ನು ಹೊಕ್ಕು ಬೆನ್ನಿನಲ್ಲಿ ಹಾಯಲು ಆಗ ರಾವಣನು ಕೆಳಗೆ ಬಿದ್ದನು. ಕೂಡಲೆ ಅವನ ಪ್ರಾಣಗಳು ದೇಹವನ್ನು ಬಿಟ್ಟು ಹೊರಟುಹೋದವು. ಆಗ ಸುರಲೋಕದಲ್ಲಿ ಸಂತೋಷಸೂಚಕವಾದ ಧ್ವನಿಗಳೂ ದುಂದು ಭಾದಿ ವಾದ್ಯ ಧ್ಯಾನಗಳೂ ಕೂಡಿ ಜಗತ್ತೆಲ್ಲವೂ ಶಬ್ದ ಮಯವಾಗಿದ್ದಿತು. ರಾಮನ ಮೇಲೆ ಪೂಮಳೆಯು ಸುರಿದಿತು. ಸೂರನು ಲೋಕಾನಂದಕರವಾದ ತನ್ನ ತೇಜಸ್ಸಿ ನಿಂದ ಬೆಳಗಿದನು. ಶೈತ್ಯಸೌರಭ್ಯಮಾಂದ್ಯ ಗುಣಯುಕ್ತವಾದ ವಾಯುವು ಬೀಸಿತು. ದಿಕ್ಸಾಲಕರೆಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ನಂಬಿಕೆಯನ್ನಿಟ್ಟರು. ದೇವವಾರಾಂಗನೆ ಯರೆಲ್ಲಾ ನಲಿದು ನರ್ತಿಸಿದರು. ದೇವಪುರುಷಯುನ್ಮದ ಅನುರಾಗಲತೆಯು ಕುಡಿ ಯೊಡೆದಿತ್ತು. ಮಹಾತ್ಮರ ಹೃದಯದಲ್ಲಿ ವಿಕಾಸಭಾವವುಂಟಾಯಿತು. ವಿಶೇಷ ವಿಷ ಯಗಳನ್ನು ಹೇಳವುದೇಕೆ ? ಲೋಕತ್ರಯಜೀವಿಜಾಲದ ಹೃದಯದಲ್ಲಿ ಸಮಾಧಾನವು ಹುಟ್ಟಿತು. ವಿಭೀಷಣನು ಶೂರಸೋದರಮೃತಿವ್ಯಸನದಿಂದ ಕಂಗೆಟ್ಟವನಾಗಿ ಕಣ್ಣೀರು ಗಳನ್ನು ಸುರಿಸಿದನು. ಲೋಕದಲ್ಲಿ ಭ್ರಾತೃವಾದವನು ಎಂಥ ದುರ್ಮಾರ್ಗಿಯಾಗಿ ದ್ದರೂ ವಿರೋಧಿಯಾಗಿದ್ದರೂ ಅವನು ರಕ್ತ ಸಂಬಂಧಿಯಾದುದರಿಂದ ಅವನ ವಿನಾಶವು ಮಹಾ ಪರಿತಾಪ ದುಃಖಗಳನ್ನು ಕೊಡದೆ ಬಿಡುವುದಿಲ್ಲ. ಇಂಥ ಅಪ್ರತಿಮಮಲ್ಲ ನಾದ ರಾವಣನ ಮೃತಿವಾರ್ತೆಯನ್ನು ಕೇಳಿ ಅವನ ಪಟ್ಟದರಸಿಯಾದ ಮಂಡೋದರಿಯು ವಾಚಾತೀತಸಂತಾಪ ದುಃಖಗಳಿ೦ದ ಪೀಡಿತಳಾಗಿ ಬಿದ್ದು ಮೂರ್ಛಹೊಂದಿ ಹಿತೋಪ ಚಾರಗಳಿಂದೆದ್ದು ಕುಳಿತು ನಿಜಪತಿಯಾದ ರಾವಣನ ಲೋಕೋತ್ತರ ಶೌರ್ಯ ಧೈರ್ಯ