ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 187 ಯೋಚನೆಯಿಂದ ಬಂದು ನಿನ್ನನ್ನು ತೆಗೆದುಕೊಂಡು ಬಂದ ರಾವಣನನ್ನು ಅವನ ಪ್ರತ ಮಿತಭಾಂಧವಾದಿಗಳೊಡನೆ ಕೊಂದು ನಿನ್ನನ್ನು ಸೆರೆಯಿಂದ ಬಿಡಿಸಿದೆನೇ ಹೊರತು ಇನಃ ನನ್ನೊ ಡನೆ ಕೂಡಿ ಬಾಳಬೇಕೆಂಬ ದುರಾಲೋಚನೆಯಿಂದಲ್ಲ, ಒಂದು ಸಂವತ್ವ ರದಿಂದಲೂ ದುಷ್ಟರೂ ಮರ್ಖರೂ ಪಾಪಕರ್ಮಾಸಕ್ಕರೂ ಆದ ರಾಕ್ಷಸರ ಮನೆ ಯಲ್ಲಿದ್ದ ನಿನ್ನೊ ಡನೆ ನಾನು ತಿರಿಗಿ ಕೂಡಿ ಬದುಕಿದರೆ ಜಗತ್ತಿನ ಜನರು ಒಪ್ಪರು. ನೀನು ಭೂಮಿಯ ಮಗಳು. ಮಹಾ ಪತಿವ್ರತೆಯು, ಒಳ್ಳೆಯ ನಡತೆಯುಳ್ಳವಳು ಎಂಬುದನ್ನು ನಾನು ಚೆನ್ನಾಗಿ ಬಲ್ಲೆನು. ಆದಾಗ್ಯೂ ಲೋಕಾಪವಾದಕ್ಕೆ ಅಂದೆ ನ ವುದು ಉತ್ತಮ ಕುಲದಲ್ಲಿ ಹುಟ್ಟಿದವರಿಗೆ ಆವಶ್ಯಕ ಧರ್ಮವು. ನಾನು ಏಕಪತ್ನಿ ವ್ರತಸ್ಥನಾದುದರಿಂದ ನಿನ್ನನ್ನು ಬಿಟ್ಟ ಮೇಲೆ ಮತ್ತೊಬ್ಬಳನ್ನು ಮದುವೆಯಾಗುವು ದಿಲ್ಲ ಇನ್ನು ಮೇಲೆ ನಾನು ಅಯೋಧ್ಯಾನಗರಕ್ಕೆ ಹೋಗಿ ನಾನು ಬರುವುದನ್ನೇ ನಿರೀಕ್ಷಿಸುತ್ತ ಪ್ರಾಣಧಾರಣೆಯನ್ನು ಮಾಡಿಕೊಂಡಿರುವ ಭರತನನ್ನು ಸಮ್ಮತಿಪಡಿಸಿ ಆತನಿಗೆ ಪಟ್ಟಾಭಿಷೇಕವನ್ನು ಮಾಡಿ ವೃದ್ದಳೂ ನನಗೆ ತಾಯಿಯ ಮತ್ತು ಪೂಜಳೂ ಆದ ಕೌಸಲ್ಯಾದೇವಿಯನ್ನು ನನ್ನ ಸಂಗಡ ಕರೆದು ಕೊಂಡು ತಪೋವನಕ್ಕೆ ಹೋಗಿ ಅಲ್ಲಿ ಪಾರಮಾರ್ಥಿಕ ಫಲಾಪೇಕ್ಷೆಯಿಂದ ದೇಹಾವಸಾನಕಾಲದ ವರೆಗೂ ತಪಸ್ಸನ್ನು ಮಾಡಿಕೊಂಡಿರುವೆನು. ನೀನು ನಿನ್ನ ತಂದೆಯಾದ ಜನಕರಾಜನ ಮನೆಗಾದರೂ ಅಥವಾ ನಿನ್ನ ಮನಸ್ಸು ಬಂದ ಇನ್ನಾವ ಕಡೆಗಾದರೂ ಹೋಗಬಹುದು ಎಂದು ಹೇಳಿ ಸುಮ್ಮನಾಗಲು ಆಗ ಸೀತೆಯು ತನ್ನ ಮನಸ್ಸಿನಲ್ಲಿ ಸರ್ವಜ್ಞನಾದ ಈ ರಾಮಚಂದ್ರನು ಸಕಲ ಜಗಜೀವಿಜಾಲದ ಮನೋಗತಗಳನ್ನು ಚೆನ್ನಾಗಿ ಬಲ್ಲವನಾದಾಗ ಅಕಳಂಕ ನಾದ ತಾನು ತನಗೆ ಬರುವ ಲೋಕಾಪವಾದವನ್ನು ತಪ್ಪಿಸಿಬಿಡುವುದಕ್ಕೋಸ್ಕರ ನನ ಗಿಂಥ ಮಾತುಗಳನ್ನು ಹೇಳುತ್ತಿರುವನು. ನಾನು ಮಹಾತ್ಮನಾದ ಈತನ ಚಿತ್ತ ವೃತ್ತಿ ಗನುಸಾರವಾಗಿ ನಡೆದು ನನ್ನ ಸತ್ಯವನ್ನು ತೋರಿಸಿಕೊಳ್ಳುವೆನೆಂದು ಯೋಚಿಸಿ, ಗಡಗ ಡನೆ ನಡುಗಿ ಕಣ್ಣೀರುಗಳನ್ನು ಸುರಿಸುತ್ತ ನಮಸ್ಕರಿಸಿ ಶ್ರೀರಾಮನನ್ನು ಕುರಿತು ಎಲೈ ಪ್ರಾಣಕಾಂತನೇ ! ನೀನು ಕರುಣಿಸಿ ನನ್ನ ಕೈಹಿಡಿದಂದಿನಿಂದ ಅಯೋಧ್ಯೆಯಲ್ಲಿ ದ್ವಾದಶಸಂವತ್ಸರಗಳೂ ಅರಣ್ಯದಲ್ಲಿ ಹದಿಮೂರು ಸಂವತ್ಸರಗಳೂ ನಿನ್ನ ಸೇವೆಯನ್ನು ಮಾಡಿಕೊಂಡು ನಿನ್ನೊಡನೆ ಇದ್ದೆನಷ್ಟೆ. ಈ ವರೆಗೂ ನನ್ನ ನಡತೆಯಲ್ಲಿ ಎಳ್ಳಷ್ಟಾ ದರೂ ತಪ್ಪನ್ನು ಕಂಡಿಯಾ ? ಹಾಗೆ ಕಂಡಿದ್ದರೆ ಹೇಳು. ನಾನು ಇದುವರೆಗೂ ಲಂಕೆಯಲ್ಲಿ ಹೇಗಿದ್ದೆನೋ ಆ ಸ್ಥಿತಿಯನ್ನೆಲ್ಲಾ ಚೆನ್ನಾಗಿ ಕಂಡುಬಂದಿರುವ ನಿನ್ನ ಪ್ರಿಯ ದೂತನಾದ ಆಂಜನೇಯನು ಇದೇ ! ಇಲ್ಲೇ ನಿಂತಿರುವನು. ಇವನು ಆ ವರ್ತಮಾನವನ್ನೆಲ್ಲಾ ನಿನಗೆ ಮೊದಲೇ ಹೇಳಿರಬಹುದು. ನಿನಗಿಷ್ಟವಾದರೆ ಈಗಲೂ ನನ್ನೆದುರಿಗೆ ಕೇಳು. ಸರ್ವಪ್ರಕಾರದಲ್ಲೂ ನನಗೆ ಪತಿಯಾಗಿರುವ ನೀನು ಅಬಲೆ ಯಾದ ನನ್ನಲ್ಲಿ ಕರುಣೆಯನ್ನಿಡದೆ ಕಲ್ಲೆದೆಯುಳ್ಳವನಾಗಿ ಇಂಥ ನಿರ್ದಯೋಕ್ತಿ ಗಳೆಂಬ ಕೂರಲಗುಗಳಿಂದ ನನ್ನೆದೆಯನ್ನು ಸೀಳುವುದು ಸರ್ವಪಾಣಿಹಿತನಾದ ನಿನಗೆ ಧರ್ಮವೇ ? ನನ್ನ ಪ್ರಾಣೇಶನಾದ ನೀನು ನನ್ನನ್ನು ಇಷ್ಟು ಕಠಿಣೋಕ್ತಿಗಳಿಂದ ನಿಂದಿಸಿ