ಪುಟ:ಕಥಾಸಂಗ್ರಹ ಸಂಪುಟ ೨.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ನ್ಯಾಲಿಸುತ್ತ ಗುಹೆಗಳನ್ನು ಪ್ರವೇಶಿಸಿ ನೋಡುತ್ತ ನಾನಾ ವಿಧವಾದ ಮೃಗಗಳನ್ನು ಕೊಲ್ಲುತ್ತಾ ಬರುತ್ತಿರಲು ಅಲ್ಲೊಂದು ಕಡೆಯಲ್ಲಿ ತನ್ನ ಮಗಳೊಡನೆ ವಾಸಿಸುತ್ತಿದ್ದ ಮಯನೆಂಬವನನ್ನು ನೋಡಿ ನೀನು ಯಾರು ? ಈ ಕಾಡಿನಲ್ಲಿ ವಾಸಿಸುವುದಕ್ಕೆ ಕಾರಣವೇನು ? ಈ ಅಬಲೆಯು ಯಾರ ಮಗಳು ? ನಿನ್ನ ಉದ್ಯೋಗವಾವುದು ? ಎಂದು ಕೇಳಲು ಅದಕ್ಕೆ ಮಯನು ಎಲೈ ವೀರನೇ ? ಕೇಳು ಈ ಲೋಕದಲ್ಲಿ ನನ್ನನ್ನು ಮಯನೆಂದು ಕರೆಯುತ್ತಾರೆ. ನನಗೆ ಸಂಪ್ರಾಪ್ತವಾಗಿರುವ ಅಪಾರವಾದ ದುಃಖವನ್ನು ಯಾರು ತಾನೆ ಪರಿಹರಿಸಬಲ್ಲರು ? ಆದರೂ ಹೇಳುತ್ತೇನೆ ಕೇಳು. ಅಪ್ಪರ ಸ್ತ್ರೀಯರೊ ಳಗೆ ಶ್ರೇಷ್ಠಳಾದ ಹೇಮೆ ಎಂಬ ವನಿತಾಮಣಿಯ ವಿಷಯವನ್ನು ನೀನು ಕೇಳಿಬಲ್ಲೆ ಯಷ್ಟೆ ? ದೇವತೆಗಳು ಪ್ರೀತಿಯಿಂದ ಆಕೆಯನ್ನು ನನಗೆ ಹೆಂಡತಿಯನ್ನಾಗಿ ಮಾಡಿ ಕೊಟ್ಟರು. ನಾನೂ ಐನೂರು ಸಂವತ್ಸರಗಳ ವರೆಗೂ ಆಕೆಯೊಡನೆ ಸುಖಿಯಾಗಿದ್ದನು. ಆ ಮೇಲೆ ನನಗೆ ಆ ಸುಂದರಿಯಲ್ಲಿ ಮಾಯಾವಿ ದುಂದುಭಿ ಎಂಬಿಬ್ಬರು ಗಂಡುಮ ಕಳೂ ಸ್ತ್ರೀಶಿರೋಮಣಿಯಾದ ಮಂಡೋದರಿ ಎಂಬ ಈ ಹೆಣ್ಣು ಮಗಳೂ ಹುಟ್ಟಿದರು. ಆ ಮೇಲೆ ನನ್ನ ದೌರ್ಭಾಗ್ಯವಶದಿಂದ ಆಕೆಯೊಡನೆ ನನಗೆ ವಿಯೋಗವುಂಟಾಯಿತು. ಪ್ರಾಣಪ್ರಿಯಳಾದ ಪತ್ನಿ ಯ ವಿಯೋಗ ತಾಪವನ್ನು ಸಹಿಸಿಕೊಂಡು ಯಾವನು ತಾನೇ ಬದುಕಬಲ್ಲನು ? ಕಠಿಣಹೃದಯನಾದ ನಾನು ಮೊದಲು ಆಕೆಯನ್ನು ವಿವಾಹವಾಗಿ ಮಾಯೆಯಿಂದ ಹೇಮೆ ಎಂಬ ಪುರವನ್ನು ನಿರ್ಮಿಸಿಕೊಂಡು ಅಲ್ಲಿ ಸುಖಿಯಾಗಿದ್ದನು. ಈಗ ಸಹಿಸಲಶಕ್ಯವಾದ ದುಃಖದಿಂದ ಅನಾಥನಾಗಿ ಆ ಪಟ್ಟಣವನ್ನೂ ಬಿಟ್ಟು ಈ ಮಗಳನ್ನು ಕರೆದುಕೊಂಡು ಹೊರಟು ಬಂದು ಸಂಶಜನೂ ಯೋಗ್ಯನೂ ಆದ ಒಬ್ಬ ವರನಿಗೆ ಈಕೆಯನ್ನು ಕೊಡಬೇಕೆಂಬ ನಿರೀಕ್ಷೆ ಯಿಂದ ಈ ಅರಣ್ಯದಲ್ಲಿ ಸೇರಿ ಕೊಂಡಿದ್ದೇನೆಂದು ಹೇಳಿ ನೀನು ಯಾರು ? ಎಂದು ಕೇಳಿದನು. ದಶಮುಖನುಎಲೈ ಮಯನೇ ! ಕೇಳು. ನಾನು ಪುಲಸ್ಯ ಮಹಾಮುನಿಯ ಪುತ್ರನಾದ ವಿಶ್ರವಸ್ಸಿನ ತನಯನು, ನನ್ನನ್ನು ದಶಕಂಠನೆಂದು ಕರೆಯುವರು ಎಂದು ಹೇಳಲು ಈ ಮಾತನ್ನು ಕೇಳಿದ ಮಯನು ಸಂತೋಷಿಸಿ-ಈಗ ನನ್ನಿ ಷ್ಠಾರ್ಥವು ಸಿದ್ಧಿಸಿತು. ಈ ಪುತ್ರಿಗೆ ಯೋಗ್ಯನಾದ ವರನು ದೊರಕಿದನು ಎಂದು ಮನಸ್ಸಿನಲ್ಲಿ ಆಲೋಚಿಸಿ ದಶಗ್ರೀವನನ್ನು ಕುರಿತು- ಎಲೈ ಮಹಾತ್ಮನೇ ! ಬ್ರಹ್ಮಕುಅಸಂಭವನಾದ ನಿನಗಿಂತಲೂ ಸತ್ತುಲೋತ್ಸ ನೃನದಾರುಂಟು? ಸು೦ದರಿಯ ಸುಶೀಲೆಯ ಆದ ಈ ನನ್ನ ಪುತ್ರಿಯನ್ನು ಪ್ರಭಾವ ದಿಂದ ಪರಿಗ್ರಹಿಸಬೇಕೆಂದು ಪ್ರಾರ್ಥಿಸಲು ದಶವದನನು ಹಾಗೇ ಆಗಲೆಂದು ಒಪ್ಪಿ ಕೊಂಡನು. ಆ ಮಯನ ಮಾಯಾಬಲವಿಂತಿರುವುದೆಂದು ಹೇಳಬಲ್ಲವರಾರು ? ನವರತ್ನಖಚಿತವಾಗಿಯ ವಿಚಿತ್ರತರವಾಗಿ ಯ ಸರ್ವಲೋಕರನ್ನವಾಗಿಯ ಇರುವ ವಿವಾಹ ಮಂಟಪವು ಆ ಕ್ಷಣದಲ್ಲಿಯೇ ಉಂಟಾಗಿ ಪರಿಶೋಭಿಸಿತು. ಆಗ ಮಯನು ಅನೇಕರಾದ ತತ್ವಜ್ಞಾನಿಗಳನ್ನು ಕರೆಯಿಸಿಕೊಂಡು ವೈದಿಕ ವಿಧಾನದಿಂದ ಅಗ್ರಿ ಯಲ್ಲಿ ಹೋಮಮಾಡಿ ಮಂಡೋದರಿಯನ್ನು ರಾವಣನಿಗೆ ಧಾರಾ ಪೂರ್ವಕವಾಗಿ ಮದುವೆ ಮಾಡಿಕೊಟ್ಟನು. ಆ ಮೇಲೆ ಅಳಿಯನಿಗೆ ಬಹುಮಾನವಾಗಿ ಒಂದು ಶಕ್ತಿ