ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 191 ಸೇವೆಯನ್ನು ಕೈಕೊಂಡು ಲಂಕಾನಗರದ ಜನಗಳಿಗೆಲ್ಲಾ ದರ್ಶನಾಶೀರ್ವಾದಗಳನ್ನು ಕೊಟ್ಟು ಅವರನ್ನೆಲ್ಲಾ ಸಂತೋಷ ಸಮಾಧಾನಯುಕ್ತರನ್ನಾಗಿ ಮಾಡಿ ಆ ಮೇಲೆ ನಿಜ ರಾಜಧಾನಿಯಾದ ಅಯೋಧ್ಯಾ ಪಟ್ಟಣಕ್ಕೆ ದಯೆಮಾಡಬಹುದೆಂದು ಭಯಭಕ್ತಿ ಪುರಸ್ಕೃ ರವಾಗಿ ಬೇಡಿಕೊಳ್ಳಲು ಆಗ ಶ್ರೀರಾಮನು-ಎಲೈ ಕೃತಜ್ಞನಾದ ರಾಕ್ಷಸರಾಜೇಂ ದ್ರನೇ ! ನನ್ನ ಚಿಕ್ಕ ತಾಯಿಯಾದ ಕೈಕೇಯಿಾದೇವಿಯು ವನವಾಸಕ್ಕಾಗಿ ನೇಮಿಸಿದ ಹದಿನಾಲ್ಕು ಸಂವತ್ಸರಗಳು ಮುಗಿಯುವುದಕ್ಕಿಂತ ಮೊದಲು ಪೊಳಲುಗಳನ್ನು ಪ್ರವೇ ಶಿಸುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿರುವೆನು. ನನ್ನ ಹಗೆಯ ಸಂಹಾರಾರ್ಥ ವಾಗಿ ಪ್ರಿಯನಾದ ನೀನು ನನಗೋಸ್ಕರ ಮಾಡಿದ ಸಹಾಯವು ಅಪಾರವಾದುದು. ಅದಕ್ಕಿಂತಲೂ ಅತಿಶಯವಾದ ಉಪಚಾರವು ಮತ್ತಾವುದಿರುವುದು ? ಅಯೋಧ್ಯಾನಗ ರದಲ್ಲಿ ನನ್ನ ತಾಯಂದಿರು ನನ್ನನ್ನೇ ನೆನಸಿಕೊಂಡು ಚಿಂತಿಸುತ್ತಿರುವರು. ನನ್ನ ತಮ್ಮ ದಿರಾದ ಭರತಶತ್ರುಘರಿಗೆ ನನ್ನ ಗಲಿಕೆಯಿಂದುಂಟಾಗಿರುವ ದುಃಖವು ಅಪರಿಮಿತವಾ ಗಿರುವುದು. ಅದು ಕಾರಣ ನಾನು ಈ ದಿವಸವೇ ಅಯೋಧ್ಯಾನಗರವನ್ನು ಕುರಿತು ಪ್ರಯಾಣಮಾಡಬೇಕಾಗಿರುವುದು. ಇದಕ್ಕೋಸ್ಕರ ನೀನು ಅನುಮತಿಸಿ ಸಹಾಯ ವನ್ನು ಮಾಡಬೇಕು ಅಂದನು. ಆ ಬಳಿಕ ವಿಭೀಷಣನು ರಾಮನ ಮಾತುಗಳಿಗೆ ಒಡಂಬಟ್ಟು ಕೂಡಲೆ ಪುಷ್ಪಕ ವಿಮಾನವನ್ನು ತರಿಸಿ ಮುಂದೆ ನಿಲ್ಲಿಸಿ-ಜೀಯಾ ಸರ್ವಜ್ಞನೇ ! ಅಯೋಧ್ಯಾನಗರದಲ್ಲಿ ನಿನ್ನ ಆಗಮನವನ್ನೇ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮಾತೃ ಭ್ರಾತೃ ಪುರಜನಾ ದಿಗಳ ಆನಂದೋದಯಕ್ಕಾಗಿ ಚಿತ್ಯಾನುಸಾರವಾಗಿ ಬಿಜಯ ಮಾಡಬಹುದೆಂದು ಕೈಮುಗಿದು ಕೊಂಡು ಬಿನ್ನವಿಸಲು ಆಗ ಸಂತುಷ್ಟನಾದ ಶ್ರೀರಾಮನು ದೇವತೆಗಳ ವಿಮಾನಗಳಿಗಿಂತ ನೂರ್ಮಡಿ ಮಿಗಿಲೆನಿಸಿ ಶಂಕರನ ಪ್ರಿಯಮಂದಿರವಾದ ಕೈಲಾಸದಂ ತೆಯ ವಿಷ್ಣುವಿಗೆ ನಿತ್ಯಾ ವಾಸಸ್ಥಾನವಾದ ಕ್ಷೀರಸಮುದ್ರದಂತೆಯ ಬ್ರಹ್ಮನಿಗೆ ಭವನವಾದ ಸತ್ಯಲೋಕದಂತೆಯ ಬಹಳವಾದ ಮನೆಗಳಿ೦ದಲೂ ಅಸಂಖ್ಯಾತರ ಳಾದ ಉಪ್ಪರಿಗೆಗಳಿಂದಲೂ ಮನೋಹರಗಳಾದ ಚಂದ್ರಶಾಲೆಗಳಿಂದಲೂ ಕೇಳಿದ ಫಗಳಿಂದ ತುಂಬಿರುವ ತರುಷಂಡಗಳಿಂದಲೂ ವಿವಿಧವಾದ ಪುಷ್ಪಲತಾ ಸಂಕುಲದಿಂ ದಲೂ ತುಂಬಿರುವ ಉದ್ಯಾನವನಗಳಿಂದಲೂ ಮಾಧುರ್ಯನೈರ್ಮಲ್ಯ ಶೈತ್ಯಗುಣ ಯುಕ್ತ ಜಲಭರಿತಗಳಾದ ಸರೋವರಗಳಿಂದಲೂ ಅಪೇಕಿತ ಭಕ್ಷ ಭೋಜ್ಯಗಳನ್ನು ಸಿದ್ಧ ಪಡಿಸುತ್ತಿರುವ ದೇವಸೀಯರು ಗಳಿಂದಲೂ ಇನ್ನೂ ಅಗತ್ಯವಾದ ಅನೇಕ ಸಾಮ ಗ್ರಿಗಳಿಂದಲೂ ಕೂಡಿ ಶೋಭಿಸುತ್ತಿರುವ ವಿಮಾನವನ್ನು ನೋಡಿ ಅತ್ಯಾಶ್ಚರ್ಯಪಟು ಅದರ ಮೇಲೆ ತಾನು ಮೊದಲು ಏರಿ ಆ ಮೇಲೆ ಹಸ್ತವನ್ನು ಕೊಟ್ಟು ಸೀತೆಯನ್ನು ಮೇಲೇರಿಸಿ ತನ್ನ ಎಡದೊಡೆಯ ಮೇಲೆ ಕುಳ್ಳಿರಿಸಿಕೊಂಡನು. ತರುವಾಯ ಲಕ್ಷ್ಮಣನು ಧನುರ್ಬಾಣಗಳನ್ನು ತೆಗೆದು ಕೊಂಡು ವಿಮಾನವನ್ನು ಹತ್ತಿ ರಾಮನ ಹಿಂದುಗಡೆಯಲ್ಲಿ ಕೂತುಕೊಂಡನು. ಅನಂತರದಲ್ಲಿ ಶ್ರೀರಾಮನ ಆಜ್ಞಾನುಸಾರವಾಗಿ ವಾನರ ಚಕ್ರೇಶ ರನಾದ ಸುಗ್ರೀವನೂ ಯುವರಾಜನಾದ ಅಂಗದನೂ ನೀಲ ನಳಾಂಜನೇಯಾದಿ ವಾನರ