ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 195 ದೊಣ್ಣೆಗಳನ್ನು ಹೆಗಲುಗಳ ಮೇಲೆ ಇರಿಸಿಕೊಂಡು ಅನೇಕರು ಪಜಿ ಪಚ್ಚಿಯಾಗಿ ಬರು ತಿದ್ದರು. ಮತ್ತು ಅತ್ಯುನ್ನ ತವಾದ ಕೇತುದಂಡಗಳನ್ನೂ ಅನನ್ಯ ಜನ ಸಾಧಾರಣವಾದ ಬಿರುದುಗಳನ್ನೂ ಹಿಡಿದು ಕೊಂಡು ಅಪರಿಮಿತಸಂಖ್ಯಾತರಾದ ಜನರು ಸಾಲು ಸಾಲಾಗಿ ಬರುತ್ತಿದ್ದರು. ಮತ್ತು ವಂದಿಮಾಗಧವೈತಾಳಿಕಾದಿಗಳು ರಘುಕುಲತಿಲಕನಾದ ಶ್ರೀ ರಾಮನ ಪಾದುಕೆಗಳನ್ನು ಹೊಗಳುತ್ತ ಇಸ್ಪಕ್ಕಗಳಲ್ಲೂ ಬರುತ್ತಿದ್ದರು, ಮತ್ತು ಮುತ್ತೈದೆಯರಾದ ಸ್ತ್ರೀಯರು ಕಲಶ ಕನ್ನಡಿ ಮೊದಲಾದ ಮಂಗಳ ದ್ರವ್ಯಗಳನ್ನು ಹಿಡಿದುಕೊಂಡು ಸಂತೋಷದಿಂದ ಬಂದರು. ನಾಲೈಸೆಗಳಲ್ಲೂ ಇಂದ್ರನೀಲಮಣಿಮ ಯವಾದ ನ ಲ್ಕು ಕೋಲುಗಳಿಂದ ಕೂಡಿದುದೂ ಮೇಲೆ ಪೀತಾಂಬರದಿಂದ ಪರಿಶೋ ಭಿಸಲ್ಪಟ್ಟುದೂ ಆದ ಚಪ್ಪರದ ನಡುಗಡೆಯಲ್ಲಿ ಭರತನ ಶಿರಸ್ಥಾಯಿಗಳಾದ ರಾಮಪಾ ದುಕೆಗಳು ಬರುತ್ತಿದ್ದುವು. ಬ್ರಹ್ಮಜ್ಞಾನಿಗಳಾದ ತಾಪಸ ಶ್ರೇಷ್ಠರು ಮುನಿವಟು ಗಳೊ ಡನೆ ಕೂಡಿ ನಿಂಬೆಯ ಹಣ್ಣು ತೆಂಗಿನ ಕಾಯಿ ಉತ್ತತ್ತಿ ಈ ಮೊದಲಾದ ಫಲಗಳನ್ನೂ ಮ೦ತಾಕ ತೆಗಳನ್ನೂ ಕೈಗಳಲ್ಲಿ ಹಿಡಿದು ಕೊಂಡು ಋಗ್ಯಜುಸಾ ಮಗಳೆಂಬ ವೇದ ತ್ರಯ ವಾಕ್ಯಗಳ ಪಠನವನ್ನು ಮಾಡುತ್ತ ಪಾದುಕೆಗಳ ಹಿಂದು ಮುಂದುಗಡೆಗಳಲ್ಲೂ ಇಕ್ಕೆಲಗಳಲ್ಲೂ ಬರುತ್ತಿದ್ದರು. ಮತ್ತು ಅನೇಕ ಸಾಮಂತ ರಾಜಕುಮಾರರು ತೇಜ ಗಳನ್ನೇರಿಕೊಂಡು ಕುಂತಖಡ್ತಾ "ನೇಕಾಯುಧಗಳನ್ನು ಧರಿಸಿ ಬೆಂಗಾವಲಾಗಿ ಬರು ತಿದ್ದರು. ಕೌಸಲ್ಯಾ ಸುಮಿತ್ರಾಕೈಕೇಯಿಯರೇ ಮೊದಲಾದ ಮಾತೃ ಜನಗಳೂ ಅಂತಃಪುರ ಸ್ತ್ರೀಯರೂ ರಜತ ಸುವರ್ಣಗಳಿಂದ ನಿರ್ಮಿತಗಳಾಗಿ ನವರತ್ನ ಖಚಿತಗಳೂ ಮನೋಹರಗಳೂ ಆದ ಅಂದಣಗಳನ್ನೂ ಪಾಲಕಿಗಳನ್ನೂ ಏರಿ ಮಹಾಸಂಭ್ರಮದಿಂದ ಬರುತ್ತಿದ್ದರು. ಆಗ ಹಿಮದಿಂದ ಬಿಡಲ್ಪಟ್ಟ ಚಂದ್ರನಂತೆ ವಿಘ್ನ ಪರಂಪರೆಗಳನ್ನು ಕಳೆದು ಮತ್ತು ಜಗದಾಹ್ವಾದಕರನಾಗಿರುವ ಶ್ರೀರಾಮಚಂದ್ರನು ತನ್ನಂತೆಯೇ ಜಟಾಚೀರದ ರರಾಗಿ ಅನ್ನಾಹಾರಗಳನ್ನು ಪರಿತ್ಯಜಿಸಿ ಹದಿನಾಲ್ಕು ಸಂವತ್ಸರಗಳಿಂದಲೂ ಫಲಾಹಾ ರಗಳನ್ನು ಮಾತ್ರ ಮಾಡುತ್ತ ಬಡವಾದ ಮೈಯುಳ್ಳವರಾಗಿರುವ ತಮ್ಮಂದಿರಾದ ಭರತಶತ್ರುಘ್ನರನ್ನು ನೋಡಿ-ಆಯ್ಯೋ ! ನನ್ನಲ್ಲಿರುವ ಅಪಾರವಾದ ಭಕ್ತಿಪ್ರೀತಿಗೆ ಳಿಂದ ಇವರು ಇಷ್ಟು ದುಃಖಗಳಿಗೆ ಗುರಿಯಾದರಲ್ಲಾ ! ನನ್ನೊಬ್ಬನಿಂದ ಮಾತೃ ಜನಗಳಿಗೂ ಭ್ರಾತೃಜನಗಳಿಗೂ ಪುರಪರಿವಾರ ಜನರಿಗೂ ಇಷ್ಟು ಕಷ್ಟಸ್ಥಿತಿಯು ಸಂಪ್ರಾಪ್ತವಾಯಿತು. ಅಹೋರಾತ್ರಿಗಳಲ್ಲೂ ಪರಹಿತನಾದ ನನ್ನ ಸ್ಥಿತಿಯು ಸರ್ವ ರಿಗೂ ದುಃಖವನ್ನೇ ಕೊಡುತ್ತಿರುವುದಾ! ಆಗಲಿ. ಇದೆಲ್ಲಾ ಅಘಟನಘಟನ ಸಮರ್ಥನಾದ ಭಗವಂತನ ಚಿತ್ತವು. ಅವನಿಲ್ಲದೆ ತೃಣವಾದರೂ ಚಲಿಸುವುದಿಲ್ಲ ಎಂದು ಹೇಳುವ ಶ್ರುತಿವಚನವು ಸರ್ವಲೋಕಪುರಿಗಾಹವು. ಈ ಲೋಕದ ಸ್ಥಿತಿಯನ್ನು ಕುರಿತು ಯೋಚಿಸಿದರೆ ಯಾರಿಗೂ ಅತ್ಯಂತ ಸುಖವಾದರೂ ದುಃಖವಾದರೂ ಉಂಟಾ ಗಲಿಲ್ಲ. ಕೆಳಗಡೆಯು ಮೇಲಕ್ಕೂ ಮೇಲ್ಗಡೆಯು ಕೆಳಕ್ಕೂ ಆಗುತ್ತಿರುವ ರಥಚಕ್ರ ನೇಮಿಯಂತೆ ಸುಖಾನಂತರದಲ್ಲಿ ದುಃಖವೂ ದುಃಖಾನಂತರದಲ್ಲಿ ಸುಖವೂ ಸಂಭವಿ