ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಕಥಾಸಂಗ್ರಹ-೪ ನೆಯ ಭಾಗ ಅನಂತರದಲ್ಲಿ ಜಗದಭಿರಾಮನಾದ ಶ್ರೀ ರಾಮನಿಗೆ ಈ ದಿವಸ ಜಗದಾನಂದ ಸಂದೋಹಸಂದಾಯಕವಾದ ಪಟ್ಟಾಭಿಷೇಕ ಮಹೋತ್ಸವವು ಬೆಳೆಯುತ್ತಿದೆ. ಈ ಪುಣ್ಯ ಕರವಾದ ಸಂದರ್ಶನವನ್ನು ಲೋಕತ್ರಯದವರೂ ನೋಡಿ ಕೃತಾರ್ಥರಾಗುವುದಕ್ಕಾಗಿ ನಿಮ್ಮ ನಿಮ್ಮ ಪರಿವಾರಗಳೊಡನೆ ಕೂಡಿ ಬನ್ನಿರಿ ಎಂದು ಸಾರುತ್ತಿರುವುವೋ ಎಂಬಂತೆ ಮುಂಗೋಳಿಗಳು ಕೊಕೊಕೊ ಎಂದು ಉಚ್ಚೆ ರ್ಧ್ವನಿಯಿಂದ ಕೂಗಿದುವು. ಭೂಲೋಕದಲ್ಲಿ ನಡೆಯುವ ಈ ಸಂಗತಿಯನ್ನು ಚೆನ್ನಾಗಿ ತಿಳಿದುಕೊಂಡು ಶೀಘ್ರ ವಾಗಿ ಹೋಗಿ ಇಂದ್ರಾದಿದೇವತೆಗಳಿಗೆ ತಿಳಿಸಬೇಕೆಂದು ಸ್ವರ್ಗಲೋಕಸ್ಥವಾದ ನಂದನ ವನದಿಂದ ಹೊರಟು ದೇವಗಂಗೆಯನ್ನು ದಾಟಿ ಶಿವನಿವಾಸಸ್ಥಾನವಾದ 'ಕೈಲಾಸಾಚಲ ಮಾರ್ಗವಾಗಿ ಬರುತ್ತಿರುವಲ್ಲಿ ಶಂಕರನ ಪ್ರಿಯಭೂಷಣಗಳಾದ ಸರ್ಪಗಳು ತನ್ನನ್ನು ಸಂಪೂರ್ಣವಾಗಿ ನುಂಗಿಬಿಡುವುದಕ್ಕೆ ಬರುತ್ತಿರಲು ಸೂಕ್ಷ್ಮದೇಹದಿಂದ ತಪ್ಪಿಸಿಕೊಂಡು ಅಯೋಧ್ಯಾನಗರವನ್ನು ಪ್ರವೇಶಿಸಿ ಸರ್ವಸ್ಥಳದ ವಿಚಾರಿಸುತ್ತಿರುವುದೋ ಎಂಬಂತೆ ಮುಂಜಾವದ ತಂಗಾಳಿಯು ಮೆಲ್ಲನೆ ಬೀಸಿತು. ಸೂರ್ಯನು ಈ ಸಂಗತಿಯನ್ನು ಕೇಳಿ ನನ್ನ ವಂಶೋದ್ದಾರಕನಾದ ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವ ವನ್ನು ಅತ್ಯುನ್ನತಸ್ಥಾನದಲ್ಲಿದ್ದುಕೊಂಡು ಕಣ್ಣುಂಬಾ ನೋಡಿ ದಣಿಯಬೇಕೆಂಬ ಮಹಾಶೆಯಿಂದ ಬಂದನೋ ಎಂಬಂತೆ ಉದಯಶಿಖರಿಯ ಶಿಖರವನ್ನು ಅಡರಿ ರಾರಾಜಿ ಸಿದನು. ಪಟ್ಟಾಭಿಷಿಕ್ತನಾಗುವ ನಿಜನಾಯಕನಾದ ಶ್ರೀರಾಮನನ್ನು ನೋಡಿ ಸೀತೆಯ ನೇತ್ರಕಮಲಗಳು ಈ ರೀತಿಯಾಗಿ ಅರಳುವುವು ಎಂದು ತೋರಿಸುತ್ತಿರುವವೋ ಎಂಬಂತೆ ಕಮಲಗಳು ಅರಳಿ ಪ್ರಕಾಶಿಸುತ್ತಿದ್ದುವು. ಪೂರ್ವ ಪಶ್ಚಿಮದಿಗಂಗನೆಯರು ವಿನೋದಾರ್ಥವಾಗಿ ಆಡುವುದಕ್ಕೋಸ್ಕರ ಪ್ರೀತಿಯಿಂದ ಹಿಡಿದಿರುವ ಮಾಣಿಕ್ಯದ ಮುತ್ತಿನ ಚೆಂಡುಗಳೋ ಎಂಬಂತೆ ಉದಯಿಸುತ್ತ ಪೂರ್ವ ದಿಕ್ಕಿನಲ್ಲಿ ಕೆಂಬಣ್ಣದಿಂದ ಪ್ರಕಾಶಿಸುವ ಸೂರ್ಯನೂ ಅಸ್ತಮಿಸುತ್ತ ಪಶ್ಚಿಮದಿಕ್ಕಿನಲ್ಲಿ ಬೆಳುಬಣ್ಣದಿಂದ ಒಪ್ಪು ತಿರುವ ಚ೦ದ್ರನೂ ಪರಿಶೋಭಿಸುತ್ತಿದ್ದರು. ಇಂಥ ಲೋಕ ತಮಸ್ಕತಿ ವಿನಾಶಕರವಾದ ಸೂರ್ಯೋದಯ ಸಮಯದಲ್ಲಿ ವಿವಿಧವಾದ ಮಂಗಳವಾದ್ಯ ಧ್ವನಿಗಳಿಂದಲೂ ವಂದಿಮಾಗಧರ ಜಯ ಜಯನಿನಾದಗಳಿಂ ದಲೂ ಎಚ್ಚೆ ತವನಾಗಿ ಶ್ರೀರಾಮಚಂದ್ರನು ಭಗವಂತನ ಧ್ಯಾನ ಪೂರ್ವಕವಾಗಿ ದಿವ್ಯ ತಲ್ಪದ ದೆಸೆಯಿಂದ ಉಪ್ಪವಡಿಸಿ ಮಂಗಳವಸ್ತು ದರ್ಶನವನ್ನು ಮಾಡಿ ಸ್ನಾನ ಸಂಧ್ಯಾ ವಂದನ ಭಗವತ್ತೂ ಜಾತನ್ನಾಮಸಂಕೀರ್ತನಾದಿ ನಿತ್ಯ ಕರ್ಮಗಳನ್ನು ನೆರವೇರಿಸಿ ದುರ್ಗ ತರಿಗೆ ಇಷ್ಟಾರ್ಥಗಳನ್ನು ಕೊಟ್ಟು ತೃಪ್ತಿ ಪಡಿಸಿ ತಮ್ಮಂದಿರೊಡನೆ ಕೂಡಿ ಸಮಸ್ತ ಪರಿವಾರಯುಕ್ತನಾಗಿ ಅಲ್ಲಿಂದ ಹೊರಟು ಭರತನ ಓಲಗದ ಚಾವಡಿಗೆ ಬಂದು ದಿವ್ಯಾ ಸನದ ಮೇಲೆ ಕುಳಿತುಕೊಳ್ಳಲು ಆಗ ಸಮಸ್ತರೂ ತಮ್ಮ ತಮ್ಮ ಸ್ಥಾನಗಳಲ್ಲಿ ನಿಶ್ಯಬ್ಬ ತೆಯಿಂದ ಕೂತುಕೊಂಡರು. ಆಗ ಅತಿ ಸಂತುಷ್ಟನಾದ ಭರತನು ಎದ್ದು ಬಂದು ಸಾಷ್ಟಾಂಗವಾಗಿ ನಮಸ್ಕರಿಸಿ ಕೈ ಮುಗಿದು ನಿಂತು ಕೊಂಡು-ಎಲೈ ಸರ್ವಜ್ಞಶಿಖಾ ಮಣಿಯಾದ ಶ್ರೀರಾಮಚಂದ್ರನೇ ! ಮೊದಲು ನೀನು ಈ ಅಯೋಧ್ಯಾ ಸಾಮ್ರಾಜ್ಯ