ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

204 ಕಥಾಸಂಗ್ರಹ-೪ ನೆಯ ಭಾಗ ಯನ್ನು ಮಾಡು ಎಂದು ಹೇಳಲು ಸುಗ್ರೀವನು ಆ ಕ್ಷಣದಲ್ಲಿಯೇ ಮಹಾ ಪರಾಕ್ರ ಮಶಾಲಿಗಳಾದ ಜಾಂಬವಂತ ವೇಗದರ್ಶಿ ಋಷಭ ಹನುಮಂತ ಇವರನ್ನು ಕರೆದು ಕ್ರಮವಾಗಿ ಮೂಡ ಪಡುವ ತೆಂಕ ಬಡಗ ದೆಸೆಗಳಲ್ಲಿರುವ ಸಮುದ್ರಗಳ ಉದಕಗ ಇನ್ನೂ ನದಿಗಳ ಉದಕಗಳನ್ನೂ ದಿವೌಷಧೀರಸಗಳನ್ನೂ ತೆಗೆದು ಕೊಂಡು ಈ ರಾತ್ರಿ ಬೆಳಗಾಗುವಷ್ಟರಲ್ಲಿಯೇ ಇಲ್ಲಿಗೆ ಬರಬೇಕೆಂದು ನೇಮಿಸಿ ನವರತ್ನ ಖಚಿತಗಳಾದ ಸುವರ್ಣ ಕುಂಭಗಳನ್ನು ಕೊಡಿಸಿ ಕಳುಹಿಸಿದನು. ಅವರೆಲ್ಲರೂ ಅದೇ ಪ್ರಕಾರವಾಗಿ ಹೊರಟುಹೋಗಿ ಎರಡು ಜಾವಗಳ ಹೊತ್ತಿಗೆ ಚತುಸ್ಸಮುದ್ರಾದುದಕಗಳನ್ನೂ ದಿವೌಷಧೀರಸಗಳನ್ನೂ ತೆಗೆದು ಕೊಂಡು ಬಂದು ಭರತನಿಗೆ ಒಪ್ಪಿಸಿದರು. ಅನಂತರದಲ್ಲಿ ಸೂರ್ಯೋದಯವಾಗಲು ಆ ಕೂಡಲೆ ಕೌಸಲ್ಯಾದೇವಿಯು ತನ್ನ ಪ್ರಿಯ ಪುತ್ರನಾದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಹೋತ್ಸವವು ನಿರ್ವಿಘ್ನತೆ ಯಿಂದ ನಡೆಯುವುದೆಂಬ ಹರ್ಷಾ ತಿಶಯದಿಂದ ಕೂಡಿದವಳಾಗಿ ಅರಮನೆಯ ಸಭಾ ಮಂದಿರವನ್ನೆಲ್ಲಾ ಕಸ್ತೂರೀ ಮಿಶೋದಕದಿಂದ ಸಾರಣೆಗೆ ಮುತ್ತಿನ ರಂಗವಲ್ಲಿಗ ಳನ್ನು ಬಿಡಿಸಿ ಅತಿ ರಮ್ಯವಾದ ಹಸೆಯ ಜಗಲಿಯ ಮೇಲೆ ಶಾಸ್ಪೋಕ್ತ ಕ್ರಮಾನು ಸಾರವಾಗಿ ಹಸೆಯನ್ನು ಬರೆಯಿಸಿ ಅದರ ಮೇಲೆ ನವರತ್ನ ಖಚಿತವಾದ ಹಸೆಮಣೆ ಯನ್ನು ತಂದಿಡಿಸಿ ಅದರ ಮೇಲೆ ದಿವ್ಯರತ್ನಕಂಬಳಿಗಳನ್ನು ಹರವಿಸಿ ಅದರ ಮು೦ಗಡೆ ಯಲ್ಲಿ ಎರಡು ಬೀಸುಗಲ್ಲುಗಳನ್ನು ಗಂಧಪುಷ್ಪಾಕ್ಷತೆಗಳಿಂದಲಂಕರಿಸಿಡಿಸಿ ಹಾಗೆಯೇ ಎರಡು ಒನಕೆಗಳನ್ನು ಶೃಂಗರಿಸಿಡಿಸಿ ಸಗಣಿಯ ಉಂಡೆಗಳಿಂದ ವಿನಾಯಕಗಳನ್ನು ಮಾಡಿಸಿ ಅವುಗಳ ಅಗ್ರಭಾಗಗಳಲ್ಲಿ ಗರಿಕೆ ಹುಲ್ಲು ಗಳನ್ನು ಸಿಕ್ಕಿಸಿ ಅದರ ನಾಲೈಸೆಗೆ ಇಲ್ಲೂ ಇಡಿಸಿ ಒಂದು ದೊಡ್ಡ ತಟ್ಟೆಯಲ್ಲಿ ಮಲ್ಲಿಕಾದಿ ಕುಸುಮಗಳನ್ನೂ ಇನ್ನೊಂದ ರಲ್ಲಿ ಎಲೆಯಡಿಕೆ ತೆಂಗಿನಕಾಯಿ ಬಾಳೆಯ ಹಣ್ಣುಗಳನ್ನೂ ಮತ್ತೊಂದು ತಟ್ಟೆಯಲ್ಲಿ ಮಂತ್ರಾಕ್ಷತೆಗಳನ್ನೂ ಇನ್ನೊಂದರಲ್ಲಿ ಅರಿಸಿನದ ಪುಡಿಯನ್ನೂ ಮತ್ತೊಂದರಲ್ಲಿ ಗೋಧಿಯ ಹಿಟ್ಟನ್ನೂ ಇನ್ನೊಂದರಲ್ಲಿ ದಿವ್ಯ ಗಂಧವನ್ನೂ ನವರತ್ನ ಖಚಿತವಾದ ಕಿಣ್ಣ ದಲ್ಲಿ ದಿವ್ಯ ಪರಿಮಳ ಯುಕ್ತವಾದ ಎಣ್ಣೆಯನ್ನೂ ತಂದಿರಿಸಿ ಇನ್ನೂ ವಿವಿಧವಾದ ಸಾಮಗ್ರಿಗಳನ್ನು ತಂದಿಡಿಸಿ ಅವೀರೆಯರನ್ನು ಕರಿಸಿ ಊರಿನಲ್ಲಿರುವ ವೃದ್ದೆ ಯರಾದ ಸುಮಂಗಲೆಯರನ್ನೆಲ್ಲಾ ಕರಿಸಿಕೊಂಡು ಅವರನ್ನು ಕುರಿತು ..ಸೀತಾರಾಮರನ್ನು ಹಸೆಮಣೆಯ ಮೇಲೆ ಕುಳ್ಳಿರಿಸಿ ಓಲಗ ತಾಳ ಮೇಳ ಪಿಳ್ಳಂಗೋವಿ ಮೊದಲಾದ ಸಮಸ್ತ ವಾದ್ಯರವಗಳೊಡನೆ ಸಂಭ್ರಮದಿಂದ ಅವರಿಗೆ ಎಣ್ಣೆಯ ಶಾಸ್ತ್ರಗಳನ್ನು ಬೆಳೆ ಸಿರಿ ಎಂದು ಸಂತೋಷದಿಂದ ಹೇಳಿದಳು. ಆಗ ಕುಲದ ಸಂಪ್ರದಾಯಗಳನ್ನು ತಿಳಿ ದಂಥ ಐದು ಜನ ವೃದ್ದ ಸುವಾಸಿನಿಯರು ಬಂದು ಅಲ್ಲಿಟ್ಟಿದ್ದ ಸಗಣಿಯ ವಿನಾಯಕ ಗಳನ್ನು ಗಂಧ ಪ್ರವಾಕ ತೆಗಳಿಂದ ಪೂಜಿಸಿ ತೆಂಗಿನಕಾಯಿಗಳನ್ನು ಒಡೆದು ಆ ಹೋಳುಗಳನ್ನೂ ಬಾಳೇ ಹಣ್ಣುಗಳನ್ನೂ ಎಲೆಯಡಿಕೆಗಳನ್ನೂ ನೈವೇದ್ಯ ಮಾಡಿ ಪ್ರದ ಕ್ಷಿಣ ನಮಸ್ಕಾರಗಳನ್ನು ಮಾಡಿ ಎದ್ದು ಕೈಮುಗಿದು ನಿಂತು ಕೊಂಡು-ಸ್ವಾಮಿ, ವಿಘ್ನು ಕುಲತಿಮಿರಭಾಸ್ಕರನೇ ! ವಿಥ್ಯಾಂಭೋಧಿಕುಂಭಸಂಭವನೇ ! ನಮ್ಮ ಶ್ರೀರಾಮ