ಪುಟ:ಕಥಾಸಂಗ್ರಹ ಸಂಪುಟ ೨.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 11 ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ ದೇವತೆಗೆ ಳನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗು ವುದೇ ಹೊರತು ಸೌಖ್ಯ ಉಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆ ಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ಈ ಮಾತು ಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಮೋಪದಿಂದ ಕೂಡಿ ಕೆಂಗಣ್ಮಸಗು ತಿರಲು ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ್ತ ಆ ದೂತನನ್ನು ನೋಡಿ..ಏನೆಲಾ ! ಕುಬೇರನು ತಾನು ಹರಸಖನಾಗಿದ್ದೇನೆಂಬ ದುರ್ಗವ್ರದಿಂದ ನನಗೆ ವಿವೇಕವನ್ನು ಹೇಳೆಂಧು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿ ಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದ ರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜ ಠರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು, ಸುರನರೋರಗಾದಿ ನಾಯಕ ರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲು ಗಡಿತದಿಂದುರುಳಿಸುವ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ . ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮು೦ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೆ ? ಅಥವಾ ಎಂಟು ದಿಕ್ಕು ಗಳೇನಾದರೂ ಈದುವೋ ? ಎಂಬಂತೆ ಮಿತಿಮೀರಿದ ದಂಡೆತರುತ್ತಿರಲು ಅದರ ಪದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ದುರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚಲದ ತಪ್ಪಲಲ್ಲಿರುವ ಅಲಕಾವತೀನಗರದ ಸಮೀಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರ ಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ ! ನೀನು ನಿನ್ನೊಡೆ ಯನ ಬಳಿಗೆ ಹೋಗಿ ಲೋಕೈಕವೀರನಾದ ದಶಕಂಠನು ಯುದ್ಧಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ಅವನು ಕೂಡಲೆ ಕುಬೇರನ ಓಲಗದ ಚಾವಡಿಗೆ ಬಂದು ಭೀತಿಯಿಂದ ಕೈ ಮುಗಿದು-ಒಡೆಯನೇ ! ಏಳು, ದಶ ಕಂಠನೊಡನೆ ಯುದ್ಧ ಮಾಡು ನಡೆ. ಅವನು ನಮ್ಮಲ್ಲಿ ತೋಟೆಯನ್ನು ಕಳೆಯುವ ನಂತೆ. ನಾನು ಅವನ ಗರ್ವಾತಿಶಯೋಕ್ಕಿಗಳನ್ನು ವಿವರಿಸಲಾರೆನು, ಬೇಗ ಯುದ್ದ ಕೆ. ಸೈನ್ಯವನ್ನು ಕಳುಹಿಸು ಎಂದು ಹೇಳಲು ಕುಬೇರನು ಆ ಮಾತನ್ನು ಕೇಳಿಹೇಳು ಹೇಳು ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು, ದಶಮುಖನಿಗೆ ನಮ್ಮೊಡನೆ ಕಾಳಗವೇ? ಶಿವ ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗ ಳಿಗೆಯವರೆಗೂ ಚಿಂತಿಸಿ ಭತ್ಯನನ್ನು ನೋಡಿ-ಎಲೈ ಮಹಾಗರ್ವದೂಷಿತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಬರುವಂತೆ ತಿಳಿ