ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

210 ಕಥಾಸಂಗ್ರಹ-೫ ನೆಯ ಭಾಗ ಲಕ್ಷ್ಮೀಸಮೇತನಾಗಿ ಆ ಬ್ರಹ್ಮಾಂಡವನ್ನು ಪ್ರವೇಶಿಸಿ ಕ್ಷೀರಸಮುದ್ರದ ಮಧ್ಯದಲ್ಲಿ ಶೇಷಶಾಯಿಯಾಗಿ ಯೋಗನಿದ್ರೆಯಿಂದ ಕೂಡಿರುತ್ತಿದ್ದನು. ಇತ್ಯಲಾ ಕಮಲಸಂಭವನು ಶ್ರೀಮಹಾವಿಷ್ಣುವಿನ ಆಜ್ಞಾನುಸಾರವಾಗಿ ಭೂಲೋಕ ಭುವರ್ಲೋಕ ಸುವರ್ಲೋಕ ಮಹೋಲೋಕ ಜನೋಲೋಕ ತಪೋ ಲೋಕ ಸತ್ಯಲೋಕಗಳೆಂಬ ಏಳು ಲೋಕಗಳನ್ನು ಮೇಲುಗಡೆಯಲ್ಲೂ ಅತಲ ವಿತಲ ಸು ತಲ ತಲಾತಲ ರಸಾತಲ ಮಹಾತಲ ಪಾತಾಳಗಳೆಂಬ ಏಳು ಲೋಕಗಳನ್ನು ಕೆಳ ಗಡೆಯಲು ಈ ರೀತಿಯಾಗಿ ಹದಿನಾಲ್ಕು ಲೋಕಗಳನ್ನು ನಿರ್ಮಿಸಿ ಆ ಲೋಕಗಳಲ್ಲಿ ವೇದವಚನಾನುಸಾರವಾಗಿ ಸ್ನೇದಜ ಅಂಡಜ ಉದ್ದಿಜ ಜರಾಯುಜಗಳೆಂಬ ನಾಲ್ಕು ವಿಧಗಳಾದ ಸ್ಥಾವರ ಜಂಗಮ ಪ್ರಾಣಿಗಳನ್ನು ಕಲ್ಪಿಸಿ ನವಬ್ರಹ್ಮರನ್ನೂ ಚತುರ್ದಶ ಮನುಗಳನ್ನೂ ಸೂರ್ಯಚಂದ್ರರನ್ನೂ ಇಂದ್ರಾದಿಗಳನ್ನೂ ಸೃಷ್ಟಿಸಿ ಅವರವರಿಗೆ ಯೋಗ್ಯವಾದ ಅಧಿಕಾರಗಳನ್ನು ಕಟ್ಟುಮಾಡಿ ಮಹಾವಿಷ್ಣುವಿನ ಆಜ್ಞಾನುಸಾರವಾಗಿ ನಡೆದುಕೊಂಡಿದ್ದನು. ತರುವಾಯ ಆ ಬ್ರಹ್ಮನ ರಾತ್ರಿಯ ಆವಾಂತರ ಪ್ರಳಯವೆಂಬ ಜಲಪ್ರಳಯದ ಮನುಷ್ಯಮಾನದ ಮುಂಚಿನ ದಿನದಲ್ಲಿ ಈ ಭೂಮಂಡಲಕ್ಕೆ ರಾಜನಾ ಗಿದ್ದಂಥ ಸತ್ಯಾಚರಣೆ ಭಗವದ್ಭಕ್ತಿ ಪ್ರಜಾರಂಜನೆ ಈ ಮೊದಲಾದ ಸಕಲಸದ್ದು ಣಗ ಣಗಳುಳ್ಳವನಾದ ಸತ್ಯವ್ರತನೆಂಬ ರಾಜನು ಪ್ರಾತಃಕರ್ಮವನ್ನು ನೆರವೇರಿಸುವುದಕ್ಕಾಗಿ ಗಂಗಾನದಿಗೆ ಬಂದು ಮಿಂದು ಶುಚಿರ್ಭೂತನಾಗಿ ನದೀತೀರದಲ್ಲಿ ಕುಳಿತು ಸಂಧ್ಯಾವಂ ದನೆಯನ್ನು ಮಾಡುವುದಕ್ಕೆ ಪ್ರಾರಂಭಿಸಿ ಸೂರ್ಯನಿಗೆ ಅರ್ತ್ಯವನ್ನು ಕೊಡುವುದ ಕೊಸ್ಕರ ತನ್ನ ಬೊಗಸೆಯಲ್ಲಿ ಗಂಗಾಜಲವನ್ನು ಎತ್ತಿಕೊಂಡು ಆ ನದಿಯಲ್ಲಿ ಬಿಡಬೇ ಕೆಂದು ಪ್ರಯತ್ನಿಸಿದಾಗ ಆ ತನ್ನ ಬೊಗಸೆಯಲ್ಲಿರುವ ನೀರಿನಲ್ಲಿ ಒಂದು ಸಣ್ಣ ಮೀನಿನ ಮರಿಯು ಕಾಣಿಸಿದುದರಿಂದ ಆ ಮೀನಿನ ಮರಿಯನ್ನು ಅರ್ಷ್ಟದ ನೀರಿನಲ್ಲಿ ಸೇರಿಸಿ ಅರ್ಸ್ಯವನ್ನು ಬಿಡಬಾರದೆಂದು ಯೋಚಿಸಿ ಆ ನೀರನ್ನು ಸುಮ್ಮನೆ ನದಿಯಲ್ಲಿ ಬಿಟ್ಟು ತಿರಿಗಿ ಬೊಗಸೆಯ ತುಂಬಾ ನೀರನ್ನು ಎತ್ತಲು ಪುನಃ ಆ ಬೊಗಸೆಯ ನೀರಿನಲ್ಲೂ ಅದೇ ಮೀನಿನ ಮರಿಯೇ ರಾಜನ ಕಣ್ಣಿಗೆ ಕಾಣಬಂದಿತು. ಆಗ ರಾಜನು ಆ ನೀರನ್ನು ಪುನಃ ನದಿಯಲ್ಲಿ ಬಿಟ್ಟನು. ಇದೇ ರೀತಿಯಾಗಿ ರಾಜನು ತನ್ನ ಬೊಗಸೆಯಲ್ಲಿ ನೀರನ್ನು ಎಷ್ಟು ಸಾರಿ ಎತ್ತಿದಾಗ ಆ ಮೂಾನಿನ ಪಿಳ್ಳೆಯು ಬಂದು ಬಂದು ಕಾಡುತ್ತ ಬಂದು ದರಿಂದ ಅರಸನು ಅದನ್ನು ತಿರಿಗಿ ನೀರಿನಲ್ಲಿ ಬಿಡಬೇಕೆಂದು ಯೋಚಿಸುತ್ತಿರುವಷ್ಟರಲ್ಲಿ ಆ ಮೂಾನ್ನರಿಯು ರಾಜನನ್ನು ಕುರಿತು-ಎಲೈ ಮಹಾತ್ಮನಾದ ಸತ್ಯವ್ರತನೇ ! ನೀನು ಬಹು ಧರ್ಮಿಷ್ಠ ನೂ ಕರುಣೆಯುಳ್ಳವನೂ ಸರ್ವ ಪಾಣಿಹಿತನೂ ಎಂದು ತಿಳಿದು ನಾನು ಈ ಮಹಾ ನದಿಯಲ್ಲಿ ಬೆಸ್ತರ ಬಲೆಯಿಂದುಂಟಾಗುವ ವಿಪತ್ತನ್ನು ತಪ್ಪಿಸಿಕೊ ಳ್ಳುವುದಕ್ಕಾಗಿ ನಿನ್ನ ಕೈ ಸೇರಿ ನಿನ್ನ ಮರೆಹೊಕ್ಕೆನು. ಇಂಥಾ ನಿರಾಶ್ರಯ ಜೀವಿ ಯಾದ ನನ್ನನ್ನು ನೀನು ಅನಾದರಣೆಯಿಂದ ಬಿಟ್ಟುಬಿಡಬಹುದೇನಯ್ಯಾ, ಧರ್ಮಾ ತನೇ ಎಂದು ಕೇಳಿತು.

  • ಆ ಮಾತುಗಳನ್ನು ಕೇಳಿದ ಕೂಡಲೆ ಸತ್ಯವ್ರತರಾಜನಿಗೆ ಮನಸ್ಸಿನಲ್ಲಿ ಕರುಣೆ ಯ ಆಶ್ವರ್ಯವೂ ಹೆಚ್ಚಾಗಿಬಾರ್, ಮಿಾನುಮರಿಯೇ ಎಂದು ಆ ಮರಿಯೊಡನೆ