ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ್ಯಾವತಾರದ ಕಥೆ 211 ತನ್ನ ಬೊಗಸೆಯಲ್ಲಿದ್ದ ನೀರನ್ನು ಸಮೀಪದಲ್ಲಿದ್ದ ಅರ್ಮ್ಮಪಾತ್ರೆಯಲ್ಲಿ ಬಿಟ್ಟು ತಾನು ಸಂಧ್ಯಾ ಕವರ್.ತತ್ಪರನಾಗಿ ಕುಳಿತು ಕೊಂಡಿದ್ದನು. ಅಷ್ಟರಲ್ಲಿ ಅಂಗುಷ್ಠ ಪ್ರಮಾಣಮಾ ಶ್ರವಾಗಿದ್ದ ಆ ಮೀನಿನ ಮರಿಯು ಆ ಅರ್ಭ್ಯಪಾತ್ರೆಯ ತುಂಬಾ ಬೆಳೆದು ಆ ರಾಯ ನನ್ನು ಕುರಿತು ಎಲೈ ಮಹಾರಾಜನಾದ ಸತ್ಯವ್ರತನೇ ! ನನ್ನನ್ನು ನೋಡು. ನನಗೆ ಈ ಸ್ವಲ್ಪ ವಾದ ಅರ್ಫ್ಘಪಾತ್ರೆಯ ನೀರು ಸಾಕೇ ಎನ್ನಲು ಆಗ ರಾಯನು ಅದನ್ನು ನೋಡಿ ಇದು ಸಾಧಾರಣವಾದ ವಿಾನಲ್ಲ. ದೈವಿಕವಾದ ವಿಾನೆಂದು ತಿಳಿದು ಅದನ್ನು ಅಲ್ಲಿದ್ದ ನೀರಿನ ಗಡಿಗೆಯಲ್ಲಿ ಬಿಟ್ಟನು. ಅದು ಆ ಕ್ಷಣದಲ್ಲೇ ಅದರ ತುಂಬಾ ಬೆಳೆ ಯಲು ಅದನ್ನು ಅಲ್ಲಿಂದ ತೆಗೆದು ಒಂದು ಕಡಾಯಿಾರಿನಲ್ಲಿ ಬಿಡಲು. ಅದು ಅದರ ತುಂಬಾ ಬೆಳದಿತು. ಅದನ್ನು ನೋಡಿ ರಾಜನು- ಈ ಮೂಾನಿನ ದೇಹಾಭಿವೃದ್ಧಿಗೆ ಸಾಧಾರಣವಾದ ಜಲಸ್ಥಾನಗಳು ಎಂದಿಗೂ ಸಾಕಾಗುವುದಿಲ್ಲ. ಅದು ಕಾರಣ ಇದರ ವಾಸಕ್ಕೆ ಸಮುದೋದಕವೇ ಯೋಗ್ಯವಾದುದು ಎಂದು ಯೋಚಿಸಿ ಅದನ್ನು ತೆಗೆದುಕೊಂಡು ಹೋಗಿ ಸಮುದ್ರದಲ್ಲಿ ಬಿಡಲು ಅದು ಅಲ್ಲಿ ಮಹಾದ್ಭುತಾಕಾ ವಾಗಿ ಬೆಳೆದು ಸಮುದ್ರದಲ್ಲಿ ನಿರರ್ಗಳವಾಗಿ ಸಂಚಾರಮಾಡುತ್ತ ಈ ಸತ್ಯವ್ರತರಾ: ನಿಗೆ ನಾಲ್ಕು ತೋಳುಗಳಿ೦ದ ಶಂಖಚಕ್ರಗದಾಪದ್ಯಗಳನ್ನು ಧರಿಸಿ ದಿವ್ಯ ಕಿರೀಟ ಕು * ಡಲ ಕಟಕ ಕೇಯರಾದಿ ಭೂಷಣಗಳಿಂದಲೂ ಪೀತಾಂಬರದಿಂದಲೂ ಅಲಂಕೃ ವಾಗಿ ಶ್ರೀಮಹಾಲಕ್ಷ್ಮಿ ಸಮೇತವಾಗಿ ಮತ್ತಾಕಾರದಿಂದ ಕಾಣಿಸಿಕೊಂಡು ಆತ ನನ್ನು ಕುರಿತು ಎಲೈ ರಾಜನೇ ! ನಿನ್ನ ಪರಿವಾರಗಳಿಗೆ ಅಪ್ಪಣೆಯನ್ನು ಕೊಟ್ಟು ಪಟ್ಟಣಕ್ಕೆ ಕಳುಹಿಸಿ ನೀನೊಬ್ಬನೇ ಇದ್ದುಕೊಂಡು ನಾನಾಡುವ ಮಾತುಗಳನ್ನು ಕೇಳು ಎಂದು ಹೇಳಿತು. ಆಗಲಾ ಸತ್ಯವ್ರತರಾಜನು ಆ ಮಾತುಗಳನ್ನು ಕೇಳಿ ಆ ಕ್ಷಣದಲ್ಲಿಯೇ ತನ್ನ ಪರಿವಾರಗಳನ್ನೆಲ್ಲಾ ಕಳುಹಿಸಿಬಿಟ್ಟು ತಾನೊಬ್ಬನೇ ಕೈಮುಗಿದು ನಿಂತುಕೊಂಡು ಏನಪ್ಪಣೆ ಎಂದು ಕೇಳಿಕೊಳ್ಳಲು ಆಗ ಆ ಮಹಾಮತ್ನವು ಇಂದಿಗೆ ಏಳನೆಯ ದಿವಸದಲ್ಲಿ ಜಲಪ್ರಳಯವಾಗಿ ಭೂಮಿಯು ಕಾಣದೆ ಹೋಗುವುದು. ಅದು ಕಾರಣ ನೀನು ನಿನ್ನ ಕುಟುಂಬದೊಡನೆ ಕೂಡಿ ಬರುವ ಯುಗದಲ್ಲಿ ಹುಟ್ಟುವ ಪ್ರಾಣಿಗಳ ಜೀವನ ಕೊಸ್ಕರ ಬೇಕಾದ ಧಾನ್ಯ ಬೀಜಗಳನ್ನು ಸಂಗ್ರಹಮಾಡಿಕೊಂಡು ಇಂದಿಗೆ ಆರನೆಯ ದಿವಸದ ರಾತ್ರಿಯಲ್ಲಿ ಇದೇ ಸ್ಥಳಕ್ಕೆ ಬಂದರೆ ಆಗ ನನ್ನ ಈ ಮಹಾ ಮತ್ಯಾಕೃತಿಯನ್ನು ನೋಡುವಿ. ಆಗ ನನ್ನ ಕೋರೆಯಲ್ಲಿ ಸಿಕ್ಕಿಕೊಂಡು ಅಲ್ಲಾ ಡುತ್ತಿರುವ ಒಂದು ಹಡಗು ಕಾಣಿಸುವುದು. ಆಗ ನೀನು ನಿನ್ನ ಕುಟುಂಬದ ಸಂಗಡ ಸಕಲಧಾನೌಷಧಿಗಳ ಬೀಜಗಳನ್ನು ತೆಗೆದುಕೊಂಡು ಆ ಹಡಗನ್ನು ಹತ್ತು ವವನಾಗು. ಅನಂತರದಲ್ಲಿ ನಡೆಯುವ ಕಾರ್ಯಗಳನ್ನು ನೀನೇ ತಿಳಿಯುವಿ ಎಂದು ಅಪ್ಪಣೆಯನ್ನು ಕೊಟ್ಟು ಸಮುದ್ರಾಂತರ್ಜಲಪ್ರವೇಶವನ್ನು ಮಾಡಿತು. ತರುವಾಯ ಆ ರಾಯನು ಮಹಾವಿಷ್ಣುವಿನ ಆಜ್ಞೆಯನ್ನು ಶಿರಸಾವಹಿಸಿ ತನ್ನ ಪಟ್ಟಣಕ್ಕೆ ಬಂದು ರಾಜ್ಯದ ಸರ್ವಪ್ರಜೆಗಳಿಗೂ-ನೀವೆಲ್ಲರೂ ಚಿತ್ತೈಕಾಗ್ರತೆಯಿಂದ ವಿಷ್ಣುವಿನ ಧ್ಯಾನ ಕ