ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 ಕಥಾಸಂಗ್ರಹ-೫ ನೆಯ ಭಾಗ ವನ್ನು ಮಾಡಿಕೊಂಡು ಮೋಕ್ಷಸುಖವನ್ನು ಹೊಂದಿ ಸುಖಪಡಿರಿ ಎಂದು ಡಂಗುರ ವನ್ನು ಹೊಯ್ಕೆ ಪ್ರಸಿದ್ದಿ ಪಡಿಸಿ ತಾನು ಮಹಾವಿಷ್ಣುವಿನ ಅಪ್ಪಣೆಯ ಪ್ರಕಾರ ಕುಟುಂಬದೊಡನೆ ಬಂದು ಹಡಗನ್ನೇರಿದ ಉತ್ತರಕ್ಷಣದಲ್ಲಿಯೇ ಭೂಮಿಯು ಸಮು ದ್ರದಲ್ಲಿ ಮುಳುಗಿಹೋಯಿತು. ಆಗಲಾ ಸತ್ಯವ್ರತರಾಜನು ಸಮುದ್ರದಲ್ಲಿ ಹಡಗಿನ ಮೇಲೆ ಸಂಚರಿಸುತ್ತಾ ಆಗಾಗ್ಗೆ ಮತ್ತ್ವಮಹಾಮೂರ್ತಿಯ ಸಂದರ್ಶನವನ್ನು ಮಾಡುತ್ತ ಸಂತೋಷದಿಂದಿರುತ್ತಿದ್ದನು. ಆ ಮೇಲೆ ಚತುರ್ಮುಖಬ್ರಹ್ಮನು ತನಗೆ ಸಂಪ್ರಾಪ್ತವಾದ ರಾತ್ರಿಯಲ್ಲಿ ಮಲಗಿ ಕೊಂಡನು. ಸೋಮಕ ಹಯಗ್ರೀವರೆಂಬ ಹೆಸರುಳ್ಳ ಇಬ್ಬರು ದೈತ್ಯರು ಆ ವೇಳೆಯ ನರಿತು ಪರಸ್ಪರವಾಗಿ ಆಲೋಚಿಸಿಕೊಂಡುದೇನೆಂದರೆ ಈ ಚತುರ್ಮುಖಬ್ರಹ್ಮನು ನಿದ್ರೆಯಿಂದ ಎಚ್ಚೆತ ಮೇಲೆ ಈಗ ಜಲಪ್ರಳಯದಿಂದ ನಾಶವಾಗಿರುವ ಭೂಲೋಕ ಭುವರ್ಲೋಕ ಸುವರ್ಲೋಕಗಳೆಂಬ ಮೂರು ಲೋಕಗಳನ್ನು ತಿರಿಗಿ ಸೃಷ್ಟಿಸುವನು. ಅಲ್ಲಿ ಭೂಲೋಕದಲ್ಲಿ ನಡೆಯುವ ದೇವಯಾಗ ಪಿತೃಯಾಗಗಳಿಂದ ದೇವತೆಗಳೆಲ್ಲಾ ತೃಪ್ತರಾಗಿ ಹೆಚ್ಚಿ ನಮಗೆ ಹಗೆಗಳಾಗಿ ನಮ್ಮನ್ನು ತಿರಸ್ಕರಿಸುವರು. ಇದಕ್ಕೆಲ್ಲಾ ಕಾರ ಣಭೂತವಾದುದು ವೇದವಾಕ್ಯವು. ಈಗ ಬ್ರಹ್ಮನು ಮಲಗಿದ್ದಾನೆ. ಈ ವೇಳೆಯಲ್ಲಿ ನಾವು ಹೋಗಿ ಆ ವೇದಗಳನ್ನೇ ಅಪಹರಿಸಿಕೊಂಡು ಬಂದು ಬಿಟ್ಟರೆ ನಮಗೆ ವಿರೋಧಿ ಗಳಾದ ದೇವತೆಗಳ ಹುಟ್ಟೇ ವಿನಾಶವಾಗಿ ಹೋಗುವುದು ಎಂದು ಯೋಚಿಸಿ ಸತ್ಯ ಲೋಕಕ್ಕೆ ಹೋಗಿ ವೇದದ ಪುಸ್ತಕಗಳನ್ನು ಅಪಹರಿಸಿಕೊಂಡು ಬಂದು ಸಮುದ್ರ ವನ್ನು ಪ್ರವೇಶಿಸಲು ಆ ಮತ್ಯಮೂರ್ತಿಯಾದ ಮಹಾವಿಷ್ಣು ವು ಅವರನ್ನು ಕಂಡು ಅವರಿಬ್ಬರನ್ನೂ ಸಂಹರಿಸಿ ವೇದಪುಸ್ತಕಗಳನ್ನೆಲ್ಲಾ ತೆಗೆದು ಕೊಂಡು ತನ್ನಲ್ಲಿಟ್ಟು ಕೊಂಡಿದ್ದನು. ಅನಂತರದಲ್ಲಿ ನೇಮಕವಾದ ರಾತ್ರಿಯು ಕಳೆದು ಬೆಳಗಾಗಲು ಆಗ ಸರೋಜ ಸಂಭವನು ಎದ್ದು ಸ್ನಾನಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ನೆರವೇರಿಸಿಕೊಂಡು ಕಮಲಾಸನದಲ್ಲಿ ಕುಳಿತು ತಿರಿಗಿ ಸೃಷ್ಟಿಯನ್ನು ಮಾಡುವುದಕ್ಕೆ ಆರಂಭಿಸಿ ವೇದಪು ಸ್ತಕಗಳನ್ನು ನೋಡುವಲ್ಲಿ ಅವುಗಳಿಲ್ಲದೆ ಇರಲು ಆಗ ಬ್ರಹ್ಮನು ಮಹಾಚಿಂತಾ ಕ್ರಾಂತನಾಗಿ ಭಯಭಕ್ತಿಯಿಂದ ಕೂಡಿ ಮಹಾವಿಷ್ಣುವನ್ನು ಧ್ಯಾನಮಾಡಿ-ಎಲೆ ಮಹಾವಿಷ್ಟು ವೇ ! ನಿನ್ನ ಅಪ್ಪಣೆಯ ಪ್ರಕಾರ ಸಂಪಾಪ್ಯವಾದ ರಾತ್ರಿಯಲ್ಲಿ ನಾನು ಮಲಗಿದ್ದೆನು. ಆಗ ನನ್ನ ಸೃಷ್ಟಿ ಕರ್ಮಕ್ಕೆ ಆಧಾರಭೂತಗಳಾಗಿದ್ದ ವೇದಪುಸ್ತಕಗಳು ಏನಾದುವೋ ತಿಳಿಯೆನು, ಈಗ ಅವುಗಳೊಂದೂ ಕಾಣಿಸುವುದಿಲ್ಲ. ಇನ್ನು ಮೇಲೆ ನಾನು ನಿನ್ನ ಆಜ್ಞೆಯ ಮೇರೆಗೆ ಹೇಗೆ ಸೃಷ್ಟಿ ಮಾಡಲಿ ? ನಾನು ಮಲಗಿ ಮೈಮರೆತಿ ರುವಾಗ ಜಗದೀಶ್ವರನಾದ ನೀನು ಜಾಗರೂಕನಾಗಿದ್ದು ನನ್ನನ್ನು ಕಾಪಾಡದಿದ್ದರೆ ಮತ್ತೊಬ್ಬರು ಕಾಪಾಡುವರುಂಟೇ ? ಮಹಾಸ್ವಾಮಿಾ ! ನಾನು ಈಗ ಕಣ್ಣಿಲ್ಲದ ಕುರುಡನಂತಿದ್ದೇನೆ ಎಂದು ಬಹುವಿಧವಾಗಿ ಮೊರೆಯಿಡಲು ಆಗ ಮಮರ್ತಿ ಯಾದ ಮಹಾವಿಷ್ಣುವು ಪ್ರತ್ಯಕ್ಷನಾಗಿ ಕಾಣಿಸಿಕೊಂಡು ಹಯಗ್ರೀವಸೋಮಕ