ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 ಕಥಾಸಂಗ್ರಹ-೫ ನೆಯ ಭಾಗ ಅಸಾವೇರಿ ಕಾಂಬೋದಿ ಯದುಕುಲಕಾಂಬೋದಿ ಭೈರವಿ ಆನಂದಭೈರವಿ ನೀಲಾಂಬರಿ ರೇಗುಪ್ತಿ ತೋಡಿ ಮುಂತಾದ ಅನೇಕ ವಿಧ ರಾಗಗಳಿಂದ ಮನೋಹರವಾಗಿ ಸಂಗೀತ ವನ್ನು ಹಾಡುತ್ತ ದೇವಪತಿಯ ಮುಂಗಡೆಯಲ್ಲಿ ಬಂದರು. ಮತ್ತು ಅಪ್ಪರಸ್ತ್ರೀಯರು ಸುರಪತಿಯ ಪುರೋಭಾಗದಲ್ಲಿ ಸಾಲುಸಾಲಾಗಿ ನಿಂತು ಭರತಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಸೊಬಗಿನಿಂದ ನರ್ತನಮಾಡುತ್ತ ಬಂದರು. ಮತ್ತು ಕಿನ್ನರ ಕಿಂಪುರುಷಾದಿ ಗಳು ಕೈಯೆತ್ತಿ-ಜ೦ಭಾರಿಯೇ ! ಪಾಕಶಾಸನನೇ ! ವೃತಾಸುರಸಂಹಾರಕನೇ ! ತ್ರಿಲೋಕನಾಯಕನೆ ! ಜಯ ಜಯ ಎಂದು ಸಂಭ್ರಮದಿಂದ ಹೊಗಳುತ್ತ ಬಂದರು. ಇಂಥ ಅತುಲವೈಭವದಿಂದ ಕೂಡಿ ದೇವೇಂದ್ರನು ಅಮರಾವತಿಯ ರಾಜವೀಧಿಯಲ್ಲಿ ಬರುತ್ತಿರಲು ಆಗ ದೇವಸೀಯರು ಬಂದುಬ೦ದು ನವರತ್ನ ಗಳ ಆರತಿಗಳನ್ನು ಬೆಳಗು ತಿದ್ದರು. ಸುರಪತಿಯು ಅವರಿಗೆ ಅಪರಿಮಿತ ವಸ್ತ್ರಾಭರಣಗಳನ್ನು ಕೊಡುತ್ತ ಮಹಾ ಸಂತೋಷದಿಂದಲೂ ಮಹದೈಶ್ವರದಿಂದಲೂ ಮದೋನ್ಮತ್ತನಾಗಿ ಮೂರು ಲೋಕ ಗಳಲ್ಲೂ ತನಗೆ ಯಾರೂ ಸಮಾನರಿಲ್ಲವೆಂದು ತನ್ನ ಮನಸ್ಸಿನಲ್ಲಿ ಯೋಚಿಸಿಕೊಂಡು ಬಲು ಹೆಮ್ಮೆಯಿಂದ ಬರುತ್ತಿದ್ದನು. ಅಷ್ಟರಲ್ಲಿ ದೂರ್ವಾಸನೆಂಬ ಕೋಪಸ್ವಭಾವವುಳ್ಳ ಉಗ್ರ ತಪಸ್ವಿಯು ಕೈಲಾಸ ಪರ್ವತಕ್ಕೆ ಹೋಗಿ ಪಾಶ್ವತೀಪರಮೇಶ್ವರರನ್ನು ವಂದಿಸಿ ಭಯಭರಿತಭಕ್ತಿಯಿಂದ ಬಹಳವಾಗಿ ಸೊತ್ರಮಾಡಲು ಆಗ ಪಾರ್ವತೀದೇವಿಯು ಪ್ರಸನ್ನಳಾಗಿ ತಾನು ಧರಿಸಿದ್ದ ಪುಷ್ಪಮಾಲಿಕೆಯನ್ನು ಕೊಟ್ಟುದರಿಂದ ಆತನು ಅದನ್ನು ತೆಗೆದು ಕೊಂಡು ಪಾರ್ವತೀಪರಮೇಶ್ವರರನ್ನು ವಂದಿಸಿ ಅಲ್ಲಿಂದ ಹೊರಟು ಅಮರಾವತಿಗೆ ಬಂದು ರಾಜ ವೀಧಿಯಲ್ಲಿ ಮಹಾವೈಭವದೊಡನೆ ಬರುತ್ತಿರುವ ದೇವಪತಿಯನ್ನು ಕಂಡು ಸಂತೋ ಷದಿಂದ ಆತನಿಗೆ ಆ ಪುಷ್ಪ ಮಾಲಿಕೆಯನ್ನು ಕೊಟ್ಟು ಹರಿಸಿದನು ಆಗ ದೇವೇಂದ್ರನು ಐಶ್ವರ್ಯಮತ್ತನಾಗಿ ಆ ಮುನಿಪತಿಯನ್ನು ವಿನಯದಿಂದ ಕಂಡು ವಂದಿಸದೆ ಅವನು ಕೊಟ್ಟ ಪುಷ್ಪಮಾಲಿಕೆಯನ್ನಾದರೂ ಭಕ್ತಿಯಿಂದ ತನ್ನ ಶಿರಸ್ಸಿನಲ್ಲಿ ಧರಿಸಿಕೊಳ್ಳದೆ ಉದಾಸೀನದಿಂದ ಅದನ್ನು ಐರಾವತದ ಕುಂಭಸ್ಥಳದ ಮೇಲೆ ಹಾಕಲು ಅದು ಆ ಪುಷ್ಪಮಾಲಿಕೆಯನ್ನು ತನ್ನ ಸೊಂಡಲಿನಿಂದ ತೆಗೆದು ಕೊಂಡು ಭೂಮಿಯಲ್ಲಿ ಬಡಿದು ಕಾಲಿನಿಂದ ತುಳಿದು ಹೊಸಗಿಬಿಟ್ಟಿತು. ಅದನ್ನು ಕಂಡು ದೂರ್ವಾಸಮುನಿಯು ಮಹಾ ಕೋಪಸಂತಪ್ತ ಹೃದಯನಾಗಿ ಕಣ್ಣುಗಳಿ೦ದ ಕಿಡಿಗಳನ್ನು ದುರಿಸುವವನಾಗಿ ದುರ್ಗವ್ರದೂಷಿತನಾದ ಇಂದ್ರನನ್ನು ಕುರಿತು ಎಲೈ ಮದಾಂಧನೇ! ಮೂರ್ಖನೇ! ಲೋಕವಂದ್ಯಳಾದ ಮಹಾದೇವಿಯ ಪರಿಶುದ್ದ ಪ್ರಸಾದವನ್ನು ನೀನು ತ್ರಿಲೋಕಾ ಧಿಪತಿಯು ಚೆನ್ನಾಗಿ ಬಾಳುತ್ತಿರಬೇಕೆಂದು ನಾನು ನಿನ್ನಲ್ಲಿ ಅನುಗ್ರಹವನ್ನು ಮಾಡಿ ತಂದು ಕೊಟ್ಟರೆ ನೀನು ಆ ಪ್ರಸಾದಮಾಲಿಕೆಯನ್ನು ಭಯಭಕ್ತಿಯಿಂದ ಶಿರಸ್ಸಿನಲ್ಲಿ ಧರಿಸದೆ ಯಾವ ಲೋಕತ್ರಯಧಿಪತ್ಯದ ಐಶ್ವರ್ಯಮದದಿಂದ ಐರಾವತದ ಕುಂಭ ಸ್ಥಳದಲ್ಲಿ ಹಾಕಿದೆಯೋ ಆ ನಿನ್ನ ಐಶ್ವರ್ಯವನ್ನು ನಿನ್ನ ಹಗೆಗಳಾದ ದೈತ್ಯರು ಕಿತ್ತು ಕೊಳ್ಳಲಿ ಎಂದು ಶಾಪವನ್ನು ಕೊಟ್ಟನು. ಆಗ ಭಯಭ್ರಾಂತನಾದ ದೇವೇಂದ್ರನು