ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 215 ಕೆಟ್ಟ ಮೇಲೆ ಬುದ್ದಿ ಬಂದಿತು ಎಂಬ ಗಾದೆಗೆ ಸರಿಯಾಗಿ ವಿವೇಕವನ್ನು ಹೊಂದಿ ಬೇ? ಐರಾವತದಿಂದ ಕೆಳಕ್ಕಿಳಿದು ಆ ದೂರ್ವಾಸಮುನಿಪತಿಯ ಎರಡು ಪಾದಗಳ ಮೇಲೆ ಬಿದ್ದು ಹೊರಳುತ್ತ ದುಃಖದಿಂದ_ಸ್ವಾಮಿ, ದಯಾಳುವೇ ! ನಾನು ಬಹು ಪಾಪಿಷ್ಠನು. ಮಹಾಪರಾಧಿಯು, ಸರ್ವಜ್ಞನಾದ ನೀನು ನನ್ನ ಅಪರಾಧವನ್ನು ಕ್ಷಮಿಸಿ ವಿಶಾಪವನ್ನು ದಯಪಾಲಿಸಿ ಅನಾಥನಾದ ನನ್ನನ್ನು ಉದ್ಧಾರಮಾಡಬೇ ಕೆಂದು ದೈನ್ಯದಿಂದ ಬಹಳವಾಗಿ ಬೇಡಿಕೊಂಡುದರಿಂದ ಆಗ ದೂರ್ವಾಸಮುನಿಯು ಕರುಣವುಳ್ಳವನಾಗಿ_ಕೆಲಕಾಲದ ಮೇಲೆ ಲಕ್ಷ್ಮಿಪತಿಯಾದ ಮಹಾವಿಷ್ಣುವು ಯಥಾಪ್ರಕಾರವಾಗಿ ನಿನಗೆ ತಿಲೋಕಾಧಿಪತ್ಯವುಂಟಾಗುವಂತೆ ಮಾಡುವನು ಎಂದು ವಿಶಾಪವನ್ನು ಕೊಟ್ಟು ಹೊರಟುಹೋದನು. ಆ ಬಳಿಕ ದೇವೇಂದ್ರನು ಕೊಬ್ಬಡಗಿದ ವನಾಗಿ ಮಹಾ ಚಿಂತೆಯಿಂದ ಕೂಡಿ ಮೋರೆಗೆ ಮುಸುಕು ಹಾಕಿಕೊಂಡು ಹಿಂದಿರುಗಿ, ಆರಮನೆಗೆ ಹೋಗಿ ಏಕಾಂತಸ್ಥಳದಲ್ಲಿ ಬಿದ್ದು ಕೊಂಡನು. ಹೀಗಿರುವಲ್ಲಿ ಬಲಿ ನಮುಚಿ ಎಂಬುವರೇ ಮೊದಲಾದ ದೈತ್ಯೇ೦ದ್ರರು ಸ್ವರ್ಗ ಲೋಕದ ವೃತ್ತಾಂತವನ್ನು ತಿಳಿಯುವುದಕ್ಕೋಸ್ಕರ ತಮ್ಮ ವಾಸಸ್ಥಾನವಾದ ರಸಾತ ಲದಿಂದ ಕಳುಹಿಸಿದ್ದ ರಾಕ್ಷ ಸಗೂಢಚಾರರು ಈ ಸಂಗತಿಯನ್ನು ತಿಳಿದು ಶೀಘ್ರದಿಂದ ರಸಾತಲಕ್ಕೆ ಹೋಗಿ ಆ ದೈತ್ಯರಾಜರಿಗೆ ಯಥಾವತ್ತಾಗಿ ಅರಿಕೆ ಮಾಡಿದರು. ಆಗ ಬಲಿಯು ತನ್ನ ಕುಲಗುರುಗಳಾದ ಶುಕ್ರಾಚಾರ್ಯರನ್ನೂ ತನ್ನ ಜೊತೆಯವರಾದ ದೈತ್ಯರಾಜರನ್ನೂ ಏಕಾಂತದಲ್ಲಿ ಕೂಡಿಸಿಕೊಂಡು ಈ ಸಂಗತಿಯನ್ನೆಲ್ಲಾ ತಿಳಿಸಿ ನಾವು ಮುಂದೆ ಮಾಡಬೇಕಾದ ರಾಜಕಾರ್ಯವಾವುದು ಎಂದು ಕೇಳಿದನು. ಅದಕ್ಕೆ ಶುಕ್ರಾಚಾರ್ಯನು-ಎಲೈ ದೈತ್ಯರಾಜನೇ ! ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೊ೦ ಡನು ಎಂಬಂತೆ ಮಾಡದೆ ಶತ್ರುವು ವಿಸದ್ದಾಧಿತನಾಗಿರುವ ಇಂಥ ಕಾಲದಲ್ಲಿ ನೀನು ತಡಮಾಡದೆ ಚತುರಂಗಬಲಸಮೇತನಾಗಿ ದೇವಲೋಕಕ್ಕೆ ಹೋಗಿ ದೇವೇಂದ್ರನನ್ನು ಯುದ್ದದಲ್ಲಿ ಸದೆಬಡಿದು ಅವನ ಪದವಿಯನ್ನು ಅಪಹರಿಸಿಕೊಂಡು ಸುಖಪಡದೆ ಇದ್ದರೆ ಲೋಕದಲ್ಲಿ ನಿಮ್ಮಂಥ ಹೇಡಿಗಳು ಇನ್ನಾರುಂಟು ? ಪ್ರಪಂಚದಲ್ಲಿ ರಾಜನೀತಿಯನ್ನು ತಿಳಿದಂಥ ದೊರೆಗಳು ಹಗೆಗಳ ಪಟ್ಟಣಕ್ಕೆ ನಾನಾ ವೇಷಧಾರಿಗಳಾದ ಗೂಢಚಾರ ರನ್ನು ಕಳುಹಿಸಿ ಅಲ್ಲಿ ಜನಹಿಂಸಕಗಳಾದ ಅನ್ಯಾಯ ಕೃತ್ಯಗಳು ನಡೆಯುತ್ತಿರುವುದನ್ನೂ ರಾಜ ಮಂತ್ರಿ ಸೇನಾಪತಿ ಈ ಮೊದಲಾದವರಿಗೆ ಪರಸ್ಪರವಾಗಿ ಮನಸ್ತಾಪಗಳು ಹುಟ್ಟಿರುವುದನ್ನೂ ಅರಸುಗಳ ಜಾತಿವರ್ಗದಲ್ಲಿ ಒಬ್ಬೊಬ್ಬರಿಗೆ ವೈಷಮ್ಯವುಂಟಾಗಿರು ವುದನ್ನೂ ಅರಸು ತನ್ನ ರಾಜ್ಯದಲ್ಲಿ ದುಷ್ಟರಿಗೆ ಶಿಕ್ಷೆಯನ್ನೂ ಶಿಷ್ಟರಿಗೆ ರಕ್ಷಣೆಯನ್ನೂ ಮಾಡದೆ ದುಷ್ಟರಾದವರಿಗೆ ಸನ್ಮಾನವನ್ನೂ ಶಿಷ್ಟರಾದವರಿಗೆ ಅವಮಾನವನ್ನೂ ಮಾಡು ತಿರುವುದನ್ನೂ ರಾಜನು ತನ್ನ ಕೈ ಕೆಳಗಣ ಉದ್ಯೋಗಸ್ಥರಿಗೆ ನಿಯಮಿತಕಾಲಾನುಸಾ ರವಾಗಿ ಸಂಬಳವನ್ನು ಸಲ್ಲಿಸುತ್ತ ಬಾರದಿರುವುದನ್ನೂ ರಾಜ್ಯದಲ್ಲಿ ಪ್ರಜೆಗಳು ವ್ಯಾಧಿ ಕ್ಷಾ ಮಾದಿಗಳಿಂದ ಭೆಪಡುತ್ತಿರುವುದನ್ನೂ ಚೆನ್ನಾಗಿ ತಿಳಿದುಕೊಂಡು ಅಂಥ ವೇಳೆಯಲ್ಲಿ ಒಂದು ಕ್ಷಣವಾದರೂ ಸಾವಕಾಶಮಾಡದೆ ದಂಡೆತ್ತಿ ಹೋಗಿ ಹಗೆಗಳನ್ನು