ಪುಟ:ಕಥಾಸಂಗ್ರಹ ಸಂಪುಟ ೨.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 217. ವಿಷ್ಣುವು ಅವನಿಗೆ ಸಹಾಯಕನಾದುದರಿಂದ ಅವುಗಳನ್ನೆಲ್ಲಾ ಪರಿಹರಿಸುತ್ತ ತಿರುಗಿ ಅವನಿಗೆ ತ್ರಿಲೋಕಾಧಿಪತ್ಯವನ್ನು ಉಂಟುಮಾಡುತ್ತ ಬರುತ್ತಿರುವನು. ಈಗ ದೇವೇಂ ಡ್ರಗೆ ಅವನ ದುರಹಂಕಾರದಿಂದ ದೂರ್ವಾಸಮುನಿಯ ಶಾಪವು ಪ್ರಾಪ್ತವಾದುದ ರಿಂದ ಅವನು ತನ್ನ ಸಕಲ ಪರಿವಾರದೊಡನೆ ಕೂಡಿ ಓಡಿಹೋಗಿದ್ದಾನೆ. ಈಗ ನಿಮಗೆ ತ್ರಿಲೋಕಾಧಿಪತ್ಯವು ನಿರಾಯಾಸದಿಂದ ಸ್ವಾಧೀನವಾಗುವುದು. ಆದರೂ ಕೆಲದಿನಗಳ ಮೇಲೆ ವಿಷ್ಣುವು ನಿಮ್ಮನ್ನು ಜಯಿಸಿ ಇಂದ್ರನಿಗೆ ಲೋಕತ್ರಯಾಧಿಪತ್ಯವನ್ನು ಉಂಟು ಮಾಡುವನು. ನಾನು ಇದನ್ನು ಯೋಚಿಸಿ ಮೂರ್ಖನೂ ದುಷ್ಟನೂ ಆದ ಇ೦ದ್ರನ ಸಹವಾಸವು ನನಗೆ ಯೋಗ್ಯವಾದುದಲ್ಲ. ಅದು ನನಗೆ ಸಂಪೂರ್ಣವಾಗಿ ತಪ್ಪಿಹೋ ಗುವಂತೆ ಮಾಡುವುದಕ್ಕೆ ತ್ರಿಲೋಕಾಧಿಪತ್ಯವು ನಿಮ್ಮಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿ ನಾನೂ ಶುಕ್ರಾಚಾರ್ಯರೂ ಏಕಾಲೋಚನೆಯಿಂದ ಸುಖದಿಂದಿರಬೇಕೆಂದು ಯೋಚಿಸಿಕೊಂಡು ಈಗ ನಿಮ್ಮ ಬಳಿಗೆ ಬಂದಿದ್ದೇನೆ ಅಂದನು. - ಆಗ ಶುಕ್ರಾಚಾರ್ಯರೂ ದೈತ್ಯರಾಜರೂ ಕೂಡಿ ಆಲೋಚಿಸಿ ಬೃಹಸ್ಪತಾ ಚಾರ್ಯರನ್ನು ಕುರಿತು ನೀವು ಹೇಳಿದುದೆಲ್ಲಾ ನಿಜವೇ ಸರಿ. ಇದರಲ್ಲಿ ಒಂದು ಮಾತಾದರೂ ಸುಳ್ಳಲ್ಲ. ನೀವು ಇಂದ್ರನನ್ನು ಬಿಟ್ಟು ನಮಗೆ ಸಹಾಯ ಮಾಡುವುದಾ ದರೆ ತ್ರಿಲೋಕಾಧಿಪತ್ಯವು ನಮ್ಮನ್ನು ಬಿಟ್ಟು ಎಂದಿಗೂ ತೊಲಗುವುದಿಲ್ಲವೆಂದು ಖಂಡಿತವಾಗಿ ನಂಬಿದ್ದೇವೆ. ಆ ತ್ರಿಲೋಕಾಧಿಪತ್ಯ ನಮ್ಮಲ್ಲೇ ಸ್ಥಿರವಾಗಿರುವ ಹಾಗೆ ನೀವು ಮಾಡಿದಲ್ಲಿ ನಾವೆಲ್ಲರೂ ನಿಮ್ಮ ಆಜ್ಞೆಯನ್ನು ಸ್ವಲ್ಪವಾದರೂ ಮಿಾರದೆ ಕೃತಜ್ಞತೆಯಿಂದ ನಡೆದು ಕೊಳ್ಳುವೆವೆಂದು ಬಿನ್ನವಿಸಿದರು. ಆಗ ಬೃಹಸ್ಪತ್ಯಾಚಾ ರ್ಯನು ಅವರನ್ನು ಕುರಿತು-ಎಲೈ ದೈತ್ಯರಾಜರುಗಳಿರಾ ! ನೀವು ಹಾಗೆ ನಡೆ ಯುವಂಥಾವರೇ ಸರಿ. ಈ ವಿಷಯದಲ್ಲಿ ನನಗೆ ಬಹಳವಾಗಿ ನಂಬಿಕೆಯುಂಟು. ಆದರೆ ನಾನು ಯೋಚಿಸಿರುವ ಕೆಲಸವು ಬಹಳ ದುರ್ಘಟವಾದದು. ಆ ಕಾರ್ಯಕ್ಕೆ ವಿಷ್ಣುವಿನ ಸಹಾಯವು ಒದಗದಿದ್ದರೆ ಅದು ನಡೆಯಲಾರದು. ಆದುದರಿಂದ ನಾನು ಮೊದಲಿನ ಹಾಗೆಯೇ ಆ ದೇವತೆಗಳಲ್ಲೇ ಸೇರಿಕೊಂಡು ಆ ಕಾರ್ಯದ ಸಂವಿಧಾನ ಗಳನ್ನೆಲ್ಲಾ ಮಾಡುವೆನು. ಅದು ನನ್ನ ಇಷ್ಟಾನುಸಾರವಾಗಿ ಕೈಗೂಡಿದರೆ ತಿರುಗಿ ಬಂದು ನಿಮ್ಮನ್ನು ಕಂಡು ಏಕಾಂತದಲ್ಲಿ ಆ ಸಂಗತಿಯನ್ನೆಲ್ಲಾ ತಿಳಿಸುವೆನು. ಈಗ ನೀವು ಸರ್ವರೂ ಮಹಾತ್ಮರಾದ ಶುಕ್ರಾಚಾರ್ಯರನ್ನು ಕರೆದುಕೊಂಡು ದೇವತೆಗೆ ಳಿಂದ ಬಿಡಲ್ಪಟ್ಟಿರುವ ಸ್ವರ್ಗಲೋಕಕ್ಕೆ ಹೋಗಿ ತ್ರಿಲೋಕಾಧಿಪತ್ಯವನ್ನು ಮಾಡಿ ಕೊಂಡು ಸುಖದಿಂದಿರಿ ಎಂದು ಅವರನ್ನೆಲ್ಲಾ ಅಮರಾವತೀಪಟ್ಟಣಕ್ಕೆ ಕಳುಹಿಸಿ ತಾನು ಅವರ ಅನುಮತಿಯನ್ನು ಹೊಂದಿ ಅಲ್ಲಿಂದ ಹೊರಟು ಮಹಾವಿಷ್ಣುವಿನ ಬಳಿಗೆ ಬಂದು ದೇವೇಂದ್ರನಿಗೆ ದೂರ್ವಾಸರ ಶಾಪ ಬಂದು ದನ್ನೂ ದೇವತೆಗಳನ್ನೆಲ್ಲಾ ನೈಮಿಶಾ ರಣ್ಯಕ್ಕೆ ಕಳುಹಿಸಿ ತಾನು ದೈತ್ಯರ ಬಳಿಗೆ ಹೋಗಿ ಮಾಡಿರುವ ತಂತ್ರವನ್ನೂ ತಿಳಿಸಿ ಮಹಾವಿಷ್ಣುವನ್ನು ಕುರಿತು--ನೀನು ಮಹಾತ್ಮನು. ಸರ್ವಜ್ಞನು ಮತ್ತು ಸರ್ವಶ ಕನು. ಯಥಾಪ್ರಕಾರವಾಗಿ ದೇವತೆಗಳಿಗೆ ಸ್ವರ್ಗಲೋಕ ಪ್ರಾಪ್ತಿಯುಂಟಾಗುವು ದಕ್ಕೆ ಯಾವ ಉಪಾಯವನ್ನು ಹೇಳುವಿಯೋ ಆ ಪ್ರಕಾರವೇ ನಡೆಯುವೆನು ಅಂದನು.