ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 219 ಆ ವೇಳೆಗೆ ಸರಿಯಾಗಿ ಬೃಹಸ್ಪತಾಚಾರ್ಯರು ಬಂದು ಅರಮನೆಯ ಬಾಗಿ ೬ಲ್ಲಿ ನಿಂತು ನಾನು ಬಂದಿರುವ ಸುದ್ದಿಯನ್ನು ಶೀಘ್ರವಾಗಿ ದೈತ್ಯರಾಜನಿಗೆ ತಿಳಿಸು ಎಂದು ಬಾಗಿಲನ್ನು ಕಾಯುವವನಿಗೆ ಹೇಳಲು ಅವನು ಆ ಕೂಡಲೆ ಹೋಗಿ ವಿಜ್ಞಾ ಪಿಸಿದ ಕ್ಷಣದಲ್ಲಿಯೇ ಅವರೆಲ್ಲರೂ ಆಚಾರ್ಯರು ಹೇಳಿದ ಮಾತು ಯುಕ್ತವಾದು ದೆಂದು ನಿಶ್ಚಯಿಸಿಕೊಂಡು ಶುಕ್ರಾಚಾರ್ಯರನ್ನು ಸಂಗಡ ಕರೆದುಕೊಂಡು ಎದುರಿಗೆ ಬಂದು ಸುರಾಚಾರ್ಯರಿಗೆ ಅಭಿನಂದಿಸಿ ಕೈಹಿಡಿದು ವಿಕಾಂತಸ್ಥಳಕ್ಕೆ ಕರೆದುಕೊಂಡು ಹೋಗಿ ದಿವ್ಯ ಪೀಠದಲ್ಲಿ ಕುಳ್ಳಿರಿಸಿ ಸನ್ಮಾನವನ್ನು ಮಾಡಿ ಅವರ ಅಪ್ಪಣೆಯನ್ನು ಪಡೆದು ತಾವೆಲ್ಲರೂ ತಮ್ಮ ತಮ್ಮ ಉಚಿತಸ್ಥಾನಗಳಲ್ಲಿ ಕುಳಿತುಕೊಂಡರು. ಅನಂತರದಲ್ಲಿ ಸುರಾಚಾರ್ಯನು ನಗೆಮೊಗದಿಂದ ಕೂಡಿ ದೈತ್ಯರನ್ನು ಕುರಿತು-ನೀವೆಲ್ಲರೂ ಬಹಳ ಧರ್ಮಿಷರಾದುದರಿಂದ ನಿಮ್ಮ ಕಾರ್ಯವು ಕೈಗೂಡುವ ಹಾಗೆ ದೇವರು ಅನುಗ್ರಹಿ ಸಿದ್ದಾನೆ. ದೇವತೆಗಳಿಗೆ ಸಹಾಯವಾಗಿ ಮಹಾವಿಷ್ಣುವು ತನ್ನ ವಾಸಸ್ಥಾನವಾದ | ಕೀರಸಮುದ್ರವನ್ನು ಮಂದರ ಪರ್ವತದಿಂದ ಕಡೆದರೆ ಅದರಲ್ಲಿ ನಿಮಗೆ ಬೇಕಾದ ಅನ ರ್ಘವಾದ ಪದಾರ್ಥಗಳೂ ಅಮೃತವೂ ಹುಟ್ಟುವುವು. ಆ ಅಮೃತವನ್ನು ನೀವು ಪಾನ ಮಾಡಿದರೆ ಅಮರ್ತ್ಯರಾಗಿ ತಿರಿಗಿ ಯುದ್ದ ರಂಗದಲ್ಲಿ ದೈತ್ಯರನ್ನು ಜಯಿಸಿ ನಿಮ್ಮ ಸ್ವರ್ಗ ಪದವಿಯನ್ನು ಹೊಂದುವಿರಿ ಎಂದು ಅಪ್ಪಣೆಯನ್ನು ಕೊಡಲು ಅಲ್ಲಿಂದ ಬಂದು ದೇವ ತೆಗಳನ್ನು ಕುರಿತು ನಾನು-ಎಲೈ ದೇವತೆಗಳಿರಾ ! ನೀವು ಅಲ್ಪ ಬಲರು. ಮೇರು ಪರ್ವತಕ್ಕೆ ಸಮಾನವಾದ ಮ೦ದರಪರ್ವತವನ್ನು ಕಿತ್ತು ಹೊತ್ತು ಕೊಂಡು ಬರುವುದಕ್ಕೆ ನಿಮಗೆ ಶಕ್ತಿ ಸಾಲದು. ಇದಕ್ಕೋಸ್ಕರ ಒಂದು ಒಳ್ಳೆಯ ಯೋಚನೆಯು ನನ್ನ ಮನ ಸ್ಸಿಗೆ ತೋರಿದೆ. ಅದೇನೆಂದರೆ, ನೀವೂ ದೈತ್ಯರೂ ಒಬ್ಬ ತಂದೆಯ ಮಕ್ಕಳು. ಅವರಿಗೆ ನೀವು ದ್ವೇಷಿಗಳಾಗಿರುವುದರಿಂದ ಪದೇ ಪದೇ ನಿಮಗೆ ಇಂಥ ತೊಂದರೆಗಳು ಸಂಭವಿ ಸುತ್ತ ಇರುತ್ತವೆ. ಲೋಕದಲ್ಲಿ ಸ್ವಜನವಿರೋಧವು ಬಲು ಕೆಟ್ಟುದು, ಅದರಿಂದ ದುಃಖ ಪ್ರಾಪ್ತಿಯೇ ಹೊರತು ಎಳ್ಳಷ್ಟಾದರೂ ಸುಖವಿಲ್ಲವು. ಆದುದರಿಂದ ನೀವೂ ಅವರೂ ಐಕಮತ್ಯದಿಂದ ಕೂಡಿದರೆ ಎಂಥ ಅಸಾಧ್ಯ ಕಾರವಾದರೂ ನಿರ್ವಿಘ್ನವಾಗಿ ನಡೆಯು ವುದು. ಆ ಮೇಲೆ ಇತ್ತಂಡದವರೂ ಅಮೃತಪಾನವನ್ನು ಮಾಡಿ ಸುಖದಿಂದ ಸಹೃದ ಯರಾಗಿರಬಹುದು ಎಂದು ಹೇಳಿದನು. ಅದಕ್ಕೆ ಅವರೆಲ್ಲರೂ ಸಂತೋಷದಿಂದ ನನ್ನನ್ನು ಕುರಿತು ತಾವೇ ದೈತ್ಯರಿಗೂ ನಮಗೂ ಸಂಧಿಮಾಡಿಸಬೇಕೇ ಹೊರತು ಇನ್ಯಾರಿಂದಲೂ ಈ ಕಾರ್ಯವು ನೆರವೇರಲಾರದು ಎಂದು ಬಹಳವಾಗಿ ಬೇಡಿಕೊಂ ಡುದರಿಂದ ನಾನು ನನ್ನ ಮನಸ್ಸಿನಲ್ಲಿ ಯೋಚಿಸಿದ ಯೋಚನೆಯು ಕೈಗೂಡುವುದೆಂದು ಸಂತೋಷಪಟ್ಟು ಕೊಂಡು ಅವರ ಮಾತಿನ ಮೇರೆಗೆ ನಿಮ್ಮ ಬಳಿಗೆ ಬರುವವನ ಹಾಗೆ ಇಲ್ಲಿಗೆ ಬಂದೆನು ಎಂದು ಹೇಳಿದನು. ಈ ಮಾತನ್ನು ಕೇಳಿ ಶುಕ್ರಾಚಾರ್ಯರೂ ದೈತ್ಯರಾಜರೂ ಬೃಹಸ್ಪತ್ಯಾಚಾ ರ್ಯರ ಯುಕ್ತಿಯನ್ನು ಬಹಳವಾಗಿ ಕೊಂಡಾಡಿ ಮುಂದೆ ನಾವು ನಡೆಯಬೇಕಾದ ಕ್ರಮವನ್ನು ದಯೆಮಾಡಿ ನೇಮಿಸಬೇಕೆಂದು ಬೇಡಿಕೊಂಡರು. ಅದಕ್ಕೆ ಸಂತುಷ್ಟ