ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾಹಾವತಾರದ ಕಥೆ 225 ದವರನ್ನು ಹೊಡೆದು ನಾಶಮಾಡುತ್ತಾ ಬರುತ್ತಿರಲು ದೇವತೆಗಳಲ್ಲಿ ಒಬ್ಬರಾದರ ಅವನಿಗೆದುರಾಗದೆ ಅವನು ಕಾಣದ ಹಾಗೆ ಓಡಿಹೋಗಿ ಮೈಮರಸಿಕೊಳ್ಳುತ್ತ ಇದ್ದರು. ತರುವಾಯ ಹಿರಣ್ಯಾಕ್ಷನು ಎದುರಿಗೆ ನಿಂತು ಕಾದುವವರು ಯಾರೂ ಇಲ್ಲದೆ ಹೋಗಲು ಪುನಃ ಹೊರಟು ಬಲಿಷ್ಠರಾದವರನ್ನು ಹುಡುಕುತ್ತ ಆರ್ಭಟಿಸಿ ಕೊಂಡು ಅಮರಾವತೀಪಟ್ಟಣವನ್ನು ಹೊಗಲು ದೇವತೆಗಳೆಲ್ಲಾ ಅವನನ್ನು ಕಂಡು ಹೆದರಿ ಮರ್ಧೆಹೋಗಿ ಎದ್ದು ದಿಕ್ಕು ದಿಕ್ಕುಗಳಿಗೆ ಚದುರಿಹೋದರು. ಆಗ ಹಿರಣ್ಯಾ ಕ್ಷನು ದೇವೇಂದ್ರನ ಬಳಿಗೆ ಬಂದು ಅವನನ್ನು ಕುರಿತು-ಎಲೈ ಇಂದ್ರನೇ ! ನೀನು ಈ ದೇವತೆಗಳಿಗೆಲ್ಲಾ ಒಡೆಯನೆನ್ನಿಸಿಕೊಂಡು ಜಂಭಾಸುರಪಾಕಾಸುರಾದಿ ಬಲಿಷ್ಠ ರಾದ ದೈತ್ಯರನ್ನು ಯುದ್ಧರಂಗದಲ್ಲಿ ಜಯಿಸಿ ಗರ್ವಿತನಾಗಿ ಜ೦ಭಾರಿ ಪಾಕಶಾಸನ ಎಂದು ಹೊಗಳಿಸಿಕೊಳ್ಳುತ್ತಿರುವಿಯಷ್ಟೆ. ತಡಮಾಡಬೇಡ, ಏಳು, ನನ್ನೊಡನೆ ಕಾಳೆ ಗಕ್ಕೆ ನಿಲ್ಲು, ನೋಡೋಣ ಎನ್ನಲು ಆಗ ದೇವೇಂದ್ರನು ಬೆಚ್ಚಿ ಗಡಗಡನೆ ನಡು ಗುತ್ತ-ಅಯ್ಯಾ ಮಹಾತ್ಮನಾದ ದೈತ್ಯರಾಜನೇ ! ಎಲ್ಲಾದರೂ ಎಂದಾದರೂ ಬೆಂಕಿ ಯೊಡನೆ ಅರಳೆಗೂ ಸಿಂಗದೊಡನೆ ಮೊಲಕ್ಕೂ ಗರುಡನೊಡನೆ ಹಾವಿಗೂ ಜಗಳವಾ ದರೆ ಅರಳೆ ಮೊಲ ಹಾವುಗಳು ನಾಮಮಾತ್ರಾವಶೇಷಗಳಾಗದೆ ಬದುಕುವುದುಂಟೇ ? ಹಾಗೆ ನಾನು ಮಹಾವೀರನಾದ ನಿನ್ನೊ ಡನೆ ಜಗಳವಾಡಿ ಬದುಕಬಲ್ಲೆನೇ ? ಅಲ್ಪಬಲ ನಾದ ನಾನು ನಿನಗೆ ಸಮಾನನೇ ಎಂದು ದೈನ್ಯವಚನದಿಂದ ಬಹುವಿಧವಾಗಿ ಹೇಳಿ ಕೊಳ್ಳಲು ಆಗ ಹಿರಣ್ಯಾಕ್ಷನು-ಛೀ ಹೇಡಿಯೇ ! ನೀನು ಗಂಡಸು ಎಂದು ಹುಟ್ಟಿ ಬಹುದೇ ? ಮೂರು ಲೋಕಗಳ ಅಧಿಪತಿಯೆನ್ನಿಸಿಕೊಂಡು ಹೀಗೆ ಸಾವಿಗೆ ಅಂಜಿ ಕಾಳೆಗಕ್ಕೆ ನಿಲ್ಲಲಾರದೆ ಹೋದ ನಿನ್ನ ಜನ್ಮವನ್ನು ಸುಡಬೇಕು. ನೀನು ಪುರುಷಾಕಾ ರದ ಹೆಂಗಸೇ ಸರಿ ಎಂದು ಹೀಯಾಳಿಸಿ ಅವನನ್ನು ಬಿಟ್ಟು ಅಲ್ಲಿಂದ ಹೊರಟು ಅಗ್ನಿ , ಯಮ ನಿರುತಿ ವಾಯು ಕುಬೇರಾದ್ಯರ ನಗರಗಳಿಗೆ ಹೋಗಲು ಅವರೆಲ್ಲರೂ ಪ್ರಚ೦ ಡನಾದ ಇವನು ಬರುವ ವರ್ತಮಾನವನ್ನು ಕೇಳಿ ಅವನ ಕಣ್ಣುಗಳಿಗೆ ಕಾಣಿಸಿಕೊ ಇದೆ ತೋರಿದ ಕಡೆಗೆ ಓಡಿಹೋಗಿ ಅವಿತು ಕೊಂಡರು. ಅದನ್ನು ಕಂಡು ಹಿರಣ್ಯಾಕ್ಷನು--ಅಯ್ಯೋ, ನನಗೆ ಎದುರಾಗಿ ಕಾಳಗಕ್ಕೆ ನಿಂತು ಕಾದುವವರು ಯಾರೂ ಇಲ್ಲದೆ ಹೋದರಲ್ಲಾ! ನಾನು ಎಷ್ಟು ವಿಶೇಷವಾಗಿ ಹುಡುಕಿಕೊಂಡು ತಿರುಗಿದಾಗೂ ನಿಷ್ಟ್ರಯೋಜನವಾಯಿತಲ್ಲಾ ! ನನ್ನ ತೋಳಿಟೆ ಯನ್ನು ಎಲ್ಲಿ ಹೋಗಿ ಕಳೆದುಕೊಳ್ಳುವೆನೋ ತಿಳಿಯದಲ್ಲಾ ಎಂದು ಯೋಚಿಸುತ್ತ ಸಮುದ್ರವನ್ನು ಹೊಕ್ಕು ವರುಣನ ಪಟ್ಟಣಕ್ಕೆ ಹೋಗಿ ಆತನನ್ನು ಹಿಡಿದು ಬೇಗ ಕಾಳಗಕೈ ಬಾರೋ ಎಂದು ಕರೆಯಲು ಆಗ ಆತನು ಭಯಚಕಿತಮನಸ್ಸುಳ್ಳವನಾಗಿ ದೈನ್ಯದಿಂದ ಕೂಡಿ - ಮಹಾಪರಾಕ್ರಮಶಾಲಿಯಾದ ನಿನ್ನೊಡನೆ ಎದುರಾಗಿ ನಿಂತು ಕಾಡುವುದಕ್ಕೆ ಕು ದ್ರಬಲನಾದ ನನಗೆ ಶಕ್ತಿಯುಂಟೇ ! ಜಗದೇಕವೀರನಾದ ನಿನ್ನೂ ಡನೆ ಕಾದುವುದಕ್ಕೆ ನನಗೆ ಶಕ್ತಿಯಿಲ್ಲವೆಂದು ಕೈ ಮುಗಿದು ಬೇಡಿಕೊಳ್ಳಲು ಆಗ ದೈತ್ಯನು ವ್ಯಸನಾಕ್ರಾಂತನಾಗಿ ವರುಣನನ್ನು ಕುರಿತು-ನೀನು ಬಲುಮುದಕನಾಗಿದ್ದೀ 15