ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾಹಾವತಾರದ ಕಥೆ 227 ಗಿರಿಗಳಾಗಿ ವರಾಹನ ಮೇಲೆ ಬಿದ್ದುರುಳಿದನು. ಬಲ್ನಲ್ಕುಂಡುಗಳಾಗಿ ಸುರಿದು ಕಣ್ಣ ಆಸಿದನು. ಕತ್ತಲೆಯಾಗಿ ಕವಿದು ಮು೦ಗೆಡಿಸಿದನು. ಹುಲಿ ಕರಡಿ ಸಂಗ ಮೊದಲಾದ ಇಷ್ಟ ಮೃಗಗಳಾಗಿ ಬಂದು ವರಾಹನನ್ನು ಪರಚಿದನು, ಕಚ್ಚಿದನು. ಕವರಿದನು. ವಿಧವಾದ ವಿಷ ಸರ್ಪಗಳಾಗಿ ಮೆರೆಯುತ್ತ ಬಂದು ವರಾಹನನ್ನು ಮುತ್ತಿ ಸುತ್ತಿ ಕೊಂಡು ಕಚ್ಚಿ ಖಂಡಗಳನ್ನು ಕಿತ್ತು ಗಾಯಗಳಲ್ಲಿ ಮಹಾ ವಿಷವನ್ನು ಕಾರಿದನು. ಮತ್ತು ಕಾಡ್ಲಿ ಬ್ಲಾಗಿ ಕವಿದು ದಹಿಸಿದನು. ಭೂತ ಪ್ರೇತ ಪಿಶಾಚಗಳ ತಂಡಗಳಾಗಿ ಒಂದು ವರಾಹನನ್ನು ಮುತ್ತಿ ಕೊಂಡು-ಕೊಬ್ಬಿದ ಹಂದಿ ಬಲೆಗೆ ಸಿಕ್ಕಿತು. ಕವಿ ಕವಿ ! ತಿವಿ ತಿವಿ ! ಹೊಡಿ ಹೊಡಿ ! ಬಸುರಿಂದ ಕರುಳುಗಳನ್ನು ಕೀಳು, ಕೀಳು ! ರಕ್ತವನ್ನು ಹೀರು ಎಂದು ಆರ್ಭಟಿಸುತ್ತ ಇನ್ನೂ ವಿವಿಧವಾಗಿ ವರಾಹನಿಗೆ ಹಿಂಸೆಯ ನ್ನುಂಟುಮಾಡುತ್ತ ತನ್ನ ಮಾಯಾಸಾಮರ್ಥ್ಯವನ್ನು ತೋರಿಸುತ್ತ ಮತ್ತೆ ತನ್ನ ಪೂರ್ವದ ದೈತ್ಯರೂಪವನ್ನೇ ಧರಿಸಿ---ಎಲಾ ಹಂದಿಯೇ ! ಕಾದುಬಾರೋ, ಮುಷ್ಟಿ ಯುದ್ದಕ್ಕೆ ನಿಲ್ಲು ಎಂದಬ್ಬರಿಸಿ ತಿವಿಯಲು ಆಗ ವರಾಹನು ರೋಷಾವೇಶಕವಾಯಿ ತಾಕಿಗಳಿಂದ ಕೂಡಿ ತನ್ನ ವಜ್ರ ಮುಷ್ಟಿಯಿಂದ ಹಿರಣ್ಯಾಕ್ಷನ ಹಣೆಯನ್ನು ತಿವಿದನು. ಆ ಹೊಡೆತದಿಂದ ದೈತ್ಯನು ತಲೆಯೊಡೆದು ಕಿವಿಬಾಯ ಗುಗಳಲ್ಲಿ ಕೆನ್ನಿರ್ಸು ರಿದು ಹಲ್ಲುಗಳುದುರಿ ಭೂಮಿಯಲ್ಲಿ ಬಿದ್ದು ಒದೆದಾಡಿ ಬಾಧೆಯಿಂದ ನರಳುತ್ತ ಮೈಮರೆತು ಕಡೆಗೆ ಸತ್ತು ಬಿದ್ದನು. ಅನಂತರದಲ್ಲಿ ವರಾಹರೂಪಧಾರಿಯಾದ ಮಹಾ ವಿಷ್ಣುವು ಭೂಮಿಯನ್ನು ತೆಗೆದು ಕೊಂಡು ಹೋಗಿ ಮೊದಲಿನಂತೆ ಸ್ಥಾಪಿಸಿ ಹವ್ಯಕ ಗಳು ಮೊದಲಿನಂತೆ ನಿರ್ವಿಘ್ನವಾಗಿ ನಡೆಯುವಂತೆ ಮಾಡಿ ದೇವತೆಗಳನ್ನೂ ಮುನಿಜನ ರನ್ನೂ ಸಜ್ಜನರನ್ನೂ ಸಲಹಿ ವೈಕು೦ಠಲೋಕಕ್ಕೆ ಹೋದನು. 4, THE FOURTH OR MAN-LION INCARNATION. ೪. ನರಸಿಂಹಾವತಾರದ ಕಥೆ. ಅನಂತರದಲ್ಲಿ ಹಿರಣ್ಯಕಶಿಪುಹಿರಣ್ಯಾಕ್ಷರ ತಾಯಿಯಾದ ದಿತಿಯು ತನ್ನ ಕಿರಿಯ ಮಗನಾದ ಹಿರಣ್ಯಾಕ್ಷನು ವರಾಹರೂಪಧಾರಿಯಾದ ಮಹಾವಿಷ್ಣುವಿನಿಂದ ಸಂಕೃತನಾದ ಸುದ್ದಿಯನ್ನು ಕೇಳಿ ಸಿಡಿಲು ಬಡಿದು ಸಮೂಲವಾಗಿ ಮುರಿದಿಳೆಗುರು ಳಿದ ದೊಡ್ಡ ಮರದಂತೆ ಭೂಮಿಯಲ್ಲಿ ಬಿದ್ದು ಮೂರ್ಛಿತಳಾಗಿ ಒಂದೆರಡು ಗಳಿಗೆ ಗಳಾದ ಮೇಲೆ ಚೇತರಿಸಿಕೊಂಡು ಮಹಾದುಃಖದಿಂದ ಹೊಟ್ಟೆ ಯನ್ನೂ ಬಾಯಿ ಯನ್ನೂ ಬಡಿದುಕೊಳ್ಳುತ್ತಾ ಅಡಿಗಡಿಗೆ ಮಗನ ಶಕ್ತಿ ಪರಾಕ್ರಮಗಳನ್ನು ನೆನೆನೆನದು ಹಂಬಲಿಸಿ ಮರುಗುತ್ತ ತಡೆಯಿಲ್ಲದೆ ಕಣ್ಣೀರುಗಳನ್ನು ಸುರಿಸುತ್ತ ತಲೆಯನ್ನು ಕೆದ ರಿಕೊಂಡು ಬಹು ಸಂತಾಪಯುಕ್ತಳಾಗಿ ಹಿರಿ ಮಗನಾದ ಹಿರಣ್ಯಕಶಿಪುವಿನ ಬಳಿಗೆ ತಂದು ಅಪ್ಪಾ ಮಗನೇ! ಪಾಪಿಷ್ಠಳಾದ ನನ್ನೊಡಲು ಬೆಂದು ಬೆಂಡಾದುದು. ನಾನೀ ಪ್ರಾಣಗಳನ್ನು ಧರಿಸಲಾರೆನು. ಅಸಹಾಯ ಶೂರನಾದ ನಿನ್ನ ತಮ್ಮನು ಬೇಡ