ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

228 ಕಥಾಸಂಗ್ರಹ-೫ ನೆಯ ಭಾಗ ವೆಂದು ಎಷ್ಟು ವಿಧವಾಗಿ ಹೇಳಿದರೂ ಕೇಳದೆ ಭೂಮಿಯನ್ನು ತೆಗೆದುಕೊಂಡು ಹೋಗಿ ರಸಾತಲದಲ್ಲಿಟ್ಟನು. ಆ ನಿಮಿತ್ತದಿಂದ ವರಾಹಾಕಾರಧಾರಿಯಾಗಿ ಬಂದ ವಿಷ್ಣುವು ಆತನನ್ನು ಕೊಂದನು ಎಂದು ಬಹಳವಾಗಿ ರೋದಿಸುತ್ತ ಅವನ ಕೊರಳನ್ನು ತಬ್ಬಿಕೊಂಡು ಎಲೈ ಕಂದಾ ! ಕೆಟ್ಟೆನು, ಕೆಟ್ಟೆನೈ ! ಹಾ ಎಂದು ಮೊರೆಯಿಡಲು ಆ ಮಾತುಗಳನ್ನು ಕೇಳಿ ಹಿರಣ್ಯಕಶಿಪುವು ಮಹಾರೋಷಪರವಶನಾಗಿ ಏಳಲು ಕೂಡಲೆ ಅವನ ಕಣ್ಣಳೆರಡೂ ಕೆಂಡಗಳನ್ನು ಕಾರಿದುವು. ಮೂಾಸೆಗಳು ಕುಣಿಕುಣಿದಾಡಿದುವು. ತರುವಾಯ ಅವನು ಕೋಪಕ೦ಪಿತಾಧರನಾಗಿ ಈ ಕ್ಷಣದಲ್ಲಿಯೇ ಆ ನೀಚ ಸೂಕರ ನನ್ನು ಹಿಡಿದೆಳದು ಕೊಂಡು ಬಂದು ಸತ್ಯ ತಮ್ಮನ ಕಾಲುಗಳ ಬಳಿಯಲ್ಲಿ ಕೆಡಹಿ ತತ್ತ ರದರಿದು ದಿಗ್ಟಲಿಯನ್ನು ಕೊಡುವೆನು ಎಂದು ದಿಕ್ಸಿಗಳೊಡೆಯುವಂತೆ ಆರ್ಭಟಿಸುತ್ತ ಹೊರಟು ಕ್ರಮವಾಗಿ ದಶದಿಕ್ಕುಗಳನ್ನೂ ಸಮುದ್ರಗಳನ್ನೂ ಅವುಗಳೊಳಗಣ ದೀಪಾಂತರಗಳನ್ನೂ ತಲಾತಲ ರಸಾತಲ ಪಾತಾಳಾದಿ ಲೋಕಗಳನ್ನೂ ಪ್ರವೇಶಿಸಿ ಎಷ್ಟು ವಿಧವಾಗಿ ಹುಡುಕಿದಾಗ ಮಹಾವಿಷ್ಣುವನ್ನು ಕಾಣದೆ ಆತನು ಧರ್ಮದ ಬಳಿಯಲ್ಲಿರುವನೆಂದು ತನ್ನ ಮನಸ್ಸಿನಲ್ಲಿ ಯೋಚಿಸಿ ವೇದಶಾಸ್ತ್ರಗಳನ್ನು ಓದುವವರ ಬಳಿಗಳಲ್ಲೂ ಜಪತಪೋಹೋಮನಿಯಮಗಳು ನಡೆಯುವ ಸ್ಥಳಗಳಲ್ಲೂ ಗಂಗಾದಿ ಮಹಾ ನದಿಗಳ ತೀರಗಳಲ್ಲೂ ಪುಣ್ಯಕ್ಷೇತ್ರಗಳಲ್ಲೂ ಹೋಗಿ ನೋಡಿ ನೋಡಿ ಸಾಕಾಗಿ ಎಲ್ಲೂ ವಿಷ್ಣುವನ್ನು ಕಾಣದೆ ಆ ಸುಜನರನ್ನೂ ಮುನಿಜನಗಳನ್ನೂ ಹೊಡೆದು ಬಾಧಿಸಿ ಅವರ ಸತ್ಕರ್ಮಗಳನ್ನೆಲ್ಲಾ ವಿನಾಶಮಾಡಿ ಅಲ್ಲಿ ಒಂದು ಸ್ಥಳದಲ್ಲಿ ನಿಂತು ಈ ವರೆಗೂ ಎಷ್ಟು ಹುಡುಕಿದಾಗ ಆ ಕಳ್ಳನಾದ ವಿಷ್ಣುವು ಸಿಕ್ಕಲಿಲ್ಲ. ಈ ಹುಡು ಕುವಿಕೆಯು ಹಾಗಿರಲಿ. ಇನ್ನು ಮೇಲೆ ನನಗೆ ಯಾರಿಂದಲೂ ಮರಣವು ಸಂಭವಿಸ ದಂತೆ ಸರೋಜಸಂಭವನಿಂದ ವರವನ್ನು ಪಡೆದು ಆ ವರಬಲದಿಂದ ಆ ಕಪಟಿಯಾದ ವಿಷ್ಣುವು ಎಲ್ಲಿ ಹೊಕ್ಕಿದ್ದರೂ ಹಾವಾಡಿಗನು ಮಂತ್ರಬಲದಿಂದ ಹುತ್ತದಲ್ಲಿ ಹೊಕ್ಕಿದ್ದ ಹಾವನ್ನು ಹೊರಗೆ ತೆಗೆದು ವಿಷದ ಹಲ್ಲನ್ನು ಮುರಿಯುವ ಹಾಗೆ ಅವನನ್ನು ಹಿಡಿದು ಬಡಿದು ಕೊಂದುಹಾಕಿ ನಿರ್ನಾಮಮಾಡಿಬಿಡುವೆನು ಎಂದು ತನ್ನ ಮನಸ್ಸಿಲ್ಲಿ ನಿಶಯ ಸಿಕೊಂಡು ಹಿಂದಿರುಗಿ ತನ್ನ ತಾಯಿಯ ಬಳಿಗೆ ಬಂದು ತಾಯಿಯೇ ! ಆ ಮಾಯಿ ಯಾದ ವಿಷ್ಣುವು ಈ ವರೆಗೂ ಎಷ್ಟು ಹುಡುಕಿದಾಗ ಸಿಕ್ಕಲಿಲ್ಲ. ನನ್ನ ಆಯುಕ್ತಿ ಕಾಲವಿರುವ ವರೆಗೂ ಚೆನ್ನಾಗಿ ಅರಸಿ ಅವನು ಎಲ್ಲಿದ್ದರೂ ಬಿಡದೆ ಹಿಡಿದು ಅವನನ್ನು ಬಡಿದು ಕೊಲ್ಲದೆ ಬಿಡೆನು, ಆದರೆ ಈಗ ನನ್ನ ಪ್ರಾಣಗಳಿಗೆ ಭಯವಿಲ್ಲದಂತೆ ಮಹಾ ಘೋರತಪಸ್ಸನ್ನು ಮಾಡಿ ವರವನ್ನು ಪಡೆದುಕೊಂಡು ಬರುವೆನು. ಆ ವರೆಗೂ ನೀನು ದುಃಖಿಸದೆ ಇರು ಎಂದು ತನ್ನ ತಾಯಿ ಮೊದಲಾದ ಸಂಸಾರದ ಜನಗಳನ್ನೆಲ್ಲಾ ಸಮಾಧಾನಪಡಿಸಿ ಅಲ್ಲಿಂದ ಹೊರಟು ಅತಿ ಶೀಘ್ರಗತಿಯಿಂದ ಮಂದರಪರ್ವತಕ್ಕೆ ಬಂದು ಅಲ್ಲೊಂದು ಪ್ರಶಸ್ತವಾದ ಸ್ಥಳದಲ್ಲಿ ಕಾಲಿನ ಹೆಬ್ಬಟ್ಟನ್ನು ನೆಲಕ್ಕೂರಿ ನಿಂತು ಕತ್ತನ್ನು ಎತ್ತಿ ಕಣ್ಣು ಬಿಟ್ಟು ಕೊಂಡು ಸೂರ್ಯನನ್ನು ಅವಲೋಕಿಸುತ್ತ ಚಿತ್ತೆ ಕಾ ಗ್ರತೆಯಿಂದ ಕೂಡಿ ಸಂಪೂರ್ಣಭಕ್ತಿಯುಕ್ತನಾಗಿ ಬ್ರಹ್ಮದೇವನನ್ನು ಕುರಿತು ಅನೇಕ