ಪುಟ:ಕಥಾಸಂಗ್ರಹ ಸಂಪುಟ ೨.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13. ರಾವಣನ ದಿಗ್ವಿಜಯವು ಹೀಗೆ ಹರಟುತ್ತೀಯೆ ಎಂದು ಅಪಹಾಸ್ಯ ಮಾಡಲು ನಂದೀಶ್ವರನು ಇವನ ದುರಹಂ ಕಾರಕ್ಕೆ ಬಹು ಕುಪಿತನಾಗಿ ದಶಕಂಠನನ್ನು ಕುರಿತು-ಎಲೈ ಖಳಾಧಮನೇ ! ನಿನ್ನ ಶೌರ್ಯವು ನನ್ನಿಂದ ತೃಣಕ್ಕಾದರೂ ಎಣೆಯಾಗಿ ಎಣಿಸಲ್ಪಡುವುದಿಲ್ಲವು. ನಿನ್ನನ್ನು ಕೊಲ್ಲುವುದು ನನಗೆ ಗಣನೆಯಲ್ಲವು. ನಿನ್ನ ಕೆಟ್ಟ ನಡತೆಗಳಿಂದ ನೀನೇ ಸವಲನಾಗಿ ನಿರ್ಮಲನಾಗುವೆ. ಇದು ನಿಜವು. ನೀನು ನನ್ನ ಮುಖವನ್ನು ನೋಡಿ ಕೊತಿಯ ಮುಖದಂತಿದೆ ಎಂದು ಹಾಸ್ಯ ಮಾಡಿದುದರಿಂದ ನಿನಗೆ ಕೋತಿಗಳಿಂದಲೇ ಪರಾಜಯ ವುಂಟಾಗಲಿ ಎಂದು ಶಾಪವನ್ನಿ ತನು. ಆ ಮೇಲೆ ದಶವಕ್ಕನು-ಈ ಕೈಲಾಸಪರ್ವತವ ಲ್ಲವೇ ನನ್ನ ವಿಮಾನದ ಗತಿಯನ್ನು ತಡೆಯಿತು ? ಒಳ್ಳೆಯದು. ಮೊದಲಿದರ ಮಹಿ ಮೆಯನ್ನು ಮುರಿದು ಆ ಮೇಲೆ ಶಿವನ ಬಲುಮೆಯನ್ನು ನೋಡುವೆನು ಎಂದು ವಿಮಾ ನದಿಂದಿಳಿದು ಮೊದಲು ಸುರಾಸುರರು ಸಮುದ್ರಮಥನಕ್ಕಾಗಿ ಮಂದರಾಚಲವನ್ನು ಮಹಾ ವಾಸುಕಿಯಿ೦ದ ಬಿಗಿದಂತೆ ಆ ಹರಾದ್ರಿಯನ್ನು ತನ್ನಿ ಪ್ಪತ್ತು ತೋಳಳಿಂದಲೂ ಬಿಗಿದು ಊರ್ಧ್ವಲೋಕವು ಅಲ್ಲಾಡುತ್ತಿರಲು ಭೂತಲವು ರಸಾತಲಕ್ಕಿಳಿಯುತ್ತಿರಲು ದಿಗಂತಗಳು ಬಿರಿಯುತ್ತಿರಲು ಆರ್ಭಟಿಸಿ ಕಿತಿದನು. ಅವನ ಬಾಹುಬಲವಿನ್ನೆ ನಿತಿ ರುವುದೋ ? ಖಳನು ಕಿತ್ತೆತ್ತಲು ಕೈಲಾಸಗಿರಿಯು ಮೇಲೆದ್ದಿತು. ಅವನಾಳುತನದ ಬಿಂಕಕ್ಕೆ ಅಖಿಳ ಜನವೂ ಗಡಗಡನೆ ನಡುಗಿತು. ಹರನಿಗೆ ಪಾರ್ವತಿಯಿಂದ ಪ್ರಾರ್ಥಿ ತಾಲಿಂಗನೆಯು ದೊರೆಯಿತು. ಮೃತ್ಯುಂಜಯನು ಇದು ದಶಕಂಠನ ದುಶ್ಲೇಷ್ಟೆ ಯೆಂದರಿತು ಕೂಡಲೆ ತನ್ನ ಪಾದಾಂಗುಷ ದಿಂದ ಮೆಟ್ಟಿಲು ಗಿರಿಯು ಕೆಳಗಿಳಿಯಿತು. ತಿರಿಗಿ ದಶಕಂಠನು ಮೇಲೆತ್ತಿದನು. ಹೀಗೆ ಅನೇಕಾವೃತ್ತಿ ದಶಕಂಠನು ಎತ್ತುತ ಭೂತೇಶನು ಅಮುಕುತ್ತ ಇರಲು ಆ ಕೈಲಾಸನಗರವು ಭೂದೇವಿಯಾಡುತ್ತಿರುವ ತಿರಿಕಲ್ಲಿನಂತೊಪ್ಪುತ್ತಿದ್ದಿತು. ಇಂತಿರಲು ಒಂದು ಸಾರಿ ರಕ್ಕಸನ ಇಪ್ಪತ್ತು ನಿಡುದೋಳ ಭೂ ಆ ಗಿರಿಯ ಇರುಬಿನಲ್ಲಿ ಸಿಕ್ಕಲು ಅವನು ಕೋಪದಿಂದುಬ್ಬಿ ಬೊಬ್ಬಿರಿದೊಳನೂಕಿ ಎತ್ತಲಾಗಿ ಆಗ ಶಿವನು ಬಲವಾಗಿ ಮೆಟ್ಟಿದನು. ಆ ಮೇಲೆ ಖಳನ ದಿಟ್ಟ ತನವಡಗಿತು. ಮನಸ್ಸು ವ್ಯಥೆಗೊಳಗಾಯಿತು. ಬುದ್ಧಿಯು ವಿಚಾರಗೆಟ್ಟಿತು. ಕಾರ್ಯವೇಗದಲ್ಲಿ ಮಾಂದ್ಯ ಉಂಟಾಯಿತು. ಆಗ ಇತಿಕರ್ತವ್ಯ ತಾಮೂಢನಾಗಿ ಭೂಮಿಯು ಬಿರಿಯುವಂತೆ ಆರ್ಭಟಿಸಿ ಬಹುಬಾಧೆಗೊಳಗಾಗಿ ಕೊರಗುತ್ತಿರಲು ಇದೇನು ? ಅತ್ಯದ್ಭುತಾರ್ಭಟ ಧ್ವನಿಯು ! ಲೋಕಾವಸಾನಸಮಯವೋ ? ಎಂದು ಮಾನವಾವರ ನಾಗಾಲೋ ಕಗಳು ಬಲು ನಡುಗಿದವು. ಆ ಸಮಯದಲ್ಲಿ ಅವನ ಮಂತ್ರಿಗಳು ತನ್ನೊಡೆಯನ ವಿಷ ದವಸ್ಥೆಯನ್ನು ಕಂಡು ಏನೈ ದಶವದನನೇ ! ನಿನ್ನ ಬಲವೇನಾಯಿತು ? ಜಗದೀಶ ನೊಡನೆ ನಿನಗೆ ಕಲಹವೇ ? ಸರ್ವಲೋಕಾಂತಕಾರಿಯನ್ನು ಕೆಣಕಿ ಬದುಕುವವ ರುಂಟೇ ? ಇಲ್ಲವು. ಅದು ಕಾರಣ ನೀನು ಶೀಘ್ರವಾಗಿ ಲೋಕಶಂಕರನಾದ ಶಂಕರ ನನ್ನು ಭಜಿಸು ವೇದಗಳಿ೦ದ ಸ್ತುತಿಸು ಎಂದು ಹೇಳಲು ದಶಾಸ್ಯನು ಹಾಗೇ ಆಗ ಲೆಂದು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಸಾಮಗಾನದಿಂದ ಸ್ತುತಿಸಿದನು. ಆಗ