ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

234 ಕಥಾಸಂಗ್ರಹ-೫ ನೆಯ ಭಾಗ ಕರೆದು ಏಕಾಂತದಲ್ಲಿ ಒಂದು ಮಾತನ್ನು ಹೇಳಿದುದರಿಂದ ಅದರಿಂದ ದೇವೇಂದ್ರನು ಬಹಳವಾಗಿ ಸಂತೋಷಪಟ್ಟುಕೊಂಡು ಮಹಾವಿಷ್ಣುವಿಗೆ ದೀರ್ಘದಂಡನಮಸ್ಕಾರ ವನ್ನು ಮಾಡಿ ಸರ್ವದೇವತಾಸಮಹದೊಡನೆ ತಿರುಗಿ ತನ್ನ ನಗರವಾದ ಅಮರಾ ವತಿಗೆ ಬಂದು ವಿಷ್ಣುವು ಗುಟ್ಟಾಗಿ ತನ್ನೊಡನೆ ಹೇಳಿದಂತೆ ತನ್ನ ಸಮಸ್ತ ಪರಿವಾರ ದೊಡನೆ ಕೂಡಿ ರಾತ್ರಿ ವೇಳೆಯಲ್ಲಿ ಹೊರಟು ಹಿರಣ್ಯಕಶಿಪುವಿನ ರಾಜಧಾನಿಯಾದ ಶೋಣಿತಪುರಕ್ಕೆ ಒಮ್ಮಿಂದೊಮ್ಮೆ ಮುತ್ತಿಗೆಯನ್ನು ಹಾಕಿ ಪಟ್ಟಣವನ್ನು ಹೊಕ್ಕು ಸರ್ವರನ್ನೂ ವಿವಿಧವಾಗಿ ಹಿಂಸಿಸಿ ಮಂತ್ರಿ ಸೇನಾಪತಿ ಸೈನ್ಯಾದಿ ಸಕಲ ದೈತ್ಯರನ್ನೂ ಹೊಡೆದು ಸೋಲಿಸಿ ಅಂತಃಪುರವನ್ನು ಹೊಕ್ಕು ಪೂರ್ಣಗರ್ಭಿಣಿಯಾಗಿದ್ದ ಆ ಹಿರಣ್ಯ ಕಶಿಪುವಿನ ಪತ್ನಿಯನ್ನು ಸೆರೆಹಿಡಿದುಕೊಂಡು ಹಿಂದಿರುಗಿ ಬಂದು ಅಮರಾವತೀ ಪಟ್ಟ ವನ್ನು ಸೇರಿದನು. ಆ ಕೂಡಲೇ ನಾರದಮಹಾಮುನೀಶ್ವರನು ದೇವೇಂದ್ರನ ಬಳಿಗೆ ಬಂದು ಏನೆಯ್ತಾ ಇಂದ್ರನೇ ! ನೀನು ಸಕಲ ಧರ್ಮಶಾಸ್ತ್ರಗಳನ್ನೂ ತಿಳಿದು ಬುದ್ದಿವಂತ ನಾಗಿ ಇಂಥ ಅನುಚಿತವಾದ ಕೆಲಸವನ್ನು ಮಾಡಬಹುದೇ ? ಮಹಾಪತಿವ್ರತೆಯ ಸಕಲ ಲೋಕೋಪಕಾರಿಣಿಯೂ ಆದ ಈ ಹಿರಣ್ಯಕಶಿಪುವಿನ ಪಟ್ಟದರಸಿಯನ್ನು ಸೆರೆ ಯಾಗಿ ಹಿಡಿದುಕೊಂಡು ಬಂದುದು ಬಲು ತಪ್ಪಾಯಿತು. ಇದರಿಂದ ನಿನಗೆ ಹಾನಿಯು ತಟ್ಟದೆ ಇರದ, ಮತ್ತು ಈ ಮಹನೀಯಳ ಗರ್ಭದಲ್ಲಿ ಪರಮವೈಷ್ಣವಶಿಖಾಮಣಿಯು ಇದ್ದಾನೆ. ಈತನು ಹುಟ್ಟಿ ಆ ಹಿರಣ್ಯಕಶಿಪುವನ್ನು ಕೊಲ್ಲಿಸಿ ನಿಮ್ಮ ನಿಮ್ಮ ಪದವಿಗಳು ನಿಮಗೆ ಯಥಾಪ್ರಕಾರವಾಗಿ ದೊರೆಯುವ ಹಾಗೆ ಮಾಡಿ ಸರ್ವಲೋಕಗಳನ್ನೂ ಸಂತೋಷಪಡಿಸುವನು. ಆದುದರಿಂದ ಈ ಮಹಾಪತಿವ್ರತಾಶಿರೋಮಣಿಯಾದ ಈಕೆ ಯನ್ನು ನೀನೇ ಹಿಂದಿರುಗಿ ಸುರಕ್ಷಿತವಾಗಿ ಕರೆದುಕೊಂಡುಹೋಗಿ ಆಕೆಯ ಅಂತಃಪು ರದಲ್ಲಿ ಬಿಟ್ಟು ಬಾ ಎಂದು ಹೇಳಿದನು. ತರುವಾಯ ಸುರೇಂದ್ರನು ನಾರದ ಮಹಾ ಮುನಿಯು ಹೇಳಿದ ಮಾತುಗಳಿಗೆ ಒಡಂಬಟ್ಟು ಆಕೆಯನ್ನು ಪಾಲಕಿಯಲ್ಲಿ ಕುಳ್ಳಿರಿಸಿ ಕೊಂಡು ಬಹಳ ಗೌರವದಿಂದ ಶೋಣಿತಪುರಕ್ಕೆ ಕರೆದುಕೊಂಡು ಬಂದು ಆಕೆಯ ಅಂತಃಪುರದಲ್ಲಿ ಬಿಟ್ಟು ಹಿಂದಿರುಗಿ ಹೊರಟು ನಿಜನಗರವಾದ ಅಮರಾವತಿಗೆ ಬಂದನು. ಅಷ್ಟರೊಳಗೆ ದೇವತೆಗಳಿಂದ ಪರಾಜಿತರಾಗಿದ್ದ ಹಿರಣ್ಯಕಶಿಪುವಿನ ಮಂತ್ರಿಗಳು ಮಹಾ ಭಯವ್ಯಸನಗಳಿಂದ ಕೂಡಿದವರಾಗಿ ಹಿಮವತ್ಪರ್ವತಕ್ಕೆ ಓಡಿಹೋಗಿ ಅಲ್ಲಿ ತಪಸ್ಸನ್ನು ಮಾಡುತ್ತಿರುವ ನಿಜಸ್ವಾಮಿಯಾದ ಹಿರಣ್ಯಕಶಿಪುವನ್ನು ಕಂಡು ಮಹಾ ವ್ಯಸನದಿಂದ ಕಡಿಮೋಸಗಾರರೂ ದುಷ್ಟರೂ ಆದ ದೇವತೆಗಳು ಸಮರಾತ್ರಿಯಲ್ಲಿ ಬಂದು ನಮ್ಮನ್ನೆಲ್ಲಾ ಜಯಿಸಿ ಅಂತಃಪುರವನ್ನು ಹೊಕ್ಕು ಪಟ್ಟದರಸಿಯನ್ನು ಕೈಸೆರೆ ಹಿಡಿದು, ಕೊಂಡು ಹೋದರು ಎಂದು ಹೇಳಿ ದುಃಖಿಸಲು ಆಗ ಹಿರಣ್ಯಕಶಿಪುವು ಪ್ರಳಯ ಕಾಲದ ಭೈರವನಂತೆ ರೌದ್ರಾಕಾರಧರನಾಗಿ ಸಮಸ್ತ ದೇವಸಮೂಹವನ್ನೂ ಕ್ಷಣ ಕಾಲದಲ್ಲಿ ಸುಟ್ಟು ಬೂದಿಮಾಡಿ ಹಣೆಗೆ ಹತ್ತಿಸಿಕೊಳ್ಳುವೆನು, ಚತುರ್ದಶಭುವನ ಗಳನ್ನೂ ಹಿಡಿದು ತಿಕ್ಕಿ ಮುಕ್ಕಿಬಿಡುವೆನು ಎಂದು ಗರ್ಜಿಸುತ್ತ ನಿಜನಗರವಾದ