ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 237 ಆನಂತರದಲ್ಲಿ ಅದನ್ನು ನೋಡಿ ಶುಕ್ರಾಚಾರ್ಯನು-ಈ ಹುಡುಗನು ಯಾಕೆ ಹೀಗೆ ಮೊಂಕಾದನು ? ಎಷ್ಟು ವಿಧದಿಂದ ಹೇಳಿದಾಗ ಸ್ವಭಾವವನ್ನು ಬಿಡಲಿಲ್ಲ. ಇದಕ್ಕೇನು ಕಾರಣವಿರಬಹುದು ? ಒಳ್ಳೆಯದು, ಹಸಿದನೋ ಏನೋ ? ಉಂಡು ಬರಲಿ ಎಂದು ಯೋಚಿಸಿ ಜೊತೆಯ ಹುಡುಗರನ್ನು ಕರೆದು ಈ ಹುಡುಗನು ಹಸಿದಿರು ವನು. ಇವನನ್ನು ಕರೆದು ಕೊಂಡು ಹೋಗಿ ಮನೆಯಲ್ಲಿ ಬಿಟ್ಟು ಬನ್ನಿರಿ ಎಂದು ಹೇಳಿ ಕಳುಹಿಸಲು ಆಗ ಹರಿಭಕ್ತನಾದ ಪ್ರಹ್ಲಾದನು ಕಾಲು ಗೆಜ್ಜೆ ಗಳು ಉಲಿಯುತ್ತಿರಲು ಕೆಂಪಗಿರುವ ಮುಂಗೂದಲುಗಳು ಕುಣಿಯುತ್ತಿರಲು ಮಾಗಾಯಿ ಹುಲಿಯುಗುರು ಗಳು ಒಲೆದಾಡುತ್ತಿರಲು ನಳಿತೋಳುಗಳನ್ನು ಬೀಸುತ್ತ ನೋಡುವವರ ಮನಸ್ಸಿಗೆ ಆನಂದವನ್ನು ಬೀರುತ್ತ ನೋಟಗಳಿಂದ ಸರ್ವರಿಗೂ ಆಹ್ವಾದವನ್ನುಂಟುಮಾಡುತ್ತ ಹುಡುಗರ ಜೊತೆಯಲ್ಲಿ ಬರುತ್ತಿರುವುದನ್ನು ಹಿರಣ್ಯಕಶಿಪುವು ದೂರದಿಂದಲೇ ಕಂಡು ಹರ್ಪಾತಿಶಯ ಮನಸ್ಸತ್ವದಿಂದ ರೋಮಾಂಚಕಂಚುಕಿತಾಂಗನಾಗಿ ಮುಂದೆ ತಂದು ಎನ್ನ ಕಂದಾ ! ನನ್ನ ಮದದಾನೆಯೇ ! ನನ್ನ ವಂಶಾಬ್ಲಿ ಸುಧಾಕರನೇ ! ಬಾ, ಬಾ ಎಂದು ಕೈನೀಡಿ ಕರೆದು ಅಪ್ಪಿಕೊಂಡು ಮುದ್ದಿಸಿ ಶಿರಸ್ಸನ್ನು ಆಘ್ರಾಣಿಸಿ ಸ್ವಲ್ಪ ಕಾಲದ ವರೆಗೂ ಪುತ್ರಾಲಿಂಗನ ಸುಖವನ್ನನುಭವಿಸುತ್ತ ಇದ್ದು ಆ ಮೇಲೆ ಅವನನ್ನು ಕುರಿತು-ಗುರುಗಳು ನಿನಗೆ ಏನೇನು ಹೇಳಿಕೊಟ್ಟರು? ನೀನು ಏನೇನು ಕಲಿತು ಬಂದಿ ಹೇಳು. ನೋಡೋಣ ಎಂದು ಸಂತೋಷದಿಂದ ಕೇಳಲು ಆಗ ಪ್ರಹಾ ದನು-ಹರಿಯೇ, ಹರಿಯೇ ! ರಕಿಸು, ರಕಿಸು ಎಂದು ಬರೆದು ಓದಲು ಆಗ ಹಿರಣ್ಯಕಶಿಪುವು ಹರಿಶ ಬ್ಲೊಚ್ಚಾರಣೆಯನ್ನು ಕೇಳಿ ಬೆಚ್ಚಿ ಭಯದಿಂದ ಕೂಡಿ ಬಾಲಕನಾದ ಇವನಿಗೆ ಕಪ ಟಿಯಾದ ಹರಿನಾಮೋಚ್ಛಾರಣೆಯು ಎಲ್ಲಿಂದ ಬಂದಿತು ? ಇದನ್ನು ಕಲಿಸಿಕೊಟ್ಟವ ರಾರು ಎಂದು ಯೋಚಿಸಿ ಏನೋ ಶಿಶುತ್ವಚಾಪಲ್ಯದಿಂದ ಎಲ್ಲೊ ಅಕಸ್ಮಾತ್ತು ಕಿವಿಗೆ ಬಿದ್ದ ಶಬ್ದವನ್ನೇ ಸ್ಮೃತಿಯಲ್ಲಿಟ್ಟು ಕೊಂಡು ಪೂರ್ವಾಪರ ವಿಚಾರವಿಲ್ಲದೆ ಹೀಗೆ ಹೇಳಿರಬಹುದು. ಇಷ್ಟು ಮಾತ್ರಕ್ಕೆ ತಪ್ಪೇನು ? ಇವನಿಗೆ ಈ ಚಾಪಲ್ಯವನ್ನು ಬಿಡಿಸ ಬೇಕು ಎಂದು ನಿರ್ಧರಿಸಿ ಪುನಃ ಪ್ರಹ್ಲಾದನನ್ನು ಕುರಿತು-ಎಲೈ, ಕುಲದೀಪಕನಾದ ಪುತ್ರನೇ ! ನೀನಾರು ? ಕಪಟಿಯಾದ ಹರಿಯಾರು ? ಆ ದುಷ್ಟನೂ ನೀಚನೂ ಆದ ಹರಿಯು ನಮಗೆ ಜನ್ನ ವಿರೋಧಿಯು, ಅವನು ಮೊದಲು ದೇವತೆಗಳ ಮಾತುಗಳನ್ನು ಕೇಳಿ ಹಂದಿಯ ರೂಪವನ್ನು ಧರಿಸಿ ಬಂದು ನಿನ್ನ ಚಿಕ್ಕಪ್ಪನಾದ ಹಿರಣ್ಯಾಕ್ಷನನ್ನು ಕೊಂದುಹಾಕಿದ ದುರಾತ್ಮನು. ಅಂಥ ವಂಚಕನನ್ನು ಹೊಗಳುವುದು ನಮಗೆ ಎಂದಿಗೂ ಉಚಿತವಲ್ಲ. ಅದು ಕಾರಣ ಹಾಗೆ ಹೇಳಬೇಡಪ್ಪಾ ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ಪ್ರಹ್ಲಾದನು-ಎಲೆ ತಂದೆಯೇ ! ಕೇಳು, ಮಹನೀ ಯನಾದ ಹರಿಯಲ್ಲಿ ಇವರು ಹಗೆಗಳು, ಇವರು ಮಿತ್ರರು, ಇವರು ಬಂಧುಗಳು ಎಂಬ ಭೇದವೇನೂ ಇರುವುದಿಲ್ಲ. ಆತನು ಸರ್ವಪ್ರಾಣಿಗಳಲ್ಲೂ ಏಕಪ್ರಕಾರವಾದ ದಯೆ ಯುಳ್ಳವನು. ಆತನು ವಿರೋಧದಿಂದ ನಿನ್ನ ತಮ್ಮ ನನ್ನು ಕೊಂದುಹಾಕಿದನೆಂದೂ ನಿನಗೆ ಹಗೆಯಾಗಿರುವನೆಂದೂ ಎಂದಿಗೂ ಯೋಚಿಸಬೇಡ, ತನ್ನ ಪುರಾಕೃತಪಾಪಫಲ