ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 241 ಅವನಿಲ್ಲದ ಸ್ಥಳವು ಎಲ್ಲೂ ಇಲ್ಲ ಎನ್ನಲು ಅಗ ಹಿರಣ್ಯಕಶಿಪುವು-ಹಾಗಾದರೆ ನಿನ್ನ ಹರಿಯನ್ನು ಈ ನನ್ನ ಚಾವಡಿಯ ಉಕ್ಕಿನ ಕಂಬದಲ್ಲಿ ತೋರಿಸಿದರೆ ಸರಿ. ಇಲ್ಲದಿ ೯ರೆ ಅಜ್ಞಾನಿಯಾದ ನಿನ್ನನ್ನು ಈ ಕ್ಷಣದಲ್ಲೇ ತುಂಡು ತುಂಡಾಗಿ ಕತ್ತರಿಸಿ ನಿನ್ನ ಶರೀರವನ್ನು ನಾಯ್ಕ ರಿಗಳಿಗೆ ಆಹಾರವನ್ನಾಗಿ ಮಾಡುವೆನು ಎಂದು ಹೇಳುತ್ತ ನಾನಾ ಪ್ರಕಾರವಾಗಿ ಪ್ರಹ್ಲಾದನನ್ನು ಬಾಧಿಸುತ್ತಿದ್ದನು. ಆಗ ಮಹಾವಿಷ್ಣುವು ನಿಜಭಕ್ತ ನಾದ ಪ್ರಹ್ಲಾದನಿಗಾಗುತ್ತಿರುವ ಹಿಂಸೆಯನ್ನು ನೋಡಿ ಸಹಿಸಲಾರದೆ ಆ ಹಿರಣ್ಯಕಶಿ ಪುವಿಗೆ ಮೊದಲು ಚತುರ್ಮುಖನು ಕೊಟ್ಟಿದ್ದ ವರವು ವ್ಯರ್ಥವಾಗದ ಹಾಗೆ ಈ ದುಷ್ಟನನ್ನು ಹೇಗೆ ಕೊಂದುಹಾಕಬೇಕೆಂದು ಯೋಚಿಸಿ ಆಗ ಕಂಠದಿಂದ ಮೇಲಕ್ಕೆ ಸಿಂಹಾಕಾರವೂ ಅಲ್ಲಿಂದ ಕೆಳಗೆ ಮನುಷ್ಕಾ ಕಾರವೂ ಉಳ್ಳ ತ್ರಿಲೋಕಭಯಂಕರ ವಾದ ನರಸಿಂಹ ರೂಪವನ್ನು ಧರಿಸಿ ಆ ಚಾವಡಿಯು ಉಕ್ಕಿನ ಕಂಬವನ್ನು ಕೋಟಿ ಸಿಡಿಲು ಆರ್ಭಟಿಸಿದಂತೆ ಎರಡು ಭಾಗವಾಗಿ ಸೀಳಿ ಹೊರಗೆ ಬಂದು ನಿಲ್ಲಲು ಆ ರಭ ಸಕ್ಕೆ ಹಿರಣ್ಯಕಶಿಪುವು ಹೆದರಿ ಕೆಳಕ್ಕೆ ಬಿದ್ದು ಮೂರ್ಛಿತನಾದನು. ಅಲ್ಲಿಂದ ಅಸಂಖ್ಯಾ ತವಾದ ರಾಕ್ಷಸಬಲದೊಳಗೆ ಒಬ್ಬನಾದರೂ ಉಳಿಯದೆ ನರಸಿಂಹನ ಉಗ್ರ ತೇಜಸ್ವಿ ನಿಂದ ಸುಟ್ಟು ಭಸ್ಮಿಭೂತರಾಗಿ ಹೋದರು. ಆಗ ಪ್ರಹ್ಲಾದನು ಮುಂದೆ ಬಂದು ಭಯಭರಿತಭಕ್ತಿಯಿಂದ ನರಸಿಂಹನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಎದ್ದು ಕೈ ಮುಗಿದು ನಿಂತು ಕೊಂಡು ಅನೇಕ ವಿಧವಾಗಿ ಸ್ತೋತ್ರಮಾಡುತ್ತಿದ್ದನು. ಅನಂತರ ದಲ್ಲಿ ನರಸಿಂಹನು ಹಗಲಿರುಳಲ್ಲದ ಮುಚ೦ದೆಯ ವೇಳೆಯಲ್ಲಿ ಆ ಹಿರಣ್ಯಕಶಿಪು ವನ್ನು ಎತ್ತಿಕೊಂಡು ಒಳಗೂ ಹೊರಗೂ ಅಲ್ಲದ ಹೊಸ್ತಿಲ ಮೇಲೆ ಕೂತುಕೊಂಡು ಆಕಾಶವೂ ಭೂಮಿಯ ಅಲ್ಲ ದ ತನ್ನ ತೊಡೆಯ ಮೇಲೆ ಕೆಡಹಿಕೊಂಡು ಯಾವ ಆಯುಧಗಳೂ ಅಲ್ಲದ ತನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಬಗೆದು ಕರು ಳುಗಳನ್ನು ತೆಗೆದುಕೊಂಡು ತುಲಸೀಮಾಲೆಗಳಂತೆ ತನ್ನ ಕೊರಳಿಗೆ ಹಾಕಿಕೊಂಡು ಅತ್ಯುಗ್ರವಾದ ತನ್ನ ನರಸಿಂಹರೂಪದಿಂದ ಒಪ್ಪಿದನು. ಆ ಸಮಯದಲ್ಲಿ ನರಸಿಂಹನು ಅತ್ಯಂತ ಕೋಪಾವೇಶದಿಂದ ರೌದ್ರಾಕಾರವು ಇವನಾಗಿ ಕೋಪಾಗ್ನಿಯಿಂದ ಮೂರು ಲೋಕಗಳನ್ನೂ ಸುಡುತ್ತ ಇದ್ದಾಗ್ಯೂ ಶಾಂತನಾಗದೆ ಇರಲು ಆಗ ಬ್ರಹ್ಮಾದಿ ದೇವತೆಗಳೆಲ್ಲಾ ವ್ಯಸನಾಕ್ರಾಂತರಾಗಿ ಒಂದು ಗೂಡಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ ನರಸಿಂಹನ ಬಳಿಗೆ ಕಳುಹಿಸಲು ಆ ಕೂಡಲೆ ಲಕ್ಷ್ಮಿ ದೇವಿಯು ಬಂದು ತಾನೂ ಕೂಡ ಭಯಂಕರಾಕಾರಧರನಾದ ನರಸಿಂಹನ ಬಳಿಗೆ ಹೋಗುವುದಕ್ಕೆ ಭಯಪಟ್ಟು ಪರಮಭಕ್ತನಾದ ಪ್ರಹ್ಲಾದನನ್ನು ಮುಂದುಮಾಡಿಕೊಂಡು ಮೆಲ್ಲ ಮೆಲ್ಲನೆ ಹೋಗಿ ನರಸಿಂಹನ ಮುಂದೆ ನಿಲ್ಲಲು ಆತನು ಅವರಿಬ್ಬರನ್ನೂ ನೋಡಿ ಶಾಂತನಾಗಿ ಅವರನ್ನು ಬರಸೆಳೆದು ತನ್ನೆರಡು ತೊಡೆ ಗಳ ಮೇಲೆ ಕುಳ್ಳಿರಿಸಿಕೊಂಡನು. ಆಗ ಬ್ರಹ್ಮಾದಿ ದೇವತೆಗಳು ಸಂತೋಷದಿಂದ ನರಸಿಂಹನ ಮೇಲೆ ಹೂಮಳೆಗರೆದು ಸನ್ನಿಧಿಗೆ ಒಂದು ಸಾಷ್ಟಾಂಗನಮಸ್ಕಾರ ವನ್ನು ಮಾಡಿ ಬಹು ವಿಧದಿಂದ ಸ್ತುತಿಸಿದರು. ಅನಂತರದಲ್ಲಿ ನರಸಿಂಹಮೂರ್ತಿಯು 16