ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 243

  • -ಶದ ಸರ್ವಜನರೂ ಪರಮಭಕ್ತಿಯಿಂದ ಕೂಡಿ ಮಹಾವಿಷ್ಣುವನ್ನೇ ಆರಾಧಿಸುವಂ ತೈ ಸರ್ವರಿಗೂ ಕಟ್ಟು ಮಾಡಿಸಿ-ನೀವು ಧರ್ಮಿಷ್ಟರಾಗಿ ವಿಚಾರಿಸಿಕೊಳ್ಳುತ್ತ ಸತ್ಯ ದಿಂದಿರಿ ಎಂದು ಆ ಮಂತ್ರಿಗಳಿಗೆ ಹೇಳಿ ತಾನು ಹಿಮವತ್ಪರ್ವತಕ್ಕೆ ಹೋಗಿ ಅಲ್ಲಿ ಸರ್ವಲೋಕಪಿತಾಮಹನಾದ ಬ್ರಹ್ಮದೇವನನ್ನು ಕುರಿತು ಅನೇಕ ಸಂವತ್ಸರಗಳ ವರೆಗೂ ಕಠಿಣತರವಾದ ತಪಸ್ಸನ್ನು ಮಾಡಿದುದರಿಂದ ಹಿರಣ್ಯಗರ್ಭನು ಮೆಚ್ಚಿ ಆತನ ಬಳಿಗೆ ಬಂದು-ಎಲೆ ಸುಶೀಲನಾದ ಬಲಿಯೇ ! ನಾನು ನಿನ್ನ ತಪಸ್ಸಿಗೆ ಮೆಚ್ಚಿ ದೆನು, ನಿನಗೆ ಬೇಕಾದ ವರಗಳನು ಬೇಡಿಕೊ, ಕೊಡುವೆನು ಎಂದು ಹೇಳಲು ಆಗ ಒಲಿಯು ಆತನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ ಭಯಭಕ್ತಿಯಿಂದ ಕೈಮುಗಿದು ನಿಂತು ಕೊಂಡು ಸ್ವಾಮಿಾ, ಜಗತ್ನರ್ತನೇ ! ಮೊದಲು ನನಗೆ ಎಂಥ ಎಡರು ಬಂದ ಕಾಲ ದಲ ಮಹಾವಿಷ್ಣುವಿನಲ್ಲಿ ಅಚಂಚಲವಾದ ಭಕ್ತಿಯ ಧರ್ಮದಲ್ಲಿ ಬುದ್ದಿಯ ಸ್ವಲ್ಪವಾದರೂ ತಪ್ಪದ ಹಾಗೆ ಕೊಡತಕ್ಕ ವರ ಒಂದು. ನಾನು ಆಳುವ ರಾಜ್ಯಗ. ಇಲ್ಲಿ ಸಕಲ ಪ್ರಜೆಗಳೂ ಸಂತತಿ ಸಂಪತ್ತುಗಳಿಂದ ಕೂಡಿ ಸದಾ ಸಂತೋಷಚಿತ್ತರಾಗಿ ರುವ ಹಾಗೆ ಕೊಡಬೇಕಾದ ವರ ಒಂದು. ನಾನು ಸ್ಥಿರಜೀವಿಯಾಗಿರತಕ್ಕ ವರ ಒಂದು. ಸಕಲ ದೇವತೆಗಳೂ ದಾನವರೂ ಮತ್ತು ಯಕ್ಷ ಗರುಡಗಂಧರ್ವ ಕಿನ್ನ ರೋ ರಗರೇ ಮುಂತಾದವರಲ್ಲಿರುವ ಸಕಲ ಮಂತ್ರಾಸ್ತ್ರಗಳೂ ವೈಷ್ಣವಪಾಶುಪತಬ್ರಹ್ಮಾ ಸ್ವಗಳೂ ನನಗೆ ಸಿದ್ಧಿಸುವಂತೆ ಅನುಗ್ರಹಮಾಡುವ ವರ ಒಂದು. ಇವುಗಳನ್ನು ನನಗೆ ದಯಪಾಲಿಸಬೇಕೆಂದು ದೀನತೆಯಿಂದ ಬೇಡಿಕೊಳ್ಳಲು ಬ್ರಹ್ಮ ದೇವನು ಬಹಳವಾಗಿ ಸಂತೋಷಿಸಿ---ಎಲೈ ಮಗನೇ ! ನಿನ್ನ ಸುಗುಣಗಳಿಗೆ ನಾನು ಬಹಳವಾಗಿ ಮೆಚ್ಚಿ ದೆನು. ನೀನು ಕೇಳಿಕೊಂಡ ನಾಲ್ಕು ವರಗಳನ್ನೂ ಸಂತೋಷದಿಂದ ನಿನಗೆ ಕೊಟ್ಟಿ ದೇನೆ. ಅವಿಚ್ಛಿನ್ನವಾದ ಸುಖದಿಂದ ಬಾಳು ಎಂದು ಆತನ ತಲೆಯ ಮೇಲೆ ಕೈಯಿಟ್ಟು ಹರಸಿ ಹಂಸೆಯನ್ನೇರಿ ಸತ್ಯಲೋಕಕ್ಕೆ ಹೊರಟುಹೋದನು.

ಆನಂತರದಲ್ಲಿ ಬಲಿಯು ಸಂತೋಷದಿಂದ ಕೂಡಿದವನಾಗಿ ನಿಜನಗರವಾದ ಶೋಣಿತಪುರಕ್ಕೆ ಬಂದು ಆಚಾರ್ಯನಾದ ಶುಕ್ರಾಚಾರ್ಯನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿ ಷೋಡಶೋಪಚಾರಗಳಿಂದ ಪೂಜಿಸಿ ತಾನು ತಪಸ್ಸಿನಿಂದ ಬ್ರಹ್ಮನನ್ನು ಮೆಚಿ ಸಿ ಆತನಿಂದ ಪಡೆದು ಕೊಂಡು ಬಂದ ನಾಲ್ಕು ವರಗಳ ವಿವರಗಳನ್ನು ಕ್ರಮ ವಾಗಿ ಬಿನ್ನವಿಸಿ-ಸ್ಮಾಮಿಾ ! ನಾನು ಇಲ್ಲಿಂದ ಮುಂದೆ ಮಾಡಬೇಕಾದ ಕಾರ್ಯ ವೇನು ? ಅಪ್ಪಣೆಯಾಗಬೇಕು ಎಂದು ಕೇಳಲಾಗಿ ಆಗ ಸಂತುಷ್ಪಾಂತರಂಗನಾದ ಶುಕ್ರಾಚಾರ್ಯನು ಎಲೈ ಸುಗುಣಾಭರಣಭೂಷಿತನಾದ ಬಲಿಯೇ ! ನೀನು ಅನ್ಯಾ ದೃಶವಾದ ತಪಸ್ಸಿನಿಂದ ಇಂಥ ಅಮೋಘವಾದ ವರಗಳನ್ನು ಪಡೆದ ಮೇಲೆ ನೀನೇ ತ್ರಿಲೋಕಾಧಿಪತಿಯಾಗಿರಬೇಕೇ ಹೊರತು ಇಂಥ ಅನನ್ಯಸಾಧಾರಣಶೌರ್ಯಧುರಂಧ ರನಾದ ನಿನ್ನ ಮುಂದೆ ಅಲ್ಪಬಲನಾದ ದೇವೇಂದ್ರನು ತ್ರಿಲೋಕಾಧಿಪತಿಯಾಗಿರು ವುದೂ ನೀನು ಅವನ ಅಧೀನದಲ್ಲಿರುವ ಕೆಲವು ದೇಶಗಳಿಗೆ ಮಾತ್ರ ಅರಸನೆನ್ನಿಸಿಕೊಂಡಿ ರುವುದೂ ನಿನ್ನ ಯೋಗ್ಯತೆಗೆ ಬಹಳ ನ್ಯೂನತೆಯಾಗಿರುವುದು. ಇದರಿಂದ ನೀನು