ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 247 ರಕ್ಕೆ ಬಂದು ಮೊದಲು ಶುಕ್ರಾಚಾರ್ಯರನ್ನು ಕಂಡು ಅವರಿಂದ ಪೂಜಿತನಾಗಿ ಅವ ವನ್ನು ಸಂಗಡ ಕರೆದು ಕೊಂಡು ಬಲಿಯ ಬಳಿಗೆ ಬರಲು ಆತನು ಇವರು ಬರುವುದನ್ನು ಕಂಡು ಸಿಂಹಾಸನದಿಂದ ಝಗ್ಗನೆದ್ದು ಎದುರಾಗಿ ಬಂದು ಬೃಹಸ್ಪತ್ಯಾಚಾರರನ್ನು ವಂದಿಸಿ ಕೈಹಿಡಿದು ಕರೆದು ಕೊಂಡು ಬಂದು ನವರತ್ನ ಖಚಿತವಾದ ಚಿನ್ನದ ಕಾಲ್ಕ ಣೆಯ ಮೇಲೆ ಕುಳ್ಳಿರಿಸಿ ಸಂತೋಷದಿಂದ ಕೂಡಿ ಷೋಡಶೋಪಚಾರಗಳಿಂದ ಪೂಜಿಸಿ ಕೈಮುಗಿದು ನಿಂತು ಕೊಂಡು ಸ್ವಾಮಿಾ ! ಈ ದಿವಸ ತಾವು ನನ್ನ ಮನೆಗೆ ದಯ ಮಾಡಿಸಿದುದು ಬಡವನ ಮನೆಗೆ ಭಾಗ್ಯನಿಧಿಯು ಬಂದಂತಾಯಿತು. ಮಹಾತ್ಮರಾದ ತಮ್ಮ ಆಗಮನದಿಂದಲೂ ಪುಣ್ಯದಾಯಕವಾದ ತನ್ನ ದರ್ಶನದಿಂದಲೂ ನಾನು ಧನ್ಯ ನಾದೆನು, ಮತ್ತು ಕೃತಕೃತ್ಯನಾದೆನು. ನನ್ನ ಕುಲಕೋಟಿಯೆಲ್ಲಾ ಪಾವನವಾಯಿತು ಎಂದು ವಿವಿಧವಾಗಿ ಕೊಂಡಾಡಿದನು. ಅನಂತರದಲ್ಲಿ ಬೃಹಸ್ಪತಾಚಾರನು ಬಲಿ ಯನ್ನು ಕುರಿತು-ಎಲೈ ದೈತ್ಯರಾಜೇಂದ್ರನೇ ! ನಿನ್ನ ಸುಗುಣಗಳಿಗೂ ನಿನ್ನ ಸತ್ತಾ ರಕ್ಕೂ ನಾನು ಸಂತುಷ್ಟನಾದೆನು. ಇಂದ್ರನು ನೀತಿಸಂಪನ್ನನಾದ ನಿನ್ನ ಸಾಮೋಗ ಳಿಗೆ ವಿಶೇಷವಾಗಿ ಸಂತೋಷಪಟ್ಟು ತನ್ನ ಹೆಂಡತಿಯಾದ ಶಚೀದೇವಿಯನ್ನೂ ಪತ್ರ ನಾದ ಜಯಂತನನ್ನೂ ಜತೆಯಲ್ಲಿ ಕರೆದುಕೊಂಡು ಇಂದ್ರಪದವಿಗೆ ಉಚಿತವಾದ ಸಕ ಲೈಶ್ವರ್ಯವನ್ನೂ ನಿನಗೋಸ್ಕರ ಬಿಟ್ಟು ಹೊರಟು ಈ ಸಂಗತಿಯನ್ನು ನಿನಗೆ ತಿಳಿಸು ವಂತೆ ನನ್ನನ್ನು ಇಲ್ಲಿಗೆ ಕಳುಹಿಸಿ ಹೋದನು ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ದೈತ್ಯರಾಜನಾದ ಬಲಿಯು ಸಂತುಷ್ಟನಾಗಿ ಸಕಲ ದೈತ್ಯಬಲದೊಡನೆ ಕೂಡಿ ಗುರು ಶುಕ್ರರನ್ನೂ ಸಂಗಡ ಕರೆದುಕೊಂಡು ಅತಿ ಸಂಭ್ರಮದಿಂದ ಅಮರಾವತಿಗೆ ಬಂದನು. ಅನಂತರದಲ್ಲಿ ಬೃಹಸ್ಪತ್ಯಾಚಾರರು ಅಗ್ನಿ ಯೇ ಮೊದಲಾದ ದಿಗೀಶರನ್ನೂ ವಸುಗಳು ಮರುತ್ತುಗಳು ಆದಿತ್ಯರು ಇವರೇ ಮೊದಲಾದ ಸರ್ವ ದೇವತೆಗಳನ್ನೂ ಯಕ ಕಿನ್ನರ ಕಿಂಪುರುಷ ಗರುಡ ಗಂಧರ್ವ ಅಪ್ಪರೋರಗರೇ ಮುಂತಾದವರನ್ನೂ ಕರಿಸಿ ಸುಮುಹೂರ್ತದಲ್ಲಿ ಸುಧರ್ಮಾನಾಮಕವಾದ ಮಹಾ ಸಭೆಯಲ್ಲಿ ಪರಿಶೋಭಿಸುತ್ತಿ ರುವ ದಿವ್ಯ ಸಿಂಹಾಸನಾಗ್ರದಲ್ಲಿ ಬಲಿಯನ್ನು ಕುಳ್ಳಿರಿಸಿ ತ್ರಿಲೋಕಾಧಿಪತ್ಯಚಿತವಾದ ಪಟ್ಟಾಭಿಷೇಕವನ್ನು ಮಾಡಿ ಬಲೀಂದ್ರನೆಂದೂ ಬಲಿಚಕ್ರವರ್ತಿ ಎಂದೂ ಹೆಸರು ಕೊಟ್ಟು ಆಶೀರ್ವಾದವನ್ನು ಮಾಡಿದನು. ಆ ಬಳಿಕ ಸರ್ವರೂ ಬಂದು ಬಲಿಚಕ್ರವರ್ತಿಗೆ ಕೈಗಾ ಣಿಕೆಗಳನ್ನು ಕೊಟ್ಟು ಕಾಣಿಸಿಕೊಂಡರು. ಆಗ ತ್ರಿಭುವನಾಧಿಪತ್ಯಾತಿಸಂತುಷ್ಟನಾದ ಬಲೀಂದ್ರನು ವಶಿಷ್ಠಾದಿ ಬ್ರಹ್ಮರ್ಷಿಗಳಿಗೂ ನಾರದಾದಿ ದೇವರ್ಷಿಗಳಿಗೂ ರಾಜರ್ಷಿಗ ಳಿಗೂ ಸಮಸ್ತ ದಿಕ್ಷಾಲಕರೇ ಮೊದಲಾದವರಿಗೂ ಯಥಾಯೋಗ್ಯವಾಗಿ ದಿವ್ಯಭೋ ಜನಧನಕನಕವಸ್ತ್ರಾಭರಣ ಗಂಧಮಾಲ್ಯಾದಿಗಳಿಂದ ಸತ್ಕಾರವನ್ನು ಮಾಡಿಸಿ ಸಂತೋ ಷಪಡಿಸಿ ಸರ್ವಸಮ್ಮತಿಯಿಂದ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರು ಲೋಕಗಳ ಲ್ಲಿಯ ಎಳ್ಳನೆಯಷ್ಟಾದರೂ ಅಧರ್ಮವು ನಡೆಯದಂತೆಯ ಧರ್ಮವು ನಾಲ್ಕು ಕಾಲುಗಳನ್ನು ಊರಿ ನಿರರ್ಗಳವಾಗಿ ಸಂಚರಿಸುವಂತೆಯ ಸರ್ವರೂ ಎಷ್ಟು ವಿನಲ್ಲಿ