ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಕಥಾಸಂಗ್ರಹ-೫ ನೆಯ ಭಾಗ ಸ್ವರ್ಗವನ್ನು ಬಿಟ್ಟು ಹೊರಟು ಎಲ್ಲೋ ಹೋದನು. ಮಹಾವಿಷ್ಣುವಿನಿಂದ ನಿಯ ಮಿತವಾದ ನಿನ್ನ ಮಗನ ಇಂದ್ರಪದವಿಯು ಅನ್ಯಾಕ್ರಾಂತವಾದ ಮೇಲೆ ಈ ಜಗ ತಿನಲ್ಲಿ ಇನ್ನಾವುದು ತಾನೆ ನೆಲೆಯಾಗಿ ನಿಲ್ಲುವುದೆಂದು ನಂಬಬಹುದು ? ನೀನು ಸರ್ವ ಜ್ಞನು, ನೀನು ತಿಳಿಯದೆ ಇರುವುದು ಮೂರು ಲೋಕಗಳಲ್ಲಿ ಯಾವುದುಂಟು ಎಂದು ಹೇಳಿ ತಿರುಗಿ ಗಂಡನ ಕಾಲುಗಳ ಮೇಲೆ ಬಿದ್ದು ದುಃಖಿಸುತ್ತ ಹೊರಳುತ್ತಿ ರಲು ಆಗ ಕಶ್ಯಪನು- ಎಲೈ ಪ್ರಾಣಪ್ರಿಯೆಯಾದ ಅದಿತಿಯೇ ! ನೀನು ಇದಕ್ಕಾಗಿ ಭಯಪಡಬೇಡ. ನಿನ್ನ ಮಗನಿಗೆ ಇಂದ್ರ ಪದವಿಯು ಯಥಾಪ್ರಕಾರವಾಗಿ ಉಂಟಾ ಗುವಂತೆ ಮಾಡುವೆನು ಎಂದು ಹೇಳಿ ಆಕೆಗೆ ಅಭಯವನ್ನು ಕೊಟ್ಟು ಆಕೆಯನ್ನೂ ಜೊತೆಯಲ್ಲಿ ಕರೆದು ಕೊಂಡು ಅಲ್ಲಿಂದ ಹೊರಟು ಸಿದ್ಧಾ ಶ್ರಮವೆಂಬ ಒಂದು ಪ್ರಣಾ ಶ್ರಮಕ್ಕೆ ಒಂದು ಅಲ್ಲಿ ತಾನು ಶುಚಿರ್ಭೂತನಾಗಿ ಮಹಾವಿಷ್ಣುವನ್ನು ಕುರಿತು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಏಕಾಗ್ರಚಿತ್ತದಿಂದ ಕೂಡಿ ತಪಸ್ಸನ್ನು ಮಾಡುತ್ತ ಇದ್ದನು. ಆ ಕಾಲದಲ್ಲಿ ಅದಿತಿದೇವಿಯು ಶುಚಿರ್ಭೂತಳಾಗಿ ನಿರಂತರದಲ್ಲೂ ಪತಿಶು ಕ್ರೂಷೆಯನ್ನು ಮಾಡಿಕೊಂಡಿರುತ್ತಿದ್ದಳು. ಹೀಗಿರುತ್ತಿರಲು ಕ್ಷೀರಸಮುದ್ರದಲ್ಲಿ ಶೇಷಶಾಯಿಯಾದ ಮಹಾವಿಷ್ಣುವು ತನ್ನ ಪ್ರಾಣಪ್ರಿಯೆಯಾದ ಲಕ್ಷ್ಮಿದೇವಿಯನ್ನು ಕುರಿತು-ಎಲೈ ದೇವಿಯೇ ! ನನಗೆ ಪರಮಭಕ್ತನಾದ ಬಲೀಂದ್ರನು ನನ್ನಿಂದ ಶಚೀಪತಿಗೆ ನಿಯಮಿತವಾದ ಸ್ವರ್ಗಾಧಿಪತ್ಯವ ನ್ನು ಕಿತ್ತುಕೊಂಡು ಆತನನ್ನು ಸ್ವರ್ಗಲೋಕದಿಂದ ಓಡಿಸಿದ್ದಾನೆ. ಅದು ಕಾರಣ ಆ ಇಂದ್ರನ ತಂದೆಯಾದ ಕಶ್ಯಪನು ತಿರಿಗಿ ಬಲಿಯಿಂದ ಸ್ವರ್ಗಾಧಿಪತ್ಯವನ್ನು ಕಿತ್ತು ತನ್ನ ಮಗನಿಗೆ ಕೊಡಿಸುವುದಕ್ಕೋಸ್ಕರ ನನ್ನನ್ನು ಕುರಿತು ಮಹಾನಿಯಮದಿಂದ ಉಗ್ರ ತಪಸ್ಸನ್ನು ಮಾಡುತ್ತಿದ್ದಾನೆ. ಈಗೆ ಇಂಧ ಅನಿವಾರ್ಯ ಕಾರ್ಯವು ಸಂಘಟಿಸಿದೆ. ಇದಕ್ಕೆ' ಏನುಪಾಯವನ್ನು ಮಾಡಬೇಕು ಎಂದು ಕೇಳಲು ಆಗ ಮಹಾಲಕ್ಷ್ಮಿಯು ಸ್ವಲ್ಪ ಯೋಚಿಸಿ- ಎಲೈ ಪ್ರಾಣವಲ್ಲಭನೇ ! ನೀನು ಮಹಾ ಮಾಯಾವಂತನು, ಏನೂ ಅರಿಯದವನ ಹಾಗೆ ಈ ರೀತಿಯಾಗಿ ನನ್ನನ್ನು ಕೇಳುತ್ತಿರುವಿ. ಸರ್ವಜ್ಞನಾದ ನೀನರಿ ಯದಿರುವ ತಂತ್ರೋಪಾಯಗಳನ್ನು ಯಾರಾದರೂ ಬಲ್ಲರೇ ? ಸರ್ವಶಕ್ತನಾದ ನೀನು ನೆಂಟು ರತ್ನ ಇವೆರಡೂ ಉಳಿಯುವ ಹಾಗೆ ಮಾಡಿ ನಿನ್ನ ಅಪ್ರತಿಹತವಾದ ಆಜ್ಞೆಗೆ ಭಂಗ ವುಂಟಾಗದಂತೆ ನಡೆ ಎಂದು ಹೇಳಿದಳು. ಮಹಾವಿಷ್ಣು ವು ಆ ಮಾತುಗಳನ್ನು ಕೇಳಿ ಮಂದಸ್ಮಿತ ಮನೋಹರವದನನಾಗಿ ಕೂಡಲೆ ಗರುಡಾರೂಢನಾಗಿ ಹೊರಟು ಕಶ್ಯಪ ಮುನಿಯಬಳಿಗೆ ಬಂದು-ಎಲೈ ಮಹಾತ್ಮನಾದ ಮುನಿಯೇ ! ಏಕೆ ನನ್ನನ್ನು ಕುರಿತು ತಪಸ್ಸು ಮಾಡುತ್ತಿರುವಿ ? ನನ್ನಿಂದ ನಿನಗೆ ಆಗಬೇಕಾದ ಕಾರ್ಯವಾವುದು ? ಅದನ್ನು ಬೇಗ ಹೇಳು, ಸಂತೋಷದಿಂದ ನಡೆಸಿಕೊಡುವೆನು ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ಕಶ್ಯಪಮುನಿಯು ಸಂತೋಷಯುಕ್ತನಾಗಿ ಮಹಾ ಎಷ್ಟು ವಿಗೆ ದೀರ್ಘದಂಡನಮಸ್ಕಾರವನ್ನು ಮಾಡಿ ಎದ್ದು ನಿಂತು_ಮಹಾತ್ಮನಾದ ನೀನು ಅದಿತಿಯ ಗರ್ಭಸಂಭೂತನಾಗಿ ಇಂದ್ರನೊಡನೆ ಸಹೋದರತ್ವವನ್ನು ಹೊಂದಿ ಉಪೇಂದ್ರನೆನ್ನಿಸಿಕೊಂಡು ಬಲಿಚಕ್ರವರ್ತಿಯು ಕಿತ್ತುಕೊಂಡಿರುವ ಇಂದ್ರ ಪದವಿಯನ್ನು ,